ಒಡಿಶಾ ರಾಜ್ಯದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿರುವ ಭೀಕರ ರೈಲು ದುರಂತದಲ್ಲಿ 50 ಮಂದಿ ಮೃತಪಟ್ಟಿದ್ದಾರೆ ಮಾಹಿತಿ ಲಭ್ಯವಾಗಿದೆ.
ಬೆಂಗಳೂರಿನಿಂದ ಹೊರಟ್ಟಿದ್ದ SMVT BENGALURU to Kolkata Howrah ಎಕ್ಸ್ಪ್ರೆಸ್ ರೈಲು (12864) ಮತ್ತು ಶಾಲಿಮಾರ್-ಚೆನ್ನೈ ನಡುವಿನ ಕೋರಮಂಡಲ ಎಕ್ಸ್ಪ್ರೆಸ್ ರೈಲಿನ ನಡುವೆ ಡಿಕ್ಕಿ ಸಂಭವಿಸಿದೆ.
ಮೂರು ರೈಲುಗಳ ನಡುವೆ ಅಪಘಾತ:
ಒಡಿಶಾ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಪ್ರಕಾರ ಎರಡು ಎಕ್ಸ್ಪ್ರೆಸ್ ರೈಲು ಮತ್ತು ಒಂದು ಗೂಡ್ಸ್ ರೈಲು ನಡುವೆ ಅಪಘಾತ ಸಂಭವಿಸಿದೆ.
ಎರಡು ಎಕ್ಸ್ಪ್ರೆಸ್ ರೈಲು ಮತ್ತು ಗೂಡ್ಸ್ ರೈಲು ಒಟ್ಟು ಮೂರು ರೈಲುಗಳ ನಡುವೆ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ 600ಕ್ಕೂ ಅಧಿಕ ರೈಲು ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ. ಸ್ವತಃ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರೇ ರಾಜ್ಯದ ವಿಪತ್ತು ನಿರ್ವಹಣಾ ಕೇಂದ್ರದ ಮುಖ್ಯ ಕಚೇರಿಗೆ ದೌಡಾಯಿಸಿದ್ದು, ಪರಿಹಾರ ಕಾರ್ಯಾಚರಣೆಯ ಮೇಲೆ ನೇರ ನಿಗಾ ವಹಿಸಿದ್ದಾರೆ.
ಐವತ್ತಕ್ಕೂ ಅಧಿಕ ಅಂಬ್ಯುಲೆನ್ಸ್ಗಳು ಮತ್ತು ಬಸ್ಗಳನ್ನು ರವಾನಿಸಲಾಗಿದೆ.
ಆಗಿದ್ದೇನು..?
ಉತ್ತರಪ್ರದೇಶದ ಶಾಲಿಮಾರ್ನಿಂದ ಚೆನ್ನೈಗೆ ಬರುತ್ತಿದ್ದ ಕೋರಮಂಡಲ ಎಕ್ಸ್ಪ್ರೆಸ್ ರೈಲು ಬಾಲೇಸ್ವರ್ನಲ್ಲಿ ಹಳಿ ತಪ್ಪಿ ಪಕ್ಕದ ಹಳಿಗೆ ಬಿತ್ತು. 10-12 ಬೋಗಿಗಳು ಪಕ್ಕದ ಹಳಿಗೆ ಬಿದ್ದವು.
ಇದಾದ ಕೆಲ ಹೊತ್ತಿನ ಬಳಿಕ ಯಶವಂತಪುರ-ಹೌರಾ ನಡುವಿನ ನಡುವಿನ ರೈಲು ಹಳಿ ತಪ್ಪಿ ಬಿದ್ದಿದ್ದ ಬೋಗಿಗಳಿಗೆ ಡಿಕ್ಕಿ ಹೊಡೆದು ಯಶವಂತಪುರ-ಹೌರಾ ನಡುವಿನ ರೈಲಿನ ಮೂರ್ನಾಲ್ಕು ಬೋಗಿಗಳು ಕೂಡಾ ಹಳಿ ತಪ್ಪಿದ್ವು.