1975 ರಲ್ಲಿ ಆಗಿನ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರು ದೇಶದಾದ್ಯಂತ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದರು. ಈ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟ ಮಾಡಿ ಯಾರೆಲ್ಲ ಜೈಲಿಗೆ ಹೋಗಿದ್ದರೀ ಅವರೆಲ್ಲರಿಗೂ ನೂತನ ಪಿಂಚಣೆ ಜಾರಿ ಮಾಡಲಾಗುವುದು ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ಗುರುವಾರ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮುಳ್ಯಮಂತ್ರಿ ಏಕನಾಥ್ ಶಿಂಧೆಯವರ ಜೊತೆ ಪಾಲ್ಗೊಂಡಿದ್ದ ಅವರು, 1975 ರ ತುರ್ತು ಪರಿಸ್ಥಿತಿಯಲ್ಲಿ ಯಾರೆಲ್ಲ ಜೈಲಿಗೆ ಹೋಗಿದ್ದರೋ ಅವರೆಲ್ಲರಿಗೂ ಮಹಾರಾಷ್ಟ್ರ ಸರ್ಕಾರ ಪಿಂಚಣಿ ನೀಡಲಿದೆ. 2018 ರಲ್ಲಿಯೇ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ, ಅಷ್ಟರಲ್ಲಾಗಲೇ ಅವಧಿ ಮುಕ್ತಾಯವಾಗಿತ್ತು ಎಂದು ಹೇಳಿದ್ದಾರೆ.
All those people who went to jail during the 1975 Emergency to be given a pension by the Maharashtra govt. This decision was taken in 2018 but the last govt shut it down: Maharashtra Deputy CM Devendra Fadnavis pic.twitter.com/NzjTJOQRlS
— ANI (@ANI) July 14, 2022
ಆ ಮೂಲಕ ಮಹಾರಾಷ್ಟ್ರ ಸರ್ಕಾರ ಸ್ವಾತಂತ್ರ್ಯಾನಂತರ ನಡೆದ ತುರ್ತು ಪರಿಸ್ಥಿತಿಯಲ್ಲಿನ ಹೋರಾಟಗಾರರಿಗೆ ಪಿಂಚಣೆ ನೀಡಿದ ಮೊದಲ ರಾಜ್ಯವಾಗಲಿದೆ.