ಕರ್ನಾಟಕದಲ್ಲಿ ಆಮ್ ಆದ್ಮಿ ಪಾರ್ಟಿಗೆ ಅತೀ ದೊಡ್ಡ ಆಘಾತ ಎದುರಾಗಿದೆ.
ನಿವೃತ್ತ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಆಮ್ ಆದ್ಮಿ ಪಾರ್ಟಿಗೆ ರಾಜೀನಾಮೆ ಕೊಟ್ಟಿದ್ದಾರೆ.
ಇವರು ಮಾರ್ಚ್ 4ರಂದು ಬಿಜೆಪಿ ಸೇರಲಿದ್ದಾರೆ. ವಿಚಿತ್ರ ಎಂದರೆ ಅವತ್ತೇ ಕರ್ನಾಟಕದಲ್ಲಿ ಚುನಾವಣಾ ಪ್ರಚಾರಕ್ಕೆ ಮೊದಲ ಬಾರಿಗೆ ಅರವಿಂದ್ ಕೇಜ್ರಿವಾಲ್ ಕರ್ನಾಟಕ್ಕೆ ಬರುತ್ತಿದ್ದಾರೆ.
11 ತಿಂಗಳ ಹಿಂದೆಯಷ್ಟೇ ಭಾಸ್ಕರ್ ರಾವ್ ಅವರು ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಆಪ್ಗೆ ಸೇರಿದ್ದರು.
ಭಾಸ್ಕರ್ ರಾವ್ ಅವರ ಸೇರ್ಪಡೆ ಬಳಿಕ ಅವರನ್ನು ಕರ್ನಾಟಕದಲ್ಲಿ ಆಪ್ನ ಪ್ರಮುಖ ಮುಖ ಎಂದು ಬಣ್ಣಿಸಲಾಗಿತ್ತು
ಗುಜರಾತ್ ಚುನಾವಣೆಯ ವೇಳೆ ಭಾಸ್ಕರ್ ರಾವ್ ಅವರು ಆಮ್ ಆದ್ಮಿ ಪಾರ್ಟಿ ಪರವಾಗಿ ರಣತಂತ್ರಗಳನ್ನು ರೂಪಿಸಲು ತೆರಳಿದ್ದರು.
ಈ ವೇಳೆಯೇ ಬಿಜೆಪಿ ಸೇರುವ ಬಗ್ಗೆ ಮಾತುಕತೆ ನಡೆದಿತ್ತು ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ ಬಿಜೆಪಿಯಲ್ಲಿ ಚುನಾವಣಾ ಸಹ ಉಸ್ತುವಾರಿ ಆಗಿರುವ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರ ಜೊತೆಗೆ ಭಾಸ್ಕರ್ ರಾವ್ ಅವರು ಮಾತುಕತೆ ನಡೆಸಿದ್ದರು.
ಆ ಬಳಿಕ ಕಂದಾಯ ಸಚಿವ ಆರ್ ಅಶೋಕ್ ಅವರ ಜೊತೆಗೂ ಭಾಸ್ಕರ್ ರಾವ್ ಮಾತುಕತೆ ನಡೆಸಿದ್ದರು.
ಭಾಸ್ಕರ್ ರಾವ್ ಅವರು ಬಸವನಗುಡಿಯಲ್ಲಿ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಯಾಗಲಿದ್ದಾರೆ ಎಂದು ಭಾವಿಸಲಾಗಿತ್ತು.
ಆಮ್ ಆದ್ಮಿ ಪಾರ್ಟಿಯಲ್ಲಿ ತಮ್ಮ ರಾಜಕೀಯ ಬೆಳವಣಿಗೆಗೆ ಅವಕಾಶ ನೀಡುತ್ತಿಲ್ಲ ಅಸಮಾಧಾನದಲ್ಲಿ ಭಾಸ್ಕರ್ ರಾವ್ ಅವರು ಪಕ್ಷ ಬಿಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ADVERTISEMENT
ADVERTISEMENT