ಬಿಜೆಪಿಗೆ ಕಾಂಗ್ರೆಸ್​​ನಿಂದ ಶಿವರಾತ್ರಿ ಆಘಾತ

ಶಿವರಾತ್ರಿಯಂದು ಆಡಳಿತರೂಢ ಬಿಜೆಪಿಗೆ ಕಾಂಗ್ರೆಸ್​ ಆಘಾತ ನೀಡಿದೆ.
ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಕೊನೆಯ ಬಜೆಟ್​ ಮಂಡನೆ ವೇಳೆ ಕಿವಿ ಮೇಲೆ ಚೆಂಡು ಹೂ ಇಟ್ಟುಕೊಂಡು ಅಭಿಯಾನ ಮಾಡಿದ್ದ ಕಾಂಗ್ರೆಸ್​ ಈಗ ಹೊಸ ಅಭಿಯಾನ ಶುರು ಮಾಡಿದೆ.
ಕಾಂಪೌಂಡ್​ ಗೋಡೆಗಳು, ಮನೆಗಳ ಗೋಡೆಗಳ ಮೇಲೆ ಬಿಜೆಪಿ ಕಾರ್ಯಕರ್ತರು ಅಂಟಿಸಿರುವ ಬಿಜೆಪಿಯೇ ಭರವಸೆ ಪೋಸ್ಟರ್​ಗಳ ಮೇಲೆ ಕಾಂಗ್ರೆಸ್​ ಕಿವಿ ಮೇಲೆ ಹೂವ ಎಂಬ ಭಿತ್ತಿಪತ್ರವನ್ನು ಅಂಟಿಸಿದೆ.
ಭರವಸೆ, ಭರವಸೆ, ಬುರುಡೆ ಭರವಸೆ – ಸಾಕು, ಕಿವಿ ಮೇಲೆ ಹೂವ ಎಂಬ ಪತ್ರಗಳನ್ನು ಬಿಜೆಪಿ ಪೋಸ್ಟರ್​ಗಳ ಮೇಲೆ ಅಂಟಿಸಿದೆ.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ 224 ವಿಧಾನಸಭಾ ಕ್ಷೇತ್ರಗಳಲ್ಲೂ ಗೋಡೆಗಳ ಮೇಲೆ ತನ್ನ ಸರ್ಕಾರ ಸಾಧನೆಯನ್ನು ಬಿಂಬಿಸುವ ಮಾಹಿತಿಯುಳ್ಳ ಮತ್ತು ಬಿಜೆಪಿಯೇ ಭರವಸೆ ಎಂಬ ಒಕ್ಕಣೆಯುಳ್ಳ ಪೋಸ್ಟರ್​ಗಳನ್ನು ಅಂಟಿಸಿತ್ತು.
ಅದಕ್ಕೆ ಕಾಂಗ್ರೆಸ್​ ಈಗ ಪ್ರತಿ ಅಭಿಯಾನ ಕೈಗೊಂಡಿದೆ.
ಈ ಹಿಂದೆ ಬಿಜೆಪಿ ಸರ್ಕಾರದ ಶೇಕಡಾ 40ರಷ್ಟು ಕಮಿಷನ್​ ಹಗರಣ ವಿರುದ್ಧ ಕಾಂಗ್ರೆಸ್​ PAYCM ಹೆಸರಲ್ಲಿ ಮುಖ್ಯಮಂತ್ರಿ ಅಧಿಕೃತ ನಿವಾಸದ ಕಾಂಪೌಂಡ್​ ಸೇರಿದಂತೆ ಹಲವು ಕಡೆಗಳಲ್ಲಿ ಪೋಸ್ಟರ್​​ನ್ನು ಅಂಟಿಸಿತ್ತು.
ಕಾಂಗ್ರೆಸ್​ನ PAYCM ಅಭಿಯಾನ ಬಿಜೆಪಿಗೆ ದೊಡ್ಡ ಮುಜುಗರ ಉಂಟು ಮಾಡಿತ್ತು.

LEAVE A REPLY

Please enter your comment!
Please enter your name here