ADVERTISEMENT
ಬಿಜೆಪಿ ಸರ್ಕಾರದ ಸಚಿವ, ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ನಿರ್ಮಿಸುತ್ತಿರುವ ಉರಿಗೌಡ-ನಂಜೇಗೌಡ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆ ಆಗಿದೆ.
ಮೇ 18ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ಆರಂಭವಾಗಲಿದೆ.
1750ರಿಂದ 1799ರವರೆಗೆ ನಡೆದಿರುವ ಐತಿಹಾಸಿಕ ಘಟನೆಗಳನ್ನು ಆಧರಿಸಿ ಸಿನಿಮಾ ನಿರ್ಮಾಣವಾಗಲಿದೆ ಎಂದು ಪೋಸ್ಟರ್ನಲ್ಲಿ ಹೇಳಲಾಗಿದೆ.
ಸಚಿವ ಆರ್ ಅಶೋಕ್ ಮತ್ತು ಸಿ ಟಿ ರವಿ ಅರ್ಪಿಸುವ ಸಿನಿಮಾ ಇದಾಗಿದ್ದು, ಸಿನಿಮಾಕ್ಕೆ ಚಿತ್ರಕಥೆ ಸಚಿವ ಅಶ್ವತ್ಥ್ ನಾರಾಯಣ ಅವರದ್ದು. ಆರ್ ಎಸ್ ಗೌಡ ಅವರು ನಿದೇಶಿಸ್ತಿಸ್ತಿದ್ದಾರೆ.
ಇತಿಹಾಸದಲ್ಲಿಲ್ಲದ ಊರಿಗೌಡ-ನಂಜೇಗೌಡ ಪಾತ್ರವನ್ನು ಸೃಷ್ಟಿಸುವ ಮೂಲಕ ಒಕ್ಕಲಿಗ ಸಮುದಾಯವನ್ನು ಒಡೆಯುವ ಮತ್ತು ಅಪಮಾನಿಸುವ ಕೃತ್ಯವನ್ನು ಬಿಜೆಪಿ ಮಾಡ್ತಿದೆ ಎಂಬ ಆರೋಪಗಳ ನಡುವೆ ಸಿನಿಮಾ ಪೋಸ್ಟರ್ನ್ನು ಬಿಡುಗಡೆ ಮಾಡಲಾಗಿದೆ.
ಚಿತ್ರಕ್ಕೆ ಅನುಮತಿ ನೀಡಬಾರದು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಒಕ್ಕಲಿಗರ ಸಂಘ ಪತ್ರ ಬರೆದಿತ್ತು.
ADVERTISEMENT