ಅದಾನಿ ಬಗ್ಗೆ ರಾಹುಲ್​ ಗಾಂಧಿ, ಖರ್ಗೆ ಮಾಡಿದ್ದ ಭಾಷಣದ ತುಣುಕುಗಳಿಗೆ ಸಂಸತ್ತಿನ ಕಡತದಿಂದ ಕತ್ತರಿ

ಗುಜರಾತ್​ ಮೂಲದ ಉದ್ಯಮಿ ಗೌತಮ್​ ಅದಾನಿ ಬಗ್ಗೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಲೋಕಸಭೆಯಲ್ಲೂ, ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲೂ ಆಡಿರುವ ಮಾತುಗಳನ್ನು ಕಡತದಿಂದ ತೆಗೆದುಹಾಕಲಾಗಿದೆ.
ಮಂಗಳವಾರ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ರಾಹುಲ್​ ಗಾಂಧಿ ಅವರು ಮಾತಾಡುವ ವೇಳೆ ಹೇಗೆ 2014ರಿಂದ ಪ್ರಧಾನಿ ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ಗೌತಮ್​ ಅದಾನಿ ಅದೃಷ್ಟ ಬದಲಾಯಿತು, ಹೇಗೆ ಅದಾನಿ ಸಂಪತ್ತು ಶರವೇಗದಲ್ಲಿ ಏರಿಕೆ ಆಯಿತು, ಹೇಗೆ ದೇಶದ ಪ್ರಮುಖ ಕ್ಷೇತ್ರಗಳಲ್ಲಿ ಯೋಜನೆಗಳೆಲ್ಲವೂ ಅದಾನಿ ಪಾಲಾದವು ಎಂದು ವಿವರಿಸಿದ್ದರು.
ಅದಾನಿ ಮತ್ತು ನರೇಂದ್ರ ಮೋದಿ ನಂಟಿನ ಬಗ್ಗೆ ರಾಹುಲ್​ ಗಾಂಧಿ ಮಾಡಿದ 18 ಉಲ್ಲೇಖಗಳನ್ನು ಲೋಕಸಭೆಯ ಕಡತದಿಂದ ತೆಗೆದುಹಾಕಲಾಗಿದೆ.
ಇತ್ತ ನಿನ್ನೆ ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರೂ ಅದಾನಿ ಅಕ್ರಮ ಮತ್ತು ಸಂಪತ್ತು ಹೆಚ್ಚಳದ ಬಗ್ಗೆ ಮಾತಾಡಿದ್ದರು. ಆ ಮಾತುಗಳನ್ನೂ ರಾಜ್ಯಸಭೆಯ ಕಡತದಿಂದ ತೆಗೆದುಹಾಕಲಾಗಿದೆ.

LEAVE A REPLY

Please enter your comment!
Please enter your name here