13 ವಿಧಾನಸಭಾ ಕ್ಷೇತ್ರಗಳಿಗೆ ಜೈನರಿಗೆ ಟಿಕೆಟ್​ ನೀಡುವಂತೆ ಆಗ್ರಹ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜೈನ ಸಮುದಾಯದವರಿಗೆ 13 ಕ್ಷೇತ್ರಗಳಿಂದ ಟಿಕೆಟ್​ ನೀಡುವಂತೆ ಬಿಜೆಪಿ ಮತ್ತು ಕಾಂಗ್ರೆಸ್​​ಗೆ ಜೈನ ಸಮುದಾಯ ಆಗ್ರಹಿಸಿದೆ.

ರಾಜ್ಯದಲ್ಲಿ 5 ಲಕ್ಷದಷ್ಟು ಜೈನ ಸಮುದಾಯವರಿದ್ದಾರೆ. ಅಲ್ಪಸಂಖ್ಯಾತ ಜೈನ ಸಮುದಾಯದನ್ನು ಪ್ರತಿನಿಧಿಸಿ ರಾಜ್ಯದ ವಿಧಾನಸಭಾ ಕ್ಷೇತ್ರಗಲ್ಲಿ ನಮ್ಮ ಕುಂದುಕೊರತೆಗಳಿಗೆ ಸ್ಪಂದಿಸಿ ನಿವಾರಿಸಿಕೊಡುವಂತಹ ಯಾವ ಪ್ರತಿನಿಧಿಯೂ ಇಲ್ಲ. ಈ ಹಿನ್ನೆಲೆಯಲ್ಲಿ ಜೈನ ಸಮಾಜದವರಿಗೆ ಟಿಕೆಟ್​ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ  ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಅವರಿಗೆ ಕರ್ನಾಟಕ ಜೈನ ಸಂಘದ ಅಧ್ಯಕ್ಷ ಬಿ ಪ್ರಸನ್ನಯ್ಯ ಪತ್ರ ಬರೆದಿದ್ದಾರೆ.

ಜೈನ ಸಮುದಾಯಕ್ಕೆ ಟಿಕೆಟ್​ ನೀಡುವಂತೆ ಬಿಜೆಪಿಗೆ ಕೇಳಲಾಗಿರುವ ಕ್ಷೇತ್ರಗಳು:

ಬೆಳಗಾವಿ ದಕ್ಷಿಣ: ಅಭಯ ಪಾಟೀಲ್​

ಬೆಳಗಾವಿ ಗ್ರಾಮೀಣ: ಸಂಜಯ್​ ಪಾಟೀಲ್​

ಖಾನಾಪೂರ: ಪ್ರಮೋದಗ್​ ಕೊಚೇರಿ

ಜಮಖಂಡಿ: ಚಂದ್ರಕಾಂತ ತವನಪ್ಪ ಉಪಾಧ್ಯೆ

ತೇರದಾಳ: ಡಾ. ಮಹಾವೀರ್​ ಜೈನ್​ ದಾನಿಗೋಡು, ಕಿರಣ್​ ಕುಮಾರ್​ ದೇವಲ ದೇಸಾಯಿ

ರಾಜಾಜಿನಗರ: ಬಾಹುಬಲಿ ಗೌರಜ್​

ಧಾರವಾಡ: ತವನಪ್ಪ ಪಾಯಪ್ಪ ಅಷ್ಟಗಿ

ಜೈನ ಸಮುದಾಯಕ್ಕೆ ಟಿಕೆಟ್​ ನೀಡುವಂತೆ ಕಾಂಗ್ರೆಸ್​ನಿಂದ ಕೇಳಲಾಗಿರುವ ಕ್ಷೇತ್ರಗಳು: 

ನಿಪ್ಪಾಣಿ: ಉತ್ತಮ್​ ರಾವಸಾಹೇಬ ಪಾಟೀಲ ಅಥವಾ ಪಂಕಜ ವೀರಕುಮಾರ್​ ಪಾಟೀಲ್​

ಕಾಗವಾಡ: ಅರುಣ ಯಲಗುದ್ರಿ ಅಥವಾ ಡಾ ಎಸ್​ ಎ ಮಗದಮ್​

ತೇರದಾಳ: ಡಾ ಪದ್ಮಜಿತ್​ ನಾಡಗೌಡ ಪಾಟೀಲ್​ ಅಥವಾ ಪ್ರವೀಣ್​ ನಾಡಗೌಡ

ಜಮಖಂಡಿ: ಸುಶೀಲ್​ ಕುಮಾರ್​ ಬೆಳಗಲಿ

ಹಿರಿಯೂರು: ಡಿ ಸುಧಾಕರ್​

ಮೂಡುಬಿದಿರೆ: ಪದ್ಮಪ್ರಸಾದ್​ ಜೈನ್​

ಮಾರ್ಚ್​ 21ರಂದು ಕರ್ನಾಟಕ ಜೈನ ಸಂಘದ ಅಧ್ಯಕ್ಷ ಬಿ ಪ್ರಸನ್ನಯ್ಯ ಅವರು ಪತ್ರ ಬರೆದಿದ್ದಾರೆ. 

ಕಾಂಗ್ರೆಸ್​ ಈಗಾಗಲೇ ಎರಡು ಹಂತದಲ್ಲಿ ಒಟ್ಟಯು 166 ಕ್ಷೇತ್ರಗಳಿಗೆ ಟಿಕೆಟ್​ ಘೋಷಣೆ ಮಾಡಿದೆ. ಇವುಗಳ ಪೈಕಿ ಹಿರಿಯೂರುಗೆ ಡಿ ಸುಧಾಕರ್​ ಅವರಿಗೆ ಟಿಕೆಟ್​ ನೀಡಲಾಗಿದೆ.

ಬಿಜೆಪಿ ಇನ್ನೂ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿಲ್ಲ.