BREAKING: ಮತ್ತೆ ಕಾಂಗ್ರೆಸ್​​ಗೆ ಸಚಿವ ಎಸ್​ ಟಿ ಸೋಮಶೇಖರ್ ವಾಪಸ್​ ಸಾಧ್ಯತೆ – ಯಶವಂತಪುರ ಲೆಕ್ಕಾಚಾರ ಬದಲಾಗುತ್ತಾ..?

ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭ ಆಗಿರುವ ನಡುವೆ ಪ್ರಮುಖ ಬಿಜೆಪಿ ಸಚಿವರು ಈಗ ಕಾಂಗ್ರೆಸ್​ನತ್ತ ಮುಖ ಮಾಡಿದ್ದಾರೆ.

ಮೂಲಗಳ ಪ್ರಕಾರ ಸಹಕಾರ ಸಚಿವ ಎಸ್​ ಟಿ ಸೋಮಶೇಖರ್​ ಅವರು ಬಿಜೆಪಿಗೆ ರಾಜೀನಾಮೆ ಕೊಟ್ಟು ಕಾಂಗ್ರೆಸ್​ ಸೇರಬಹುದು.

ಆಪರೇಷನ್​ ಕಮಲದಲ್ಲಿ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಎಸ್​ಬಿಎಂ ಎಂದೇ ಕರೆಸಿಕೊಳ್ತಿದ್ದ ಅಂದರೆ ಎಸ್​ಟಿ ಸೋಮಶೇಖರ್​, ಮುನಿರತ್ನ ಮತ್ತು ಬೈರತಿ ಬಸವರಾಜ್​ ಅವರು ಬಿಜೆಪಿಗೆ ಸೇರ್ಪಡೆ ಆಗಿದ್ದರು.

ಆದರೆ ಯಶವಂತಪುರ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಟಿಕೆಟ್​ನಿಂದ ಸ್ಪರ್ಧಿಸಿದರೆ ಸೋಲು ಖಚಿತ ಎಂಬ ಆತಂಕದ ಹಿನ್ನೆಲೆಯಲ್ಲಿ ಈಗ ಮತ್ತೆ ಮಾತೃಪಕ್ಷ ಕಾಂಗ್ರೆಸ್​​ಗೆ ಬರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

2013, 2018ರ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷದ ಟಿಕೆಟ್​ನಿಂದ ಸೋಮಶೇಖರ್​ ಗೆದ್ದಿದ್ದರು. ಆದರೆ 2019ರಲ್ಲಿ ಬಿಜೆಪಿ ಸೇರಿ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್​ನಿಂದ ಗೆದ್ದಿದ್ದರು.

ಆದರೆ ಸದ್ಯಕ್ಕೆ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಪರಿಸ್ಥಿತಿ ಸಚಿವ ಸೋಮಶೇಖರ್​ ಅವರಿಗೆ ಪೂರಕವಾಗಿಲ್ಲ. ಒಂದು ವೇಳೆ ಬಿಜೆಪಿಯಿಂದಲೇ ಸ್ಪರ್ಧಿಸಿದರೆ ಜೆಡಿಎಸ್​ನ ಜವರಾಯಿಗೌಡ ಅವರು ಗೆಲ್ಲಬಹುದು ಎನ್ನುವುದು ಸ್ವತಃ ಸಚಿವರೇ ನಡೆಸಿರುವ ಆಂತರಿಕ ಸಮೀಕ್ಷೆಯಲ್ಲಿ ಗೊತ್ತಾಗಿದೆ.

ಬಿಜೆಪಿಯಲ್ಲಿ ಸ್ವತಃ ಯಡಿಯೂರಪ್ಪ ಅವರೇ ಮೂಲೆಗುಂಪಾಗಿರುವುದು ಕೂಡಾ ಚುನಾವಣೆಯಲ್ಲಿ ಹಿನ್ನಡೆಗೆ ಕಾರಣ ಆಗಬಹುದು ಎಂಬುದು ಸೋಮಶೇಖರ್​ ಆತಂಕ.

ಈ ಹಿನ್ನೆಲೆಯಲ್ಲಿ ಮತ್ತೆ ಕಾಂಗ್ರೆಸ್​​ಗೆ ಮರಳು ಬಗ್ಗೆ ಯೋಚನೆ ಮಾಡಿದ್ದಾರೆ. 

ಬಿಜೆಪಿ ವಿರುದ್ಧ ಇರುವ ಆಡಳಿತ ವಿರೋಧಿ ಅಲೆಯೂ ತಮಗೆ ಮಾರಕವಾಗಬಹುದು ಎನ್ನುವುದು ಸೋಮಶೇಖರ್​ ಆತಂಕ.

ಯಶವಂತಪುರ ಕ್ಷೇತ್ರದಲ್ಲಿ 75 ಸಾವಿರ ದಲಿತ ಮತಗಳು ಮತ್ತು 25 ಸಾವಿರ ಮುಸಲ್ಮಾನ ಮತಗಳಿವೆ. ಒಂದು ವೇಳೆ ಬಿಜೆಪಿಯಿಂದ ಸ್ಪರ್ಧಿಸಿದರೆ ಈ ಮತಗಳೂ ಕೈ ತಪ್ಪಬಹುದು ಎಂಬ ಆತಂಕದಲ್ಲಿ ಸಚಿವ ಸೋಮಶೇಖರ್​ ಇದ್ದಾರೆ.

LEAVE A REPLY

Please enter your comment!
Please enter your name here