ವಂದೇ ಭಾರತ್​ ಎಕ್ಸ್​​ಪ್ರೆಸ್​ ರೈಲಿಗೆ ಅಡ್ಡಬಂದ ಜಾನುವಾರು – ರೈಲಿಗೆ ಏನಾಯ್ತು..?

ಮುಂಬೈ (Mumbai)-ಅಹಮದಾಬಾದ್ (Ahemadabad)​ ನಡುವಿನ ವಂದೇ ಭಾರತ್​ ಎಕ್ಸ್​ಪ್ರೆಸ್ (Vande Bharat Express​) ರೈಲಿಗೆ ಜಾನುವಾರು ಅಡ್ಡಬಂದ ಕಾರಣ ರೈಲಿನ ಇಂಜಿನ್​ ಮುಂಭಾಗಕ್ಕೆ ಹಾನಿ ಆಗಿದೆ.

ಬೆಳಗ್ಗೆ 11 ಗಂಟೆ 18 ನಿಮಿಷದ ವೇಳೆಗೆ ಗುಜರಾತ್​ನ ವತಾವ್​​ನಲ್ಲಿ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ವಂದೇ ಭಾರತ್​ ರೈಲಿನ ಮುಂಭಾಗದ ಇಂಜಿನ್​ನ ಕವಚಕ್ಕೆ ಹಾನಿ ಆಗಿದೆ.

ಅಕ್ಟೋಬರ್​ 1ರಂದು ವಂದೇ ಭಾರತ್​​ ಎಕ್ಸ್​​ಪ್ರೆಸ್​​ಗೆ ಚಾಲನೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ
ಅಕ್ಟೋಬರ್​ 1ರಂದು ವಂದೇ ಭಾರತ್​​ ಎಕ್ಸ್​​ಪ್ರೆಸ್​​ಗೆ ಚಾಲನೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ

ಅಕ್ಟೊಬರ್​ 1ರಿಂದ ಮುಂಬೈ-ಗಾಂಧಿನಗರ ಮತ್ತು ಗಾಂಧಿನಗರ ಮತ್ತು ಮುಂಬೈ ನಡುವೆ ವಂದೇ ಭಾರತ್​ ರೈಲುಗಳ ಓಡಾಟ ಆರಂಭ ಆಗಿದೆ.