ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಬರುವ ಭರಮಸಾಗರ ಠಾಣಾ ವ್ಯಾಪ್ತಿಯ ವಿಜಯಪುರದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಐವರು ಗಾಯಗೊಂಡಿದ್ದಾರೆ.
ಮೃತರು ಬೆಂಗಳೂರು ಮೂಲದವರು.
ಇವರು ಪ್ರಯಾಣಿಸುತ್ತಿದ್ದ ಎಸ್ಯುವಿ ವಾಹನ ಟ್ರಕ್ಗೆ ಡಿಕ್ಕಿ ಹೊಡೆದಿದೆ.
ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ನ ಇವರು ಗೋವಾದಿಂದ ಬೆಂಗಳೂರಿಗೆ ವಾಪಸ್ ಅಗುತ್ತಿದ್ದರು.
ಮೃತರನ್ನು ಝಾಕೀರ್ ಅಹ್ಮದ್ (60), ತಬ್ಸಂ (28), ಹಯಾತ್ ಫಾತಿಮಾ (3 ತಿಂಗಳ ಮಗು) ಎಂದು ಗುರುತಿಸಲಾಗಿದೆ.
ನಜಿಯಾ (22), ಇಮ್ರಾನ್ ಖಾನ್ (32) ಶೋಯಬ್ ಅಹ್ಮದ್ (30), ತಬ್ರೇಜ್ ಅಹ್ಮದ್ (27), ಸಬಾ (26) ಗಾಯಗೊಂಡವರು.
ADVERTISEMENT
ADVERTISEMENT