ಹೆಚ್​​ಡಿಕೆ-ರೇವಣ್ಣ ಹಾಸನ ಸಂಘರ್ಷ ತಾರಕಕ್ಕೆ – ಹೆಚ್​ಡಿಕೆ ಕರೆದಿದ್ದ ನಾಳೆಯ ಸಭೆ ದೇವೇಗೌಡರಿಂದಲೇ ರದ್ದು

ಹಾಸನ ನಗರ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್​ ಹಂಚಿಕೆ ಸಂಬಂಧ ಜೆಡಿಎಸ್​​ನಲ್ಲಿ ಸಂಘರ್ಷ ತಾರಕ್ಕೇರಿದೆ.

ನಾಳೆ ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರು ಕರೆದಿದ್ದ ಹಾಸನ ಜಿಲ್ಲೆ ಮತ್ತು ನಗರದ ಪಕ್ಷದ ಮುಖಂಡರ ಸಭೆಯನ್ನು ದಿಢೀರ್​ ರದ್ದುಗೊಳಿಸಲಾಗಿದೆ.

ಕುಮಾರಸ್ವಾಮಿ ಅವರು ಕರೆದಿದ್ದ ಸಭೆಯನ್ನು ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಹೆಚ್​ ಡಿ ದೇವೇಗೌಡ ಅವರು ರದ್ದಗೊಳಿಸುವ ಮೂಲಕ ಹಾಸನ ಟಿಕೆಟ್​ ಹಂಚಿಕೆ ವಿಷಯದಲ್ಲಿ ಮಧ್ಯಪ್ರವೇಶ ಮಾಡಿದ್ದಾರೆ.

ನಾಳೆ ಬೆಳಗ್ಗೆ ಬೆಂಗಳೂರಿನಲ್ಲಿರುವ ಜೆಡಿಎಸ್​ ಪಕ್ಷದ ಮುಖ್ಯ ಕಚೇರಿ ಜೆ ಪಿ ಭವನದಲ್ಲಿ ಮಾಜಿ ಸಿಎಂ ಹೆಚ್​ಡಿಕೆ ಅವರು ಪಕ್ಷದ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು, ಮಾಜಿ ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಹಾಸನ ನಗರ ಸಭೆ ಸದಸ್ಯರ ಮತ್ತು ಪಕ್ಷದ ಮುಖಂಡರ ಸಭೆಯನ್ನು ಕರೆಯಲಾಗಿತ್ತು.

ಈ ಸಭೆಯನ್ನು ಮುಂದೂಡಲಾಗಿದೆ ಎಂದು ಜೆಡಿಎಸ್​ ಪಕ್ಷದ ಮುಖ್ಯ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹಾಸನ ನಗರ ಕ್ಷೇತ್ರದ ಟಿಕೆಟ್​ ಆಕಾಂಕ್ಷಿಯಾಗಿರುವ ಹೆಚ್​ ಪಿ ಸ್ವರೂಪ್​ ಅವರ ಪರವಾಗಿ ಅಭಿಪ್ರಾಯ ಮೂಡಿಸುವ ಸಲುವಾಗಿ ಹೆಚ್​​ಡಿಕೆ ಅವರು ಸಭೆ ಕರೆದಿದ್ದರು.

ಆದರೆ ಹೆಚ್​ಡಿಕೆ ಮತ್ತು ರೇವಣ್ಣ ಕುಟುಂಬದ ನಡುವೆ ಸಂಘರ್ಷ ತಾರಕ್ಕೇರಿರುವ ಹಿನ್ನೆಲೆಯಲ್ಲಿ ದೇವೇಗೌಡರೇ ನಾಳೆಯ ಸಭೆಯನ್ನು ರದ್ದುಗೊಳಿಸಿದ್ದಾರೆ.

LEAVE A REPLY

Please enter your comment!
Please enter your name here