ಉಚಿತ ವಿದ್ಯುತ್​​ – ಇವತ್ತಿನಿಂದ ಅರ್ಜಿ ಸಲ್ಲಿಸುವುದು ಹೇಗೆ..?

ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಘೋಷಿಸಿರುವ ಐದು ಗ್ಯಾರಂಟಿ ಯೋಜನೆಗಳ ಪೈಕಿ ಉಚಿತ ವಿದ್ಯುತ್​ ಯೋಜನೆಗೆ ಅರ್ಜಿ ಸಲ್ಲಿಕೆ ಇವತ್ತಿನಿಂದ ಆರಂಭವಾಗಲಿದೆ.

ಅರ್ಜಿ ಸಲ್ಲಿಕೆಗೆ ಲಾಗಿನ್​ ಆಗಬೇಕಿರುವ ವೆಬ್​ಸೈಟ್​:

https://sevasindhugs.karnataka.gov.in/

ವೆಬ್​ಸೈಟ್​​ಗೆ ಲಾಗಿನ್​ ಆದ ಕೂಡಲೇ ಖಾತರಿ ಯೋಜನೆಗಳ ಕುರಿತು ಎಂಬ ಶೀರ್ಷಿಕೆ ಮೇಲೆ ಕ್ಲಿಕ್​ ಮಾಡಬೇಕು. ಆಗ ಗೃಹಜ್ಯೋತಿ ಯೋಜನೆಯ ಅರ್ಜಿ ಲಿಂಕ್​ ಓಪನ್​ ಆಗುತ್ತದೆ. 

ಮೊಬೈಲ್​ನಲ್ಲಿ ಅರ್ಜಿ ಸಲ್ಲಿಸುವುದಾದರೆ ಎಡಭಾಗದಲ್ಲಿ ಕಾಣಿಸಿಕೊಳ್ಳುವ ಮೆನು ಮೇಲೆ ಕ್ಲಿಕ್​ ಮಾಡಿ.

 

ಸ್ಕ್ಯಾನ್​ ಮಾಡಿಯೂ ಲಾಗಿನ್​ ಆಗಬಹುದು:

ಈ ಕೆಳಗಿನ ಚಿತ್ರದಲ್ಲಿ ತೋರಿಸಿರುವ ಸ್ಕ್ಯಾನ್​ ಮೇಲೂ ಸ್ಕ್ಯಾನ್​ ಮಾಡಿದರೆ ಆಗ ಲಿಂಕ್​ ಓಪನ್​ ಆಗುತ್ತದೆ.

ಬೇಕಾಗಿರುವ ದಾಖಲೆಗಳು:

ಆಧಾರ್​ ಕಾರ್ಡ್​​ ಸಂಖ್ಯೆ, ವಿದ್ಯುತ್​ ಬಿಲ್​ನಲ್ಲಿ ತೋರಿಸಿರುವ ಆರ್​ ಆರ್​ ಸಂಖ್ಯೆ ಮತ್ತು ಬಳಕೆದಾರರ ಮೊಬೈಲ್​ ಸಂಖ್ಯೆಯನ್ನು ಅರ್ಜಿ ಸಲ್ಲಿಸುವ ವೇಳೆ ಜೋಡಿಸಬೇಕಾಗುತ್ತದೆ.

ಬಾಡಿಗೆದಾರರಿಗೂ ಆಧಾರ್​ ಕಾರ್ಡ್​ ಸಾಕು:

ಇಂಧನ ಇಲಾಖೆ ಕೊಟ್ಟಿರುವ ಮಾಹಿತಿ ಪ್ರಕಾರ ಬಾಡಿಗೆದಾರರು ತಾವು ವಾಸವಿರುವ ಮನೆಯ ವಿದ್ಯುತ್​ ಮೀಟರ್​ನ ಆರ್​ ಆರ್​ ಸಂಖ್ಯೆಯ ಜೊತೆಗೆ ಆಧಾರ್​ ಸಂಖ್ಯೆಯನ್ನು ಜೋಡಿಸಿದರೆ ಸಾಕು, ಬಾಡಿಗೆ ಕರಾರು ಪತ್ರದ ಅಗತ್ಯವಿಲ್ಲ.

ನಾವು ಈ ಸುದ್ದಿಯನ್ನು ಬರೆಯವ ವೇಳೆಗೆ ಇನ್ನೂ ಅರ್ಜಿ ಸ್ವೀಕಾರ ಆರಂಭವಾಗಿರಲಿಲ್ಲ.

ಉಳಿದ ಗ್ಯಾರಂಟಿಗಳಿಗೂ ಇಲ್ಲೇ ಅರ್ಜಿ:

ಗೃಹ ಲಕ್ಷ್ಮೀ, ಉಚಿತ ಬಸ್​ ಪಾಸ್​ಗಾಗಿ ಶಕ್ತಿ ಕಾರ್ಡ್​ಗಾಗಿ ಅರ್ಜಿ ಮತ್ತು ಯುವ ನಿಧಿಗಾಗಿ ಅರ್ಜಿಯನ್ನು ಈ ಪೋರ್ಟಲ್​ನಲ್ಲೇ ಸಲ್ಲಿಕೆ ಮಾಡಬೇಕು.

ಆದರೆ ಈ ಮೂರು ಗ್ಯಾರಂಟಿಗಳಿಗೆ ಅರ್ಜಿ ಸಲ್ಲಿಕೆ ಆರಂಭಕ್ಕೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಈಗಾಗಲೇ ಉಚಿತ ಬಸ್​ ಪ್ರಯಾಣ ಯೋಜನೆ ಜೂನ್​ 11ರಿಂದಲೇ ಜಾರಿಗೆ ಬಂದಿದೆ.