ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ತಮಿಳುನಾಡಿನಲ್ಲಿ ಮಳೆ ಅಬ್ಬರ ಜೋರಾಗಿದೆ. ಇದರಿಂದ ತಮಿಳುನಾಡಿಗೆ ತೆರಳುವ ರೈಲು ಸೇವೆ ರದ್ದುಗೊಳಿಸಲಾಗಿದೆ.
ನೈರುತ್ಯ ರೈಲ್ವೆ ಇಲಾಖೆ ಸುಮಾರು ಹತ್ತಕ್ಕೂ ಹೆಚ್ಚು ರೈಲುಗಳ ಸೇವೆ ಸಂಪೂರ್ಣ ರದ್ದುಗೊಳಿಸಿದೆ. ತಮಿಳುನಾಡಿನಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದ್ದು, ಬಹುತೇಕ ರೈಲ್ವೇ ನಿಲ್ದಾಣಗಳು ಮಳೆ ನೀರಿನಿಂದ ಕೂಡಿದ್ದು, ಕೆಲವೆಡೆ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.
ಹೀಗಾಗಿ ತಮಿಳುನಾಡಿಗೆ ಸಂಚರಿಸುವ ರೈಲುಗಳು ಸಂಪೂರ್ಣ ರದ್ದಾಗಿದೆ. ಇದಕ್ಕೆ ಪ್ರಯಾಣಿಕರು ಸಹಕರಿಸುವಂತೆ ನೈರುತ್ಯ ರೈಲ್ವೇ ಇಲಾಖೆ ಮನವಿ ಮಾಡಿದ್ದಾರೆ.
ಯಾವ ಯಾವ ರೈಲು ಸೇವೆ ರದ್ದು:
ರೈಲಿನ ಸಂಖ್ಯೆ:12007
ಡಾ. ಎಂಜಿಆರ್ ಚೈನೈ – ಮೈಸೂರುರೈಲಿನ ಸಂಖ್ಯೆ12008
ಮೈಸೂರು – ಡಾ. ಎಂಜಿಆರ್ ರೈಲ್ವೇ ನಿಲ್ದಾಣ (ಸೆಂಟ್ರಲ್)
ರೈಲಿನ ಸಂಖ್ಯೆ 22625
ಡಾ. ಎಂಜಿಆರ್ ಚೆನೈ ಸೆಂಟ್ರಲ್- ಕೆ. ಎಸ್.ಆರ್ ಬೆಂಗಳೂರು
ರೈಲಿನ ಸಂಖ್ಯೆ 22626
ಕೆ.ಎಸ್.ಆರ್ ಬೆಂಗಳೂರು – ಡಾ. ಎಂಜಿಆರ್ ಚೆನೈ ಸೆಂಟ್ರಲ್
ರೈಲಿನ ಸಂಖ್ಯೆ12639
ಡಾ. ಎಂಜಿಆರ್ ಚೆನೈ ಸೆಂಟ್ರಲ್ – ಕೆ.ಎಸ್.ಆರ್ ಬೆಂಗಳೂರು
ರೈಲಿನ ಸಂಖ್ಯೆ 12640
ಕೆ.ಎಸ್.ಆರ್ ಬೆಂಗಳೂರು- ಡಾ. ಎಂಜಿಆರ್ ಚೆನೈ ಸೆಂಟ್ರಲ್
ರೈಲಿನ ಸಂಖ್ಯೆ 12027
ಡಾ. ಎಂಜಿಆರ್ ಚೆನೈ ಸೆಂಟ್ರಲ್ – ಕೆ.ಎಸ್.ಆರ್ ಬೆಂಗಳೂರು
ರೈಲಿನ ಸಂಖ್ಯೆ 12028
ಕೆ.ಎಸ್.ಆರ್ ಬೆಂಗಳೂರು – ಡಾ. ಎಂಜಿಆರ್ ಚೆನೈ ಸೆಂಟ್ರಲ್
ರೈಲಿನ ಸಂಖ್ಯೆ 12608
ಕೆ.ಎಸ್.ಆರ್ ಬೆಂಗಳೂರು – ಡಾ. ಎಂಜಿಆರ್ ಚೆನೈ ಸೆಂಟ್ರಲ್
ರೈಲಿನ ಸಂಖ್ಯೆ 12609
ಡಾ. ಎಂಜಿಆರ್ ಚೆನೈ ಸೆಂಟ್ರಲ್ – ಮೈಸೂರು