ಕರ್ನಾಟಕ ಸೇರಿ 4 ರಾಜ್ಯಗಳ 5 ಸಹಕಾರಿ ಬ್ಯಾಂಕ್​ಗಳ ಮೇಲೆ RBI ನಿರ್ಬಂಧ

ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳ ಮೂರು ಸಹಕಾರಿ ಬ್ಯಾಂಕ್​​ಗಳಲ್ಲಿ ಗ್ರಾಹಕರು ಆರು ತಿಂಗಳ ಮಟ್ಟಿಗೆ ತಮ್ಮ ಠೇವಣಿ ಮೊತ್ತವನ್ನು ಡ್ರಾ ಮಾಡುವಂತಿಲ್ಲ ಎಂದು ಆರ್​ಬಿಐ ನಿರ್ಬಂಧ ಹೇರಿದೆ.

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿರುವ ಶಿಂಷಾ ಸಹಕಾರ ಬ್ಯಾಂಕ್​ ನಿಯಮಿತದ ಮೇಲೆ ಆರ್​ಬಿಐ ನಿರ್ಬಂಧ ಹೇರಿದೆ. ಈ ಸಹಕಾರ ಬ್ಯಾಂಕ್​ನ ಗ್ರಾಹಕರು ತಾವು ಇಟ್ಟಿರುವ ಠೇವಣಿಯನ್ನು ಆರು ತಿಂಗಳು ಡ್ರಾ ಮಾಡುವಂತಿಲ್ಲ ಎಂದು ಆರ್​ಬಿಐ ತನ್ನ ಆದೇಶದಲ್ಲಿ ತಿಳಿಸಿದೆ.

ಬ್ಯಾಂಕ್​ನ ಆರ್ಥಿಕ ಸ್ಥಿತಿ ಹದೆಗಟ್ಟಿರುವ ಕಾರಣ ಆರ್​ಬಿಐ ಈ ಆದೇಶ ಹೊರಡಿಸಿದೆ.

ಉತ್ತರಪ್ರದೇಶದ ಲಕ್ನೋದಲ್ಲಿರುವ ಹೆಚ್​ಸಿಬಿಎಲ್​ ಸಹಕಾರಿ ಬ್ಯಾಂಕ್​, ಮಹಾರಾಷ್ಟ್ರ ರಾಜ್ಯದ ಔರಾಂಗಬಾದ್​ನಲ್ಲಿರುವ ಆದರ್ಶ ಮಹಿಳಾ ನಾಗರಿ ಸಹಕಾರಿ ಬ್ಯಾಂಕ್​ ಮೇಲೂ ಇದೇ ರೀತಿಯ ನಿರ್ಬಂಧ ಹೇರಲಾಗಿದೆ.

ಆಂಧ್ರಪ್ರದೇಶದ ಅನಂತಪುರನಲ್ಲಿರುವ ಊರ್ವಕೊಂಡ ಸಹಕಾರಿ ಟೌನ್​ ಬ್ಯಾಂಕ್​, ಮಹಾರಾಷ್ಟ್ರದಲ್ಲಿರುವ ಶಂಕರರಾವ್​ ಮೊಹಿತೆ ಪಾಟೀಲ್​ ಸಹಕಾರಿ ಬ್ಯಾಂಕ್​ನ ಗ್ರಾಹಕರು ಗರಿಷ್ಠ 5 ಸಾವಿರ ರೂಪಾಯಿಯನ್ನು ಮಾತ್ರ ತಮ್ಮ ಉಳಿತಾಯ ಖಾತೆಯಿಂದ ಡ್ರಾ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.

ಆರ್​ಬಿಐನ ಪೂರ್ವಾನುಮತಿಯಲ್ಲದೇ ಈ ಐದು ಬ್ಯಾಂಕ್​ಗಳು ಸಾಲವನ್ನು ನೀಡುವಂತಿಲ್ಲ.

LEAVE A REPLY

Please enter your comment!
Please enter your name here