ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕಾರಣದಿಂದ ಐಎಎಸ್ ಅಧಿಕಾರಿ ಡಿಕೆ ರವಿ ಮತ್ತು ಕುಸುಮಾ ಸಂಸಾರದಲ್ಲಿ ಬಿರುಗಾಳಿ ಎದ್ದಿತ್ತು.
ಐಎಎಸ್ ಅಧಿಕಾರಿ ಡಿ ಕೆ ರವಿ ಆತ್ಮಹತ್ಯೆಯ ಬಗ್ಗೆ ಸಿಬಿಐ ಸಲ್ಲಿಸಿರುವ ತನಿಖಾ ವರದಿಲ್ಲಿ ಈ ಬಗ್ಗೆ ಉಲ್ಲೇಖ ಮಾಡಲಾಗಿದೆ.
ಸಿಬಿಐ ವರದಿಯಲ್ಲಿ ಏನಿದೆ..?
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಜೊತೆಗೆ ತಮ್ಮ ಪತಿ ಡಿ ಕೆ ರವಿ ನಂಟು ಮುಂದುವರೆಸಿದ್ದರ ಬಗ್ಗೆ ಡಿಸೆಂಬರ್ 7, 2014ರಂದು ಸಿಟ್ಟಾಗಿದ್ದ ಕುಸುಮಾ ಹನುಮಂತರಾಯಪ್ಪ ಅವರು ಫೇಸ್ಬುಕ್ ಮೂಲಕ ರೋಹಿಣಿ ಸಿಂಧೂರಿಗೆ ಮೆಸೇಜ್ ಕಳುಹಿಸಿದ್ದರು.
ಒಂದು ವೇಳೆ ನಿನ್ನ ಪತಿಯನ್ನು ಯಾರು ಕಸಿದುಕೊಂಡರೇ ನೀನು ಏನು ಮಾಡುತ್ತೀಯ ಎಂದು ರೋಹಿಣಿ ಸಿಂಧೂರಿಗೆ ಕುಸುಮಾ ಅವರು ಪ್ರಶ್ನಿಸಿ ಸಂದೇಶ ಕಳುಹಿಸಿದ್ದರು.