BIG BREAKING: ಮಂಗಳೂರು ದಕ್ಷಿಣ ಕಾಂಗ್ರೆಸ್​ ಟಿಕೆಟ್​ ಪದ್ಮರಾಜ್​ ರಾಮಯ್ಯ ಅವರಿಗೆ

ಮೊದಲ ಹಂತದಲ್ಲಿ 124 ವಿಧಾನಸಭಾ ಕ್ಷೇತ್ರಗಳಿಗೆ ಟಿಕೆಟ್​ ಅಂತಿಮಗೊಳಿಸಿರುವ ಕಾಂಗ್ರೆಸ್​ ಉಳಿದ 100 ಕ್ಷೇತ್ರಗಳಿಗೂ ಟಿಕೆಟ್​ ಅಂತಿಮಗೊಳಿಸುತ್ತಿದೆ.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಬಿಲ್ಲವ ಸಮುದಾಯ ಪದ್ಮರಾಜ್​ ರಾಮಯ್ಯ ಅವರಿಗೆ ಕಾಂಗ್ರೆಸ್​ ಟಿಕೆಟ್​ ಅಂತಿಮಗೊಳಿಸಿದೆ.

ಈ ಕ್ಷೇತ್ರದಿಂದ ಮಾಜಿ ಶಾಸಕ ಜೆ ಆರ್​ ಲೋಬೋ ಮತ್ತು ಮಾಜಿ ಎಂಎಲ್​ಸಿ ಐವಾನ್​ ಡಿಸೋಜಾ ಅವರು ಟಿಕೆಟ್​ ಆಕಾಂಕ್ಷಿಗಳಾಗಿದ್ದರು.

ಆದರೆ ಈ ಬಾರಿ ಮಂಗಳೂರು ದಕ್ಷಿಣದಲ್ಲಿ ಹೊಸ ಜಾತಿ ಸಮೀಕರಣಕ್ಕೆ ಕೈಹಾಕಿರುವ ಕಾಂಗ್ರೆಸ್​ ಪದ್ಮರಾಜ್​ ರಾಮಯ್ಯ ಅವರಿಗೆ ಟಿಕೆಟ್​ ಅಂತಿಮಗೊಳಿಸಿದೆ.

ಪದ್ಮರಾಜ್​ ರಾಮಯ್ಯ ಅವರು ವಕೀಲರು. ಕುದ್ರೋಳಿ ದೇವಸ್ಥಾನದ ಕೋಶಾಧಿಕಾರಿ ಮತ್ತು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರ ಆಪ್ತರು.

ವಿಶೇಷ ಎಂದರೆ ಪದ್ಮರಾಜ್​ ರಾಮಯ್ಯ ಅವರು ಟಿಕೆಟ್​ ಬಯಸಿ ಕಾಂಗ್ರೆಸ್​​ಗೆ ಅರ್ಜಿ ಹಾಕಿಲ್ಲ.

ಆದರೆ ಬಿಲ್ಲವ ಸಮುದಾಯದ ಪ್ರಮುಖರಿಗೆ ಮಂಗಳೂರು ದಕ್ಷಿಣದಿಂದ ಕಾಂಗ್ರೆಸ್​ ಸ್ವಯಂಪ್ರೇರಿತವಾಗಿ ಟಿಕೆಟ್​ ನೀಡಿರುವುದು ಕಾಂಗ್ರೆಸ್​ ಬಿಲ್ಲವ ಮತ ಪ್ರಾಬಲ್ಯ ಇರುವ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಶಿವಮೊಗ್ಗದಲ್ಲಿ ಲಾಭ ಆಗಬಹುದು ಎನ್ನುವ ಲೆಕ್ಕಾಚಾರ.

ಮಂಗಳೂರು ದಕ್ಷಿಣದಲ್ಲಿ ಈ ಬಾರಿ ಪದ್ಮರಾಜ್​ ರಾಮಯ್ಯ ಅವರಿಗೆ ಟಿಕೆಟ್​ ನೀಡುವಂತೆ ಕ್ರಿಶ್ಚಿಯನ್​ ಸಮುದಾಯದವರೇ ಕಾಂಗ್ರೆಸ್​ ನಾಯಕರ ಮೇಲೆ ಒತ್ತಡ ಹೇರಿದ್ದರು ಎಂಬ ಮಾಹಿತಿ ಇದೆ.

ಮಂಗಳೂರು ದಕ್ಷಿಣದಲ್ಲಿ ಕಳೆದ ಚುನಾವಣೆಯಲ್ಲಿ ವೇದವ್ಯಾಸ್​ ಕಾಮತ್​ ಶಾಸಕರಾಗಿ ಆಯ್ಕೆ ಆಗಿದ್ದರು.