ತಮಿಳುನಾಡಲ್ಲಿ ಅಮುಲ್​ನಿಂದ ಹಾಲು ಖರೀದಿ – ಕೇಂದ್ರ ಸಚಿವ ಶಾಗೆ ಸಿಎಂ ಸ್ಟಾಲಿನ್​ ಪತ್ರ, ಆಕ್ರೋಶ

ತಮಿಳುನಾಡಲ್ಲಿ ಹಾಲು ಖರೀದಿ ಮತ್ತು ಸಂಸ್ಕರಣೆಯಿಂದ ನಿರ್ಧಾರದಿಂದ ಹಿಂದೆ ಸರಿಯುವಂತೆ ಅಮುಲ್​ಗೆ ಸೂಚಿಸಿ ಎಂದು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್​ ಅವರು ಕೇಂದ್ರ ಸಹಕಾರ ಖಾತೆ ಸಚಿವ ಅಮಿತ್​ ಶಾ ಅವರಿಗೆ ಪತ್ರ ಬರೆದಿದ್ದಾರೆ.

ತಮಿಳುನಾಡು ರಾಜ್ಯದ ಜಿಲ್ಲೆಗಳಾದ ಕೃಷ್ಣಗಿರಿ, ಧರ್ಮಪುರಿ, ವೆಲ್ಲೂರು, ರಾಣಿಪೇಟೆ, ತಿರುಪತೂರು, ಕಾಂಚಿಪುರಂ, ತಿರುವಲ್ಲೂರು ಜಿಲ್ಲೆಗಳಲ್ಲಿ ಗುಜರಾತ್​ ಮೂಲದ ಅಮುಲ್​ ಹಾಲು ಖರೀದಿ ಆರಂಭಿಸಿದೆ.

ಹಾಲು ಉತ್ಪಾದಕರ ಸಂಘ ಮತ್ತು ಸ್ವಸಹಾಯ ಸಂಘದ ಮೂಲ ಹಾಲು ಖರೀದಿ ಮತ್ತು ಹಾಲು ಸಂಸ್ಕರಣೆಗೆ  ಘಟಕಗಳನ್ನು ಸ್ಥಾಪಿಸಿದೆ.

ಅಮುಲ್​ನ ಈ ನಿರ್ಧಾರದಿಂದ ತಮಿಳುನಾಡು ಸರ್ಕಾರದ ಆವಿನ್​ಗೆ ಹಾಲಿನ ಕೊರತೆ ಉಂಟಾಗಲಿದ್ದು, ಆವಿನ್​ ವ್ಯಾಪಾರ-ವಹಿವಾಟಿಗೆ ಧಕ್ಕೆ ಉಂಟಾಗಲಿದೆ. ಅಮುಲ್​ನ ಈ ನಿರ್ಧಾರ ಸಹಕಾರಿ ಕ್ಷೇತ್ರದ ತತ್ವಕ್ಕೆ ವಿರುದ್ಧವಾಗಿದೆ ಮತ್ತು ಅನಾರೋಗ್ಯಕರ ಸ್ಪರ್ಧೆ ಕಾರಣವಾಗಲಿದೆ

ಎಂದು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್​ ಅವರು ಪತ್ರ ಬರೆದಿದ್ದಾರೆ.

ತಮಿಳುನಾಡು ಸರ್ಕಾರ ಆವಿನ್​ ಪ್ರತಿ ದಿನ ರಾಜ್ಯದಲ್ಲಿ ಹಾಲು ಉತ್ಪಾದಕರಿಂದ 35 ಲಕ್ಷ ಲೀಟರ್​ ಹಾಲು ಖರೀದಿ ಮಾಡುತ್ತಿದ್ದು, 9,673 ಹಾಲು ಉತ್ಪಾದಕ ಸಂಘಗಳಲ್ಲಿ 4.5 ಲಕ್ಷ ಹಾಲು ಉತ್ಪಾದಕರು ಆವಿನ್​ಗೆ ಹಾಲು ಮಾರಾಟ ಮಾಡುತ್ತಿದ್ದಾರೆ.