ಕಾಂಗ್ರೆಸ್​​ಗೆ ಮೈಸೂರು ಆಘಾತ – SDPIಗೆ ಲಾಭ ಆಗುತ್ತಾ..?

ಕರ್ನಾಟಕ ವಿಧಾನಸಭಾ ಚುನಾವಣೆಯ ಹೊತ್ತಲ್ಲಿ ಕಾಂಗ್ರೆಸ್​​ಗೆ ಆಘಾತ. ಮಾಜಿ ಸಚಿವ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿದ್ದ ತನ್ವೀರ್​ ಸೇಠ್​ ಅವರು ಚುನಾವಣಾ ನಿವೃತ್ತಿ ಘೋಷಿಸಿದ್ದಾರೆ.

ನರಸಿಂಹರಾಜ ವಿಧಾನಸಭಾ ಕ್ಷೇತ್ರದಿಂದ ತನ್ವೀರ್​ ಸೇಠ್​ ಈ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ.

ತಮ್ಮ ಚುನಾವಣಾ ನಿವೃತ್ತಿ ಸಂಬಂಧ ಎಐಸಿಸಿ (ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್​​)ಗೆ ಪತ್ರ ಬರೆದಿದ್ದಾರೆ.

ತಮ್ಮ ಮೇಲಾದ ದಾಳಿಯ ಬಳಿಕ ನನ್ನ ಆರೋಗ್ಯ ಹದಗೆಟ್ಟಿದೆ. ಅನಾರೋಗ್ಯದ ಕಾರಣ ನಾನು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ.

ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ತಮ್ಮ ಚುನಾವಣಾ ನಿವೃತ್ತಿಯ ಬಗ್ಗೆ ಕರ್ನಾಟಕ ಕಾಂಗ್ರೆಸ್​ ಉಸ್ತುವಾರಿ ರಣದೀಪ್​ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್​ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

2019ರ ನವೆಂಬರ್​ನಲ್ಲಿ ಪಿಎಫ್​ಐ ಕಾರ್ಯಕರ್ತ ತನ್ವೀರ್​ ಸೇಠ್​ ಅವರ ಕತ್ತಿಗೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದ.

ಕಾರ್ಯಕರ್ತರ ಒತ್ತಡಕ್ಕೆ ಮಣಿದು ಕಾಂಗ್ರೆಸ್​ ಟಿಕೆಟ್​​ಗಾಗಿ ಅರ್ಜಿ ಸಲ್ಲಿಸಿದ್ದೆ ಎಂದು ತನ್ವೀರ್​ ಸೇಠ್​ ಅವರು ಹೇಳಿದ್ದಾರೆ.

ತನ್ವೀರ್​ ಸೇಠ್​ ಅವರ ತಂದೆ ಅಜೀಜ್​ ಸೇಠ್​ ಅವರು ಕೂಡಾ ಕಾಂಗ್ರೆಸ್​ನ ಹಿರಿಯ ನಾಯಕರಾಗಿದ್ದರು.

ಐದು ಬಾರಿ ನರಸಿಂಹರಾಜ ಕ್ಷೇತ್ರದಿಂದ ಗೆದ್ದಿದ್ದ ತನ್ವೀರ್​ ಸೇಠ್​ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಸಚಿವರಾಗಿದ್ದರು.

ತನ್ವೀರ್​ ಸೇಠ್​ ಅವರ ದಿಢೀರ್​ ಚುನಾವಣಾ ನಿವೃತ್ತಿ ನರಸಿಂಹರಾಜ ಕ್ಷೇತ್ರದಲ್ಲಿ ಎಸ್​ಡಿಪಿಎಐಗೆ ಲಾಭ ಮಾಡಿಕೊಡುತ್ತಾ..? ಈಗಾಗಲೇ ಅಬ್ದುಲ್​ ಮಜೀದ್​ ಅವರನ್ನು ಎಸ್​ಡಿಪಿಐ ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ.

ಅತೀ ಹೆಚ್ಚು ಮುಸಲಾನ್ಮ ಮತದಾರರು ಇರುವ ವಿಧಾನಸಭಾ ಕ್ಷೇತ್ರಗಳಲ್ಲಿ ನರಸಿಂಹರಾಜ ಕ್ಷೇತ್ರವೂ ಒಂದು.

ಶೇಕಡಾ 48.3ರಷ್ಟು ಮತದಾರರು ಮುಸಲ್ಮಾನ ಮತದಾರರು. 2018ರ ಚುನಾವಣಾ ಅಂಕಿಅಂಶದ ಪ್ರಕಾರ ಕ್ಷೇತ್ರದಲ್ಲಿ 1 ಲಕ್ಷದ 26 ಸಾವಿರ ಮುಸಲ್ಮಾನ ಮತದಾರರಿದ್ದಾರೆ. 45 ಸಾವಿರಕ್ಕೂ ಅಧಿಕ ದಲಿತ ಮತದಾರರಿದ್ದಾರೆ.

ಎಸ್​​ಡಿಪಿಐ ಕಣ್ಣಿಟ್ಟಿರುವ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ನರಸಿಂಹರಾಜವೂ ಒಂದು.

2018ರ ಫಲಿತಾಂಶ:

ತನ್ವೀರ್​ ಸೇಠ್​ – ಕಾಂಗ್ರೆಸ್​ – 62,268

ಸಂದೇಶ ಸ್ವಾಮಿ – ಬಿಜೆಪಿ – 44,141 (ಸಂದೇಶ್​ ಸ್ವಾಮಿ ಅವರು ಮೈಸೂರು ಪಾಲಿಕೆ ಮಾಜಿ ಮೇಯರ್​ ಮತ್ತು ಇತ್ತೀಚೆಗಷ್ಟೇ ಕಾಂಗ್ರೆಸ್​ ಸೇರಿರುವ ಸಂದೇಶ್​ ನಾಗರಾಜ್​ ಅವರ ಸಹೋದರ)

ಅಬ್ದುಲ್​ ಮಜೀದ್​ – ಎಸ್​ಡಿಪಿಐ – 33,284

2013ರ ಫಲಿತಾಂಶ:

ತನ್ವೀರ್​ ಸೇಠ್​ – ಕಾಂಗ್ರೆಸ್​ – 38037

ಅಬ್ದುಲ್​ ಮಜೀದ್​ – ಎಸ್​ಡಿಪಿಐ – 29,667

ಸಂದೇಶ ಸ್ವಾಮಿ – ಜೆಡಿಎಸ್​ – 29,180

(ಸಂದೇಶ್​ ಸ್ವಾಮಿ ಅವರು ಮೈಸೂರು ಪಾಲಿಕೆ ಮಾಜಿ ಮೇಯರ್​ ಮತ್ತು ಇತ್ತೀಚೆಗಷ್ಟೇ ಕಾಂಗ್ರೆಸ್​ ಸೇರಿರುವ ಸಂದೇಶ್​ ನಾಗರಾಜ್​ ಅವರ ಸಹೋದರ)

2008ರ ಫಲಿತಾಂಶ:

ತನ್ವೀರ್​ ಸೇಠ್​ – ಕಾಂಗ್ರೆಸ್​ -37,789

ಸಂದೇಶ್​ ನಾಗರಾಜ್​ – ಜೆಡಿಎಸ್​ – 31,104

ಬಿ ಪಿ ಮಂಜುನಾಥ್​ – ಬಿಜೆಪಿ – 17,545

LEAVE A REPLY

Please enter your comment!
Please enter your name here