ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಬರುವ ಕಲ್ಪತರು ಅಡಿಕೆ ಸುಲಿಯುವ ಘಟಕವನ್ನು ಸ್ಥಗಿತಗೊಳಿಸುವಂತೆ ತಾಲೂಕು ಆಡಳಿತಾಧಿಕಾರಿ ಆದೇಶಿಸಿದ್ದಾರೆ.
ಮೂಡುಪಡಕೋಡಿಯ ಕುಕ್ಕೇರೋಡಿಯಲ್ಲಿರುವ ಕಲ್ಪತರು ಅಡಿಕೆ ಸುಲಿಯುವ ಘಟಕವನ್ನು 7 ದಿನದೊಳಗೆ ಸ್ಥಗಿತಗೊಳಿಸುವಂತೆ ಗ್ರಾಮ ಪಂಚಾಯತ್ಗೆ ತಾಲೂಕು ಆಡಳಿತಾಧಿಕಾರಿ ಸೂಚಿಸಿದ್ದಾರೆ.
ಕಲ್ಪತರು ಅಡಿಕೆ ಸುಲಿಯುವ ಘಟಕದ 50 ಮೀಟರ್ ಸುತ್ತಮುತ್ತ ಐದು ಮನೆಗಳಿವೆ. ಈ ಘಟಕದಿಂದ ಸ್ಥಳೀಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಅಲ್ಲದೇ ಈ ಘಟಕದ ಪರವಾನಿಗೆಯನ್ನು 1 ವರ್ಷ 2 ತಿಂಗಳಿಂದ ನವೀಕರಿಸಿಲ್ಲ. ಎಂದು ದೂರಲಾಗಿತ್ತು.
ADVERTISEMENT
ADVERTISEMENT