ಪ್ರಧಾನಿ ವಿರುದ್ಧ ಪದ ಬಳಕೆ – ಕಾಂಗ್ರೆಸ್​ ನಾಯಕನಿಗೆ ಮಧ್ಯಂತರ ಜಾಮೀನು ಮಂಜೂರು

ಪ್ರಧಾನಿ ನರೇಂದ್ರ ಮೋದಿ ನಿಂದನಾತ್ಮಕ ಹೇಳಿಕೆ ನೀಡಿರುವ ಆರೋಪ ಎದುರಿಸ್ತಿರುವ ಕಾಂಗ್ರೆಸ್​ ನಾಯಕ ಪವನ್​ ಖೇರಾ ಅವರಿಗೆ ಸುಪ್ರೀಂಕೋರ್ಟ್​​ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಸಹಜ ಜಾಮೀನು ಪಡೆಯಲು ಅರ್ಜಿ ಸಲ್ಲಿಸುವವರೆಗೂ ಮತ್ತು ಆ ಜಾಮೀನು ಅರ್ಜಿ ವಿಚಾರಣೆ ನಡೆಯುವವರೆಗೂ ದೆಹಲಿ ಕೋರ್ಟ್​ ನೀಡುವ ಮಧ್ಯಂತರ ಜಾಮೀನಿನಡಿಯಲ್ಲಿ ಇವತ್ತು ಸಂಜೆ ಬಿಡುಗಡೆಗೊಳಿಸುವಂತೆ

ಸುಪ್ರೀಂಕೋರ್ಟ್​​ ಮುಖ್ಯನ್ಯಾಯಮೂರ್ತಿ ಡಿ ವೈ ಚಂದ್ರಚೂಡ್​, ನ್ಯಾಯಮೂರ್ತಿ ಪಿ ಎನ್​ ನರಸಿಂಹ ಮತ್ತು ನ್ಯಾಯಮೂರ್ತಿ ಎಂ ಆರ್​ ಶಾಹಾ ಅವರ ಪೀಠ ಅಸ್ಸಾಂ ಪೊಲೀಸರಿಗೆ ಸೂಚಿಸಿದೆ.

ಇವತ್ತು ಬೆಳಗ್ಗೆ ರಾಷ್ಟ್ರ ರಾಜಧಾನಿ ದೆಹಲಿಗೆ ಬಂದ ಅಸ್ಸಾಂ ಪೊಲೀಸರು ಇಂಡಿಗೋ ವಿಮಾನದಿಂದ ಇಳಿಸಿ ಪವನ್​ ಖೇರಾ ಅವರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದರು

ರಾಯ್ಪುರದಲ್ಲಿ ಆಯೋಜನೆಗೊಂಡಿರುವ ಎಐಸಿಸಿ ಅಧಿವೇಶನಕ್ಕೆ ಇತರೆ ಕಾಂಗ್ರೆಸ್​ ನಾಯಕರ ಜೊತೆಗೆ ಪವನ್​ ಖೇರಾ ಅವರು ತೆರಳಲು ಸಿದ್ಧರಾಗಿದ್ದರು.

ದೆಹಲಿ ವಿಮಾನನಿಲ್ದಾಣಕ್ಕೆ ಬಂದ ಅಸ್ಸಾಂ ಪೊಲೀಸರು ಕಾಂಗ್ರೆಸ್​ನ ಮಾಧ್ಯಮ ಮತ್ತು ಸಾರ್ವಜನಿಕ ಪ್ರಚಾರ ಸಮಿತಿ ಮುಖ್ಯಸ್ಥ ಖೇರಾ ಅವರನ್ನು ಬಂಧಿಸಿದ್ದರು.

ಅಸ್ಸಾಂ ಮತ್ತು ಉತ್ತರಪ್ರದೇಶದಲ್ಲಿ ದಾಖಲಾಗಿರುವ ಎರಡೂ ಎಫ್​ಐಆರ್​ಗಳನ್ನು ಜೊತೆಗೊಳಿಸಿ ವಿಚಾರಣೆ ನಡೆಸಬೇಕೆಂದು ಪವನ್​ ಖೇರಾ ಮಾಡಿರುವ ಮನವಿ ಬಗ್ಗೆ ಉತ್ತರಿಸುವಂತೆ ಅಸ್ಸಾಂ ಮತ್ತು ಉತ್ತರಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.

LEAVE A REPLY

Please enter your comment!
Please enter your name here