ನೇಕಾರ ಸಮುದಾಯದ ನಾಲ್ಕರಿಂದ ಐವರಿಗೆ ಬಿಜೆಪಿ ಟಿಕೆಟ್​..? ಗಾಂಧಿನಗರದಿಂದ ದಯಾನಂದ್​​ಗೆ ಬಿಜೆಪಿ ಟಿಕೆಟ್​..?

ಕರ್ನಾಟಕ ವಿಧಾನಸಭೆಯಲ್ಲಿ ಈ ಬಾರಿ ನೇಕಾರ ಸಮುದಾಯದವರಿಗೆ ಬಿಜೆಪಿ ನಾಲ್ಕರಿಂದ ಐದು ಕ್ಷೇತ್ರಗಳಲ್ಲಿ ಟಿಕೆಟ್​ ನೀಡುವ ಸಾಧ್ಯತೆ ಇದೆ.

ರಾಜ್ಯದಲ್ಲಿ ನೇಕಾರರ ಸಮುದಾಯದ ಜನಸಂಖ್ಯೆ 60 ಲಕ್ಷಕ್ಕಿಂತಲೂ ಅಧಿಕ. 30 ವಿಧಾನಸಭಾ ಕ್ಷೇತ್ರಗಳಲ್ಲಿ ನೇಕಾರರು ಪ್ರಮುಖ ಮತದಾರ ವರ್ಗದಲ್ಲಿ ಒಬ್ಬರು.

ಯಾರಿಗೆ ಸಿಗಬಹುದು..?

ನೇಕಾರ ಸಮುದಾಯದ ಯುವ ನಾಯಕ ದಯಾನಂದ್​ ಜಿ ಎಸ್​ ಅವರಿಗೆ ಈ ಬಾರಿ ಟಿಕೆಟ್​ ಸಿಗುವ ಸಾಧ್ಯತೆ ಇದೆ.

ಬೆಂಗಳೂರು ನಗರದ ಗಾಂಧಿನಗರ ವಿಧಾನಸಭಾ ಕ್ಷೇತ್ರದಿಂದ  ಟಿಕೆಟ್​ಗಾಗಿ ಆಕಾಂಕ್ಷಿತರಾಗಿದ್ದು, ವರಿಷ್ಠರಿಗೂ ಮನವಿ ಸಲ್ಲಿಸಿದ್ದು, ಪಕ್ಷದ ಹೈಕಮಾಂಡ್​ ಸಕಾರತ್ಮಾಕವಾಗಿ ಸ್ಪಂದಿಸಿದೆ ಎಂಬ ಮಾಹಿತಿ ಇದೆ.

ದಯಾನಂದ್​ ಅವರು ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿದ್ದು, ರಾಜ್ಯ ಬಿಜೆಪಿಯಲ್ಲಿ ನೇಕಾರ ಘಟಕದ ರಾಜ್ಯ ಸಮಿತಿ ಸದಸ್ಯರಾಗಿದ್ದಾರೆ.

ಇತ್ತ ಈರಣ್ಣ ಜಡಿ, ಮನೋಹರ್ ಶಿರೋಳ್​, ಸೋಮಶೇಖರ್​ ಸೇರಿದಂತೆ ಹಲವರು ಈ ಬಾರಿ ನೇಕಾರರ ಕೋಟಾದಡಿ ಬಿಜೆಪಿ ಟಿಕೆಟ್​ ಆಕಾಂಕ್ಷಿತರು.

1983ರಲ್ಲಿ ಮಲ್ಲಿಕಾರ್ಜುನ ಬನ್ನಿ ಅವರು ನೇಕಾರರ ಸಮುದಾಯದ ಕೋಟಾದಡಿ ಟಿಕೆಟ್​ ಪಡೆದು ಬಿಜೆಪಿ ಶಾಸಕರಾಗಿ ಆಯ್ಕೆ ಆಗಿದ್ದರು. ಇದಾದ ಬಳಿಕ ಬಿಜೆಪಿಯಲ್ಲಿ ನೇಕಾರ ಸಮುದಾಯದಿಂದ ಯಾರೂ ಕೂಡಾ ಶಾಸಕರಾಗಿಲ್ಲ.

2013ರ ಚುನಾವಣೆಯಲ್ಲಿ ನಟಿ ಉಮಾಶ್ರೀ ಕಾಂಗ್ರೆಸ್​ನಿಂದ ತೇರದಾಳದಲ್ಲಿ ಸ್ಪರ್ಧಿಸಿ ಶಾಸಕಿಯಾಗಿದ್ದರು.

2009ರಲ್ಲಿ ಎಂ ಡಿ ಲಕ್ಷ್ಮೀನಾರಾಯಣ್​ ಅವರಿಗೆ ತುರುವೇಕೆರೆಯಿಂದ ಬಿಜೆಪಿ ಟಿಕೆಟ್​ ನೀಡಲಾಯಿತ್ತಾದರೂ ಅವರು ಸೋತರು. ಕಳೆದ ವರ್ಷವಷ್ಟೇ ಅವರು ಕಾಂಗ್ರೆಸ್​ ಬಿಟ್ಟು ಮತ್ತೆ ವಾಪಸ್​ ಬಿಜೆಪಿಗೆ ಬಂದಿದ್ದಾರೆ.

60 ಲಕ್ಷ ಜನಸಂಖ್ಯೆ ಇದ್ದರೂ ವಿಧಾನಸಭೆಯಲ್ಲಿ ನೇಕಾರ ಸಮುದಾಯದ ಶಾಸಕರು ಇಲ್ಲ. ಈ ಬಾರಿ ನೇಕಾರ ಸಮುದಾದಯವರಿಗೆ ಟಿಕೆಟ್​ ಕೊಡಲೇಬೇಕು ಎನ್ನುವುದು ಸಮಾಜದ ಒತ್ತಾಯ.

ನೇಕಾರ ಸಮುದಾಯದ ಸ್ವಾಮೀಜಿಗಳು ಕೂಡಾ ಚುನಾವಣೆಯಲ್ಲಿ ತಮ್ಮ ಸಮುದಾಯದವರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವಂತೆ ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಮೂರು ಪಕ್ಷಗಳಿಗೂ ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here