ADVERTISEMENT
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡದಂತೆ ಬೆಂಗಳೂರಿನ 73ನೇ ಹೆಚ್ಚುವರಿ ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದೆ.
ರೋಹಿಣಿ ಸಿಂಧೂರಿ ಸಲ್ಲಿಸಿರುವ ಅರ್ಜಿಯಲ್ಲಿ ಟಿವಿ9 ಕನ್ನಡ ಮೂರನೇ ಪ್ರತಿವಾದಿಯಾಗಿದ್ದಾರೆ. ಆದರೆ ಟಿವಿ9 ಕನ್ನಡ ನ್ಯಾಯಾಲಯದಲ್ಲಿ ಕೇವಿಯಟ್ ಸಲ್ಲಿಸಿದೆ.
ಟಿವಿ9 ಕನ್ನಡ ಹೊರತುಪಡಿಸಿ ಕನ್ನಡ ಉಳಿದ ಸುದ್ದಿವಾಹಿನಿಗಳು, ಪತ್ರಿಕೆಗಳು, ಇಂಗ್ಲೀಷ್ ಮತ್ತು ಹಿಂದಿ ಸುದ್ದಿವಾಹಿನಿ ಮತ್ತು ಇಂಗ್ಲೀಷ್ ಪತ್ರಿಕೆಗಳಿಗೆ ಮಾನಹಾನಿಕರ ಸುದ್ದಿ ಪ್ರಸಾರ ಮಾಡದಂತೆ ನಿರ್ಬಂಧ ಹೇರಲಾಗಿದೆ.
ನಾಗರಿಕ ಕ್ರಿಯಾ ಸಂಹಿತೆ (ಸಿಪಿಸಿ) ಕಾಯಿದೆಯ 148ಎ ಅಡಿಯಲ್ಲಿ ಕೇವಿಯೆಟ್ ಸಲ್ಲಿಸಲು ಅವಕಾಶ ಇದೆ. ತಮ್ಮ ವಿರುದ್ಧ ದಾವೆಗಳನ್ನು ಹೂಡಬಹುದು ಎಂಬ ನಿರೀಕ್ಷೆಗಳಿದ್ದಲ್ಲಿ ಅಂತಹ ದಾವೆ ಆಧರಿಸಿ ತಮ್ಮ ಮೇಲೆ ಆದೇಶ ಕೊಡುವುದಕ್ಕೂ ಮೊದಲು ತಮ್ಮ ಗಮನಕ್ಕೆ ತರಬೇಕೆಂದು ಕೋರಿ ಸಲ್ಲಿಸುವ ಅರ್ಜಿಯೇ ಕೇವಿಯೇಟ್.
ಹೀಗಾಗಿ ನ್ಯಾಯಾಲಯ ಟಿವಿ9ಗೆ ಎಮರ್ಜೆಂಟ್ ನೋಟಿಸ್ ಜಾರಿ ಮಾಡಿದೆ.
ಟಿವಿ9 ಕನ್ನಡಕ್ಕೆ ನೋಟಿಸ್ ಜಾರಿ ಮಾಡಲಾಗಿದ್ದು, ಮಾರ್ಚ್ 7ರೊಳಗೆ ಉತ್ತರಿಸುವಂತೆ ಸೂಚಿಸಿದೆ. 60ನೇ ಪ್ರತಿವಾದಿಯಾಗಿರುವ ಡಿ ರೂಪಾ ಅವರಿಗೂ ಮಾರ್ಚ್ 7ರೊಳಗೆ ಉತ್ತರಿಸಲು ಸೂಚಿಸಲಾಗಿದೆ.
ಉಳಿದ ಪ್ರತಿವಾದಿಗಳಿಗೆ ಮಾರ್ಚ್ 17ರೊಳಗೆ ಉತ್ತರಿಸಲು ಸೂಚಿಸಲಾಗಿದೆ.
ಕೋರ್ಟ್ ಆದೇಶದ ಪ್ರತಿ:
ADVERTISEMENT