ಕಾಂಗ್ರೆಸ್​​ಗೆ ಬರ್ತಾರಾ ಬೆಳಗಾವಿಯ ಪ್ರಭಾವಿ ರಾಜಕಾರಣಿ..?

ಬೆಂಗಳೂರು ಬಳಿಕ ಅತೀ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್​ ಆಪರೇಷನ್​ ಹಸ್ತಕ್ಕೆ ಮುಂದಾಗಿದೆ.

ಮೂಲಗಳ ಮಾಹಿತಿ ಪ್ರಕಾರ ಕಳೆದ ವರ್ಷ ನಿಧನರಾದ ಉಮೇಶ್​ ಕತ್ತಿ (Umesh Katti) ಅವರ ಸಹೋದರ ರಮೇಶ್​ ಕತ್ತಿಗೆ (Ramesh Katti) ಕಾಂಗ್ರೆಸ್​​ ಆಹ್ವಾನ ನೀಡಿದೆ.

ವಿಧಾನಪರಿಷತ್​ ಸದಸ್ಯರೂ ಆಗಿರುವ ಕಾಂಗ್ರೆಸ್​ನ ಹಿರಿಯ ನಾಯಕ ಪ್ರಕಾಶ್​ ಹುಕ್ಕೇರಿ ಅವರು ಕತ್ತಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಕಾಂಗ್ರೆಸ್​​ಗೆ ಬಂದರೆ ನಿಪ್ಪಾಣಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್​ ನೀಡುವ ಭರವಸೆ ನೀಡಲಾಗಿದೆ.

2009ರಲ್ಲಿ ರಮೇಶ್​ ಕತ್ತಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದರು.

ಆದರೆ ರಮೇಶ್​ ಕತ್ತಿ ಅವರು ಸಹೋದರ ಉಮೇಶ್​ ಕತ್ತಿ ಅವರು ಪ್ರತಿನಿಧಿಸ್ತಿದ್ದ ಹುಕ್ಕೇರಿ ಕ್ಷೇತ್ರದಿಂದ ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ.

ಆದರೆ ಕತ್ತಿ ನಿಧನದ ಬಳಿಕ ಕಾಂಗ್ರೆಸ್​ನ ಎ ಬಿ ಪಾಟೀಲ್​ ಅವರು ಕ್ಷೇತ್ರದಲ್ಲಿ ಇನ್ನಷ್ಟು ಹಿಡಿತ ಸಾಧಿಸಿರುವ ಕಾರಣ ಈ ಬಾರಿ ಕಾಂಗ್ರೆಸ್​ ಎ ಬಿ ಪಾಟೀಲ್​ ಅವರಿಗೆ ಹುಕ್ಕೇರಿಯಿಂದ ಟಿಕೆಟ್​ ನೀಡುತ್ತಿದೆ.

ಈ ಹಿನ್ನೆಲೆಯಲ್ಲಿ ಹುಕ್ಕೇರಿ ಬದಲು ರಮೇಶ್​ ಕತ್ತಿ ಅವರಿಗೆ ನಿಪ್ಪಾಣಿ ಟಿಕೆಟ್​ ನೀಡುವ ಪ್ರಸ್ತಾಪ ಕಾಂಗ್ರೆಸ್​ ಮುಂದಿಟ್ಟಿದೆ ಎಂದು ಮೂಲಗಳು ತಿಳಿಸಿವೆ.

2018 ಮತ್ತು 2013ರಲ್ಲಿ ಎರಡು ಬಾರಿ ಶಶಿಕಲಾ ಜೊಲ್ಲೆ ಅವರು ನಿಪ್ಪಾಣಿ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.