ಗ್ಯಾರಂಟಿ 2: ಗೃಹ ಲಕ್ಷ್ಮೀ ಯೋಜನೆ ಜಾರಿ – ಆಗಸ್ಟ್​ 15ರಿಂದ ಜಾರಿ

ಗೃಹ ಲಕ್ಷ್ಮೀ ಯೋಜನೆ ಜಾರಿಗೆ ಸಿಎಂ ಸಿದ್ದರಾಮಯ್ಯ ಸರ್ಕಾರ ತೀರ್ಮಾನಿಸಿದೆ. ಆಗಸ್ಟ್​ 15ರಂದು ಗೃಹ ಲಕ್ಷ್ಮೀ ಯೋಜನೆಯಡಿಯಲ್ಲಿ ಮನೆಯ ಯಜಮಾನಿ ಅಕೌಂಟ್​ಗೆ ಸರ್ಕಾರ 2 ಸಾವಿರ ರೂಪಾಯಿ ಜಮೆ ಮಾಡಲಾಗುತ್ತದೆ.

BPL​ ಮತ್ತು APL​ ಇಬ್ಬರಿಗೂ ಈ ಲಾಭ ಸಿಗಲಿದೆ.

ಜೂನ್​ 15ರಿಂದ ಜುಲೈ 15ರವರೆಗೆ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇದೆ.
ಆಧಾರ್​ ಕಾರ್ಡ್​, ಅಕೌಂಟ್​ ನಂಬರ್​ ಮತ್ತು ಮನೆಯ ಯಜಮಾನಿ ಯಾರು ಎಂಬ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಬೇಕಾಗುತ್ತದೆ.

ಅಕೌಂಟ್​ ನಂಬರ್​ ಮತ್ತು ಆಧಾರ್​ ನಂಬರ್​ನ್ನು ತೆಗೆದುಕೊಳ್ಳದೇ ಹಣ ವರ್ಗಾವಣೆ ಮಾಡಕ್ಕಾಗಲ್ಲ. ಹೀಗಾಗಿ ಈ ಯೋಜನೆಯ ಜಾರಿಗೆ ಸಮಯ ಬೇಕಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಯಾವುದೇ ಷರತ್ತುಗಳನ್ನು ವಿಧಿಸಿಲ್ಲ. ವೃಧಾಪ್ಯ ಪಿಂಚಣಿ, ವಿಧವಾ ಪಿಂಚಣಿ, ವಿಕಲಚೇತನ ಪಿಂಚಣಿ ಪಡೆಯುವವರೂ ಗೃಹ ಲಕ್ಷ್ಮೀ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.