ADVERTISEMENT
ಇವತ್ತು ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿವ ಎಂಬಿ ಪಾಟೀಲ್ ಅವರಿಗೆ ಸಂಸದ ಡಿ ಕೆ ಸುರೇಶ್ ನೇರವಾಗಿ ಎಚ್ಚರಿಕೆ ಕೊಟ್ಟಿರುವ ಪ್ರಸಂಗ ನಡೆದಿದೆ.
ಐದು ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿರುತ್ತಾರೆ, ಕಾಂಗ್ರೆಸ್ ರಾಷ್ಟ್ರೀಯ ನಾಯಕರ ತೀರ್ಮಾನವೂ ಅದೇ ಎಂದು ಸಚಿವ ಎಂ ಬಿ ಪಾಟೀಲ್ ಅವರು ಮೈಸೂರಲ್ಲಿ ಹೇಳಿದ್ದರು ಮತ್ತು ಬೆಂಗಳೂರಲ್ಲಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.
ಶಾಸಕಾಂಗ ಪಕ್ಷದ ಸಭೆಯ ವೇಳೆ ಎಂ ಬಿ ಪಾಟೀಲ್ ನೀಡಿದ ಹೇಳಿಕೆಯನ್ನು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಸಹೋದರ ಡಿ ಕೆ ಸುರೇಶ್ ಪ್ರಸ್ತಾಪಿಸಿ ಎಚ್ಚರಿಕೆ ಕೊಟ್ಟರು.
ಹಾಗೆ ಹೇಳೋಕೆ ನೀವು ಯಾರು..? ಸಿದ್ದರಾಮಯ್ಯನವರೇ ಐದು ವರ್ಷ ಮುಖ್ಯಮಂತ್ರಿ ಎಂದು ಹೇಳಲು ನೀವು ಯಾರಿ..?
ಎಂದು ಡಿಕೆ ಸುರೇಶ್ ಏರು ಧ್ವನಿಯಲ್ಲಿ ಎಂ ಬಿ ಪಾಟೀಲ್ ಅವರ ವಿರುದ್ಧ ಮಾತಾಡಿದರು.
ಈ ಹಿಂದೆ ಸಿದ್ದರಾಮಯ್ಯ ಐದು ವರ್ಷದ ರಾಜ್ಯ ಮುಖ್ಯಮಂತ್ರಿ ಆಗಿದ್ದರು. ಈಗ ಮತ್ತೆ ಮುಖ್ಯಮಂತ್ರಿ ಆಗಿದ್ದಾರೆ. ಮತ್ತೆ ಐದು ವರ್ಷ ಬೇಕಾದರೂ ಅವರೇ ಮುಖ್ಯಮಂತ್ರಿ ಆಗಿರಲಿ, ಬೇಡ ಎಂದವರು ಯಾರು..? ಎಂ ಬಿ ಪಾಟೀಲ್ ಕೂಡಾ ಸಿಎಂ ಆಗಲಿ ಬಿಡಿ
ಎಂದು ಏರುಧ್ವನಿಯಲ್ಲಿ ಎಂ ಬಿ ಪಾಟೀಲ್ ಅವರ ವಿರುದ್ಧ ಡಿಕೆಸುರೇಶ್ ಗುಡುಗಿದರು.
ಡಿಕೆ ಸುರೇಶ್ ವರ್ತನೆಯಿಂದ ಸಿಟ್ಟಾದ ಎಂಬಿ ಪಾಟೀಲ್ ತಿರುಗೇಟು ಕೊಟ್ಟರು.
ನಾನೇನು ಬೇರೆ ಹೇಳಿಲ್ಲ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಏನು ಹೇಳಿದ್ದಾರೋ ಅದನ್ನೇ ಹೇಳಿದ್ದೇನೆ. ಐದು ವರ್ಷದ ಅಧಿಕಾರದ ಹಂಚಿಕೆ ಜನರ ಜೊತೆಗೆ ಮಾತ್ರ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳೇ ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ರಲ್ಲ
ಎಂದು ಎಂ ಬಿ ಪಾಟೀಲ್ ತಿರುಗೇಟು ಕೊಟ್ಟರು.
ADVERTISEMENT