ಸಮಾವೇಶಕ್ಕೆ ಬಾರದ ಜನ, ಕುರ್ಚಿ ಖಾಲಿ ಖಾಲಿ – ಬಿಜೆಪಿ ವಿಜಯಸಂಕಲ್ಪಯಾತ್ರೆ ರದ್ದು – ಕೋಲಾರದಲ್ಲಿ ಬಿಜೆಪಿಗೆ ಮುಜುಗರ

ಕೋಲಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸಿಯೇ ಸೋಲಿಸ್ತೀವಿ ಎಂದು ಪಣತೊಟ್ಟಿರುವ ಬಿಜೆಪಿಗೆ ದೊಡ್ಡ ಮುಖಭಂಗವಾಗಿದೆ.

ಕೋಲಾರದಲ್ಲಿ ಬಿಜೆಪಿ ಆಯೋಜಿಸಿದ್ದ ವಿಜಯಸಂಕಲ್ಪ ಯಾತ್ರೆ ಜನರಿಲ್ಲದೇ ದಿಢೀರ್​ ರದ್ದಾಗಿದೆ.

ಕೋಲಾರದಲ್ಲಿ ಬಿಜೆಪಿ ಬೃಹತ್​ ಸಮಾವೇಶಕ್ಕೆ ಹಾಕಲಾಗಿದ್ದ ಕುರ್ಚಿಗಳೆಲ್ಲವೂ ಜನರಿಲ್ಲದೇ ಖಾಲಿ ಖಾಲಿಯಾಗಿದ್ದವು.

ಸಮಾವೇಶದ ಜವಾಬ್ದಾರಿಯನ್ನು ಕೋಲಾರ ಉಸ್ತುವಾರಿ ಸಚಿವ ಮುನಿರತ್ನ, ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಡಾ ಕೆ ಸುಧಾಕರ್​, ಕಂದಾಯ ಸಚಿವ ಆರ್​ ಅಶೋಕ್​ ಅವರಿಗೆ ವಹಿಸಲಾಗಿತ್ತು.

ಸಮಾವೇಶಕ್ಕೆ ಕೇಂದ್ರ ಸಚಿವ ಅನುರಾಗ್​ ಠಾಕೂರ್​ ಅವರು ಬರಬೇಕಿತ್ತು.

ಮಾಲೂರು ಪಟ್ಟಣದಲ್ಲಿ ರೋಡ್​ ಶೋ ಬಳಿಕ ಭಾನುವಾರ ಸಂಜೆ 5 ಗಂಟೆಗೆ ಕೋಲಾರ ನಗರದ ಬೈರೇಗೌಡ ಬಡಾವಣೆಯಲ್ಲಿ ಬೃಹತ್​ ಸಮಾವೇಶ ಆಯೋಜಿಸಿದ್ದರು.

ಆದರೆ ಸಮಾವೇಶಕ್ಕೆ ಜನರೇ ಬಾರದ ಕಾರಣ ವಿಜಯ ಸಂಕಲ್ಪ ಯಾತ್ರೆ ಸಮಾವೇಶವನ್ನು ದಿಢೀರ್​ ರದ್ದುಗೊಳಿಸಿ ಮೂವರು ಸಚಿವರು ಕೋಲಾರದಿಂದ ನಿರ್ಗಮಿಸಿದರು.

LEAVE A REPLY

Please enter your comment!
Please enter your name here