ಶಿವಸೇನೆ ಮತ್ತು ಎನ್ಸಿಪಿಗೆ ಗುಂಪು ಗುಂಪಾಗಿ ಆಪರೇಷನ್ ಕಮಲ ಮಾಡಿದ್ದ ಬಿಜೆಪಿಗೆ ಮಹಾರಾಷ್ಟ್ರದಲ್ಲಿ ಭಾರೀ ಆಘಾತದ ನಿರೀಕ್ಷೆ ಎದುರಾಗಿದೆ.
ಸಮೀಕ್ಷೆಯ ಪ್ರಕಾರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದಲ್ಲಿ ಎನ್ಸಿಪಿ ವಿಭಜನೆಯಾಗಿ ಬಿಜೆಪಿ ಜೊತೆಗೆ ಕೈಜೋಡಿಸಿದ ಬಳಿಕ ಮಹಾರಾಷ್ಟ್ರದಲ್ಲಿ ಬಿಜೆಪಿಯ ಪರ ಇದ್ದ ಜನಾಭಿಪ್ರಾಯ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಬಿಜೆಪಿ ಪರ ಇದ್ದ ಜನಾಭಿಪ್ರಾಯ ಶೇಕಡಾ 33.8ರಿಂದ ಶೇಕಡಾ 26.8ಕ್ಕೆ ಕುಸಿದಿದೆ. ಕಾಂಗ್ರೆಸ್ ಪರ ಶೇಕಡಾ 19ರಷ್ಟು ಮಂದಿ ಮತ್ತು ಉದ್ಧವ್ ಠಾಕ್ರೆ ಶಿವಸೇನೆ ಪರ ಶೇಕಡಾ 12.7ರಷ್ಟು ಜನಾಭಿಪ್ರಾಯವಿದೆ.
ಮಹಾರಾಷ್ಟ್ರದಲ್ಲಿ ಸಕಾಲ್ ನಡೆಸಿರುವ ಸಮೀಕ್ಷೆ ಪ್ರಕಾರ ಎನ್ಸಿಪಿ ನಾಯಕ ಶರದ್ ಪವಾರ್ ಪರ ಶೇಕಡಾ 14.9ರಷ್ಟು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಜಿತ್ ಪವಾರ್ ಅವರ ಪರ ಶೇಕಡಾ 14.9ರಷ್ಟು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಏಕನಾಥ್ ಶಿಂಧೆ ಪರ ಜನಾಭಿಪ್ರಾಯ ಶೇಕಡಾ 5.5ರಿಂದ ಶೇಕಡಾ 4.9ಕ್ಕೆ ಕುಸಿದಿದೆ.
ಸಕಾಲ್ ಸಮೀಕ್ಷೆಯ ಪ್ರಕಾರ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಪರ ಶೇಕಡಾ 37.4ರಷ್ಟು ಜನಾಭಿಪ್ರಾಯವಿದ್ದು, ಮಹಾ ವಿಕಾಸ್ ಅಗಾಡಿ ಅಂದರೆ ಕಾಂಗ್ರೆಸ್ ಮತ್ತು ಎನ್ಸಿಪಿ ಹಾಗೂ ಉದ್ಧವ್ ಠಾಕ್ರೆ ಬಣದ ಪರವಾಗಿ ಒಟ್ಟು ಶೇಕಡಾ 41.5ರಷ್ಟು ಜನಾಭಿಪ್ರಾಯವಿದೆ.
ADVERTISEMENT
ADVERTISEMENT