Sunday, May 11, 2025
Every Minute News
  • News
  • Cinema
  • Sports
  • Health
  • Lifestyle
  • Gallery
  • Special
No Result
View All Result
  • News
  • Cinema
  • Sports
  • Health
  • Lifestyle
  • Gallery
  • Special
No Result
View All Result
Every Minute News
No Result
View All Result
ADVERTISEMENT
Home News

ಇಪಿಎಫ್‌ ಖಾತೆ; ಆನ್‌ಲೈನ್‌ ಮೂಲಕ ವಿತ್‌ಡ್ರಾಗೆ ಟಿಪ್ಸ್‌

by
18th October 2022
in News
0
ಇಪಿಎಫ್‌ ಖಾತೆ; ಆನ್‌ಲೈನ್‌ ಮೂಲಕ ವಿತ್‌ಡ್ರಾಗೆ ಟಿಪ್ಸ್‌
0
SHARES
0
VIEWS
Share on FacebookShare on Twitter

ಉದ್ಯೋಗಿಗಳು ತಮ್ಮ ಉದ್ಯೋಗದಾತರ ಅಡಿಯಲ್ಲಿ ಕೆಲಸ ಮಾಡುತ್ತಿದ್ದರೆ ಮಾತ್ರ ತಮ್ಮ ಇ.ಪಿ.ಎಫ್‌ ಖಾತೆಯಿಂದ ಭಾಗಶಃ ಹಣವನ್ನು ಹಿಂಪಡೆಯಲು ಸಾಧ್ಯ.

ಎಂಪ್ಲಾಯಿಸ್‌ ಪ್ರಾವಿಡೆಂಟ್‌ ಫಂಡ್‌ ಆರ್ಗನೈಸೇಶನ್ ಜಾಲತಾಣದ ಮುಖಾಂತರ ನೀವು ನಿಮ್ಮ ಇ.ಪಿ.ಎಫ್.ಹಣವನ್ನು ಹಿಂಪಡೆಯಬಹುದು. ನೌಕರರ ಭವಿಷ್ಯ ನಿಧಿಯನ್ನು ಸಾಮಾನ್ಯವಾಗಿ ಇಪಿಎಫ್ ಎಂದು ಕರೆಯಲಾಗುತ್ತದೆ. ಇದು ಭಾರತದಲ್ಲಿ ಉದ್ಯೋಗಿಗಳಿಗೆ ಉಳಿತಾಯ,ಪಿಂಚಣಿ, ಹಾಗು ವಿಮಾ ಸೌಲಭ್ಯಗಳನ್ನು ನೀಡುವ ಸಂಸ್ಥೆಯಾಗಿದ್ದು, ಇದು ಭಾರತದ ಎಲ್ಲ ಉದ್ಯೋಗಿಗಳಿಗೂ ಕಡ್ಡಾಯ.

ಈ ಇ.ಪಿ.ಎಫ್‌ ಸೌಲಭ್ಯ ಹೊಂದಿದ ಸಂಸ್ಥೆಗಳಲ್ಲಿ ಕೆಲಸ ಮಾಡುವ ಎಲ್ಲ ನೌಕರರು ಪ್ರತಿ ತಿಂಗಳು ತಮ್ಮ ಮೂಲವೇತನದ 12 ಪ್ರತಿಶತದಷ್ಟು ಭಾಗವನ್ನು ನೌಕರರ ಭವಿಷ್ಯ ನಿಧಿಗೆ ನೀಡುವುದು ಕಡ್ಡಾಯವಾಗಿರುತ್ತದೆ.ಭವಿಷ್ಯ ನಿಧಿಗೆ ನೀಡಲಾದ ನೌಕರರ ಹಣವು ಇ.ಪಿ.ಎಫ್‌ನ ನೌಕರರ ಖಾತೆಯಲ್ಲಿ ಉಳಿತಾಯಗೊಂಡಿರುತ್ತದೆ. ಹೀಗೆ ಇ.ಪಿ.ಎಫ್‌ನ ಖಾತೆಯಲ್ಲಿ ಉಳಿತಾಯಗೊಂಡಿರುವ ಹಣವನ್ನು ನೌಕರರು ತಮ್ಮ ನಿವೃತ್ತಿ ಸಮಯದಲ್ಲಿ ಹಿಂಪಡೆಯಬಹುದು. ಆದರೆ ನಿವೃತ್ತಿಗಿಂತ ಮುಂಚೆಯೂ ನೌಕರರು ತಮ್ಮ ಉಳಿತಾಯದ ಹಣವನ್ನು ತೆಗೆದುಕೊಳ್ಳಲು ಸಾಧ್ಯವಿದೆ.
ಹಾಗಿದ್ದರೆ ಇ.ಪಿ.ಎಫ್‌ ಖಾತೆಯಿಂದ ಆನ್‌ಲೈನ್‌ ಮುಖಾಂತರ ಹಣವನ್ನು ತೆಗೆದುಕೊಳ್ಳೋದು ಹೇಗೆ..? ಇಲ್ಲಿದೆ ಮಾಹಿತಿ

ಇ.ಪಿ.ಎಫ್ನ ನಿಮ್ಮ ಖಾತೆಯಿಂದ ಆನ್‌ಲೈನ್ ಮುಖಾಂತರ ಹಣವನ್ನು ತೆಗೆದುಕೊಳ್ಳುವುದು ಹೇಗೆ ಎಂಬುದನ್ನು ತಿಳಿಯುವುದಕ್ಕಿಂತ ಮೊದಲು ಗಮನದಲ್ಲಿರಿಸಿ ಕೊಳ್ಳಬೇಕಾದ ವಿಷಯವೇನೆಂದರೆ, ಇ.ಪಿ.ಎಫ್ ಖಾತೆಯಲ್ಲಿರುವ ಸಂಪೂರ್ಣ ಹಣವನ್ನು ಮುಂಚಿತವಾಗಿ ಪಡೆಯಲು ಸಾಧ್ಯವಿಲ್ಲ. ಸಂಪೂರ್ಣ ಹಣವನ್ನು ಪಡೆಯಲು ನೌಕರರು ನಿವೃತ್ತಿ ಹೊಂದಿರಬೇಕು ಅಥವಾ ನೌಕರನು ಕನಿಷ್ಠ ಎರಡು ತಿಂಗಳುಗಳ ಕಾಲ ನಿರುದ್ಯೋಗಿಯಾಗಿ ಉಳಿದಿರಬೇಕು. ಇದನ್ನು ಹೊರತು ಪಡಿಸಿದರೆ ಕೆಲವು ಸಂದರ್ಭಗಳಲ್ಲಿ ಮಾತ್ರ ಮುಂಚಿತವಾಗಿ ಇ.ಪಿ.ಎಫ್‌ ಹಣವನ್ನು ಪಡೆಯಬಹುದು. ಉದಾಹರಣೆಗೆ ; ವೈದ್ಯಕೀಯ ಅನಾರೋಗ್ಯ ಸಂದರ್ಭಗಳಲ್ಲಿ, ಮದುವೆ, ಮನೆ ನಿರ್ಮಾಣ, ಹಾಗು ಇತರ ವಿಪತ್ತಿನ ಸಮಯಗಳಲ್ಲಿ ಮಾತ್ರ ಹಣವನ್ನು ಹಿಂಪಡೆಯಬಹುದು. ಇಪಿಎಫ್ ಒ ದ ಜಾಲತಾಣದಲ್ಲಿ ಲಭ್ಯವಿರುವ FAQ ಡಾಕ್ಯುಮೆಂಟ್‌ನಲ್ಲಿ ಅಕಾಲಿಕ ಹಿಂಪಡೆಯುವಿಕೆಗೆ ಇರುವ ಮಾನದಂಡಗಳನ್ನು ನೋಡಬಹುದು.

ADVERTISEMENT
ADVERTISEMENT

1) UAN Member e-Sewa ಪೋರ್ಟಲ್‌ಗೆ ಭೇಟಿ ನೀಡಿ.
2) ನಿಮಗೆ ನೀಡಲಾಗಿರುವ ಯೂನಿವರ್ಸಲ್‌ ಖಾತೆ ಸಂಖ್ಯೆ ಹಾಗೂ ಪಾಸ್‌ವರ್ಡ್‌ ಮತ್ತು ಕ್ಯಾಪ್ಚಾ ಅನ್ನು ನಮೂದಿಸಿ, ಸೈನ್‌ಇನ್‌ ಬಟನ್‌ ಅನ್ನು ಕ್ಲಿಕ್‌ ಮಾಡಿ.
3) ಮೇಲಿನ ಮೆನುವಿನಿಂದ ONLINE SERVICES ಮೇಲೆ ಕ್ಲಿಕ್‌ ಮಾಡಿ ಮತ್ತು CLAIM (FORM-31,19,10C&10D) ಅನ್ನು ಆಯ್ಕೆ ಮಾಡಿ ಕ್ಲಿಕ್‌ ಮಾಡಿ.
4) ಆನ್‌ಲೈನ್‌ ಕ್ಲೈಮ್‌ ಫಾರ್ಮ್ ಕಾಣಸಿಗುವ ವಿವರಗಳನ್ನು ಪರಿಶೀಲಿಸಿ.
5) ಒಮ್ಮೆ ಪರಿಶೀಲನೆಗೊಳಪಟ್ಟಮೇಲೆ ನಿಮ್ಮ ಬ್ಯಾಂಕ್‌ ಖಾತೆಯ ನಂಬರ್‌ ಅನ್ನು ನಮೂದಿಸಿ.
6) VERIFY ಬಟನ್‌ ಅನ್ನು ಕ್ಲಿಕ್‌ ಮಾಡಿ, ನಂತರ CERTIFICATE OF UNDERTAKING ನಲ್ಲಿ ಲಭ್ಯವಿರುವ ಹೌದು ಬಟನ್‌ ಮೇಲೆ ಕ್ಲಿಕ್‌ ಮಾಡಿ.
7) ಆನ್‌ಲೈನ್‌ ಕ್ಲೈಮ್‌ಗಾಗಿ ಮುಂದುವರೆಯಲು “PROCEED ONLINE” ಬಟನ್‌ ಅನ್ನು ಕ್ಲಿಕ್‌ ಮಾಡಿ.
8) ನಂತರ ನೀವು ಮುಂಚಿತವಾಗಿ ಪಿ.ಎಫ್ನ ಹಣವನ್ನು ಪಡೆಯಲ್ಲು ಇಚ್ಚಿಸುತೀರಿ ಎಂಬುದನ್ನು ಕೈಮ್‌ ಫಾರ್ಮ್‌ ನಲ್ಲಿ ನಮೂದಿಸಬೇಕಾಗುತ್ತದೆ.ನಂತರ ಅದು ಡ್ರಾಪ್‌ ಡೌನ್‌ ಮೆನುವನ್ನು ತೋರಿಸುತ್ತದೆ ಅದರಲ್ಲಿ ಮುಂಚಿತವಾಗಿ ಪಿ.ಎಫ್ನ ಹಣವನ್ನು ಪಡೆಯಲು ಇರಬೇಕಾದ ಕಾರಣಗಳ ಪಟ್ಟಿಯನ್ನು ತೋರಿಸುತ್ತದೆ ಅದರಲ್ಲಿ ಸೂಕ್ತವಾದದನ್ನು ನೀವು ಆರಿಸಿಕೊಂಡು ಕ್ಲಿಕ್‌ ಮಾಡಿ.
9) ನಂತರ ಟೆಕ್ಸ್ಟ್‌ಬಾಕ್ಸ್ ನಲ್ಲಿ ನಿಮಗೆ ಅಗತ್ಯವಿರುವ ಹಣದ ಮೊತ್ತವನ್ನು ನಮೂದಿಸಿ.EMPLOYEE ADDRESS SECTION ನಲ್ಲಿ ನಿಮ್ಮ ಇ-ಮೇಲ್ ವಿಳಾಸವನ್ನು ನಮೂದಿಸಿ.
10) ಪ್ರಮಾಣಪತ್ರದ ಮೇಲೆ ಕ್ಲಿಕ್ಕಿಸಿ ನಿಮ್ಮ ವಿನಂತಿಯನ್ನು ಸಲ್ಲಿಸಿ.

ಒಂದು ಬಾರಿ ವಿನಂತಿಯನ್ನು ಸಲ್ಲಿಸಿದ ಮೇಲೆ, ನೀವು ಯಾವ ಕಾರಣಕ್ಕಾಗಿ ಕ್ಲೈಮ್‌ ಫಾರ್ಮ್‌ ಅನ್ನು ಭರ್ತಿ ಮಾಡಿರುತ್ತೀರೋ ಅದಕ್ಕೆ ಅಗತ್ಯವಿರುವ ಕೆಲವು ದಾಖಲೆಗಳನ್ನು EPFO ಕೇಳುತ್ತದೆ.ಇದಾದ ನಂತರ ನೀವು ಕೆಲಸ ಮಾಡತ್ತಿರುವ ಸಂಸ್ಥೆಯವರು ನಿಮ್ಮ ವಿನಂತಿಯನ್ನು ಪರಿಶೀಲಿಸಿ ಅನುಮೋದನೆಯನ್ನು ನೀಡುತ್ತಾರೆ. ಕಡೆಯದಾಗಿ ನೀವು ವಿನಂತಿಸಿದ ಹಣದ ಮೊತ್ತವು ನಿಮ್ಮ ಪಿ.ಎಫ್ ಖಾತೆಯಲ್ಲಿ ನಮೂದಿಸಿದ ನಿಮ್ಮ ಬ್ಯಾಂಕ್‌ ಖಾತೆಗೆ ಬರಲು 15 ರಿಂದ 20 ದಿನಗಳಾಗಬಹುದು.

  1. Daymand Satta
  2. Diamond Exchange 9
  3. Betln Exchange
  4. Daimand Satta Com
  5. Satsport Exchange
Tags: EPF Account
ADVERTISEMENT
Previous Post

ನಿಮ್ಮನ್ನೂ ಆ್ಯಸಿಡಿಟಿ ಸಮಸ್ಯೆ ಕಾಡುತ್ತಿದೆಯೇ? ಶೀಘ್ರ ಪರಿಹಾರಕ್ಕಾಗಿ ಹೀಗೆ ಮಾಡಿ

Next Post

Good Father – ಒಳ್ಳೆಯ ತಂದೆ ಎನಿಸಿಕೊಳ್ಳಬೇಕಾ..? ಹೀಗೆ ಮಾಡಿ

Related Posts

ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ
News

ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ

by PratikshanaNews
19th February 2025
ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ
News

ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ

by PratikshanaNews
18th February 2025
ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌
News

ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌

by PratikshanaNews
3rd January 2025
ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!
News

ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!

by PratikshanaNews
3rd January 2025
ಬೆಂಗಳೂರು ಮೂಲದ ಕೋ ಆಪರೇಟಿವ್‌ ಬ್ಯಾಂಕ್‌ ಪುಣೆ ಮೂಲದ ಬ್ಯಾಂಕ್‌ನೊಂದಿಗೆ ವಿಲೀನ
News

ಬೆಂಗಳೂರು ಮೂಲದ ಕೋ ಆಪರೇಟಿವ್‌ ಬ್ಯಾಂಕ್‌ ಪುಣೆ ಮೂಲದ ಬ್ಯಾಂಕ್‌ನೊಂದಿಗೆ ವಿಲೀನ

by PratikshanaNews
2nd January 2025
33 ಡಿವೈಎಸ್ಪಿ, 132 ಪೊಲೀಸ್ ಇನ್ಸ್‌ಪೆಕ್ಟರ್​ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ
News

ಹೊಸ ವರ್ಷದ 2ನೇ ದಿನದಲ್ಲಿ 4 ಐಎಎಸ್‌ ಅಧಿಕಾರಿಗಳ ವರ್ಗಾವಣೆ

by PratikshanaNews
2nd January 2025
Pic Courtesy: Adi931 Bus Photography
News

ಕೆಎಸ್‌ಆರ್‌ಟಿಸಿ ನೌಕರರಿಗೂ 180 ದಿನಗಳ ಶಿಶುಪಾಲನಾ ರಜೆ ಮಂಜೂರು

by PratikshanaNews
2nd January 2025
ವಿಧಾನಸಭೆ ಮಾಜಿ ಸಭಾಧ್ಯಕ್ಷ ರಮೇಶ್‌ ಕುಮಾರ್‌ಗೆ ಕರ್ನಾಟಕ ಹೈಕೋರ್ಟ್‌ ಆಘಾತ
News

ವಿಧಾನಸಭೆ ಮಾಜಿ ಸಭಾಧ್ಯಕ್ಷ ರಮೇಶ್‌ ಕುಮಾರ್‌ಗೆ ಕರ್ನಾಟಕ ಹೈಕೋರ್ಟ್‌ ಆಘಾತ

by PratikshanaNews
2nd January 2025
Next Post

Good Father - ಒಳ್ಳೆಯ ತಂದೆ ಎನಿಸಿಕೊಳ್ಳಬೇಕಾ..? ಹೀಗೆ ಮಾಡಿ

Leave a Reply Cancel reply

Your email address will not be published. Required fields are marked *

ADVERTISEMENT

Trend News

ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ

by PratikshanaNews
19th February 2025
0
ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ
News

ಮಹಾಕುಂಭದಲ್ಲಿ ಭಕ್ತರು ಪವಿತ್ರ ಸ್ನಾನ ಮಾಡುತ್ತಿರುವ ನೀರು ಸ್ನಾನ ಮಾಡುವುದಕ್ಕೂ ಯೋಗ್ಯವಲ್ಲ ಎಂದು ಕೇಂದ್ರ ಸರ್ಕಾರದ ಆಧೀನದಲ್ಲಿ ಬರುವ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಸಲ್ಲಿಸಿದೆ....

Read more

ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ

by PratikshanaNews
18th February 2025
0
ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ
News

ಮುಸಲ್ಮಾನರ ಉಪವಾಸ ತಿಂಗಳು ಆಗಿರುವ ರಂಜಾನ್‌ನಲ್ಲಿ ಇಸ್ಲಾಂ ಧರ್ಮಕ್ಕೆ ಸೇರಿದ ರಾಜ್ಯ ಸರ್ಕಾರಿ ನೌಕರರು ಮತ್ತು ಗುತ್ತಿಗೆ ನೌಕರರಿಗೆ ತೆಲಂಗಾಣದಲ್ಲಿರುವ ಕಾಂಗ್ರೆಸ್‌ ಸರ್ಕಾರ ಮತ್ತು ಆಂಧ್ರಪ್ರದೇಶದಲ್ಲಿರುವ ತೆಲುಗು...

Read more

ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌

by PratikshanaNews
3rd January 2025
0
ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌
News

ಆಸ್ಟ್ರೇಲಿಯಾ ವಿರುದ್ಧದ 5ನೇ ಮತ್ತು ಕಡೆಯ ಟೆಸ್ಟ್‌ನ ಮೊದಲ ದಿನವೇ ಭಾರತ ಆಲೌಟ್‌ ಆಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 72.2 ಓವರ್‌ಗಳಲ್ಲಿ 185 ರನ್‌ಗೆ ಟೀಂ ಇಂಡಿಯಾದ ಎಲ್ಲಾ...

Read more

ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!

by PratikshanaNews
3rd January 2025
0
ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!
News

ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ಪತ್ನಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅತ್ಯಂತ ದುಬಾರಿ ಮೊತ್ತದ ಉಡುಗೊರೆಯನ್ನು ನೀಡಿದ್ದಾರೆ. ಜೋ ಬಿಡೆನ್‌ ಪತ್ನಿ ಜಿಲ್‌ ಬಿಡೆನ್‌ಗೆ ಪ್ರಧಾನಿ...

Read more
ADVERTISEMENT
ADVERTISEMENT
Every Minute News

© 2023 Pratikshana News

Navigate Site

  • News
  • Cinema
  • Sports
  • Health
  • Lifestyle
  • Gallery
  • Special

Follow Us

No Result
View All Result
  • News
  • Cinema
  • Sports
  • Health
  • Lifestyle
  • Gallery
  • Special

© 2023 Pratikshana News

error: Content is protected !!