Friday, May 9, 2025
Every Minute News
  • News
  • Cinema
  • Sports
  • Health
  • Lifestyle
  • Gallery
  • Special
No Result
View All Result
  • News
  • Cinema
  • Sports
  • Health
  • Lifestyle
  • Gallery
  • Special
No Result
View All Result
Every Minute News
No Result
View All Result
ADVERTISEMENT
Home News

ದೇವೇಗೌಡರ ಕುಟುಂಬದ ಮೈಂಡ್​ ಗೇಮ್​ – ಶರಣಾಗತಿಯೋ..? ಶರಣಾಗತಿಗೂ ಮೊದಲೇ ಪ್ರಜ್ವಲ್​ ಅರೆಸ್ಟೋ..?

PratikshanaNews by PratikshanaNews
29th May 2024
in News
0
ದೇವೇಗೌಡರ ಕುಟುಂಬದ ಮೈಂಡ್​ ಗೇಮ್​ – ಶರಣಾಗತಿಯೋ..? ಶರಣಾಗತಿಗೂ ಮೊದಲೇ ಪ್ರಜ್ವಲ್​ ಅರೆಸ್ಟೋ..?
0
SHARES
53
VIEWS
Share on FacebookShare on Twitter

ಸಾಮೂಹಿಕ ಲೈಂಗಿಕ ಹಗರಣದಲ್ಲಿ ಆರೋಪಿಯಾಗಿರುವ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್​ ರೇವಣ್ಣ ಜೂನ್​ 1ರಂದು ಬೆಳಗ್ಗೆ 10 ಗಂಟೆಗೆ ವಿಶೇಷ ತನಿಖಾ ತಂಡದ ಎದುರು ವಿಚಾರಣೆಗೆ ಹಾಜರಾಗಲಿದ್ದಾರೆ.

ಸೋಮವಾರ ಬಿಡುಗಡೆ ಮಾಡಿರುವ ವೀಡಿಯೋ ಸಂದೇಶದಲ್ಲಿ ತಾವು ಶನಿವಾರದಂದು ವಿಚಾರಣೆಗೆ ಹಾಜರಾಗುವ ಬಗ್ಗೆ ಅತ್ಯಾಚಾರ ಪ್ರಕರಣದ ಆರೋಪಿ ಪ್ರಜ್ವಲ್ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ.

ಪ್ರಜ್ವಲ್​ ವಿಚಾರಣೆಗೆ ಹಾಜರಾಗುವುದಕ್ಕೂ 4 ದಿನ ಮೊದಲು ಅಂದರೆ ಮಂಗಳವಾರ ಎಸ್​ಐಟಿ ಪೊಲೀಸರು ಹಾಸನದಲ್ಲಿರುವ ಸಂಸದರ ನಿವಾಸದಲ್ಲಿ ಸಾಕ್ಷ್ಯ ಸಂಗ್ರಹಿಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯ ಸಮೇತ ಎಸ್​ಐಟಿ ಸಂಸದರ ಮನೆಯಲ್ಲಿ ಸಾಕ್ಷ್ಯ ಸಂಗ್ರಹಿಸಿದೆ.

ಇವತ್ತು ನಸುಕಿನ ಜಾವ 4 ಗಂಟೆಗೆ ಸಾಕ್ಷ್ಯ ಸಂಗ್ರಹ ಪ್ರಕ್ರಿಯೆ ಮುಕ್ತಾಯವಾಗಿದೆ. ಸಾಕ್ಷ್ಯದ ಭಾಗವಾಗಿ ಪ್ರಜ್ವಲ್​ ಬಳಸ್ತಿದ್ದ ಹಾಸಿಗೆ, ದಿಂಬು, ಹೊದಿಕೆ ಸೇರಿದಂತೆ ಸಂಸದರು ಬಳಸ್ತಿದ್ದ ಹಲವು ವಸ್ತುಗಳನ್ನು ವಶಪಡಿಸಿಕೊಂಡು ಬೆಂಗಳೂರಿಗೆ ಕೊಂಡೊಯ್ದಿದೆ.

ಪ್ರಜ್ವಲ್​ ವಿರುದ್ಧ ದಾಖಲಾಗಿರುವ ಮೂರು ಎಫ್​ಐಆರ್​ಗಳ ಪೈಕಿ ಒಂದು ಎಫ್​ಐಆರ್​ನಲ್ಲಿ ಹಾಸನ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳ ಕಚೇರಿ ಪಕ್ಕದಲ್ಲೇ ಇರುವ ಸಂಸದರ ನಿವಾಸದಲ್ಲಿ ಪ್ರಜ್ವಲ್​ ತಮ್ಮ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.

ತಾತ ಹೆಚ್​ ಡಿ ದೇವೇಗೌಡ ಅವರಿಗೆ ಸರ್ಕಾರದಿಂದ ನೀಡಲಾಗಿದ್ದ ಬಂಗಲೆಯನ್ನೂ ಕಾಮಕೃತ್ಯಗಳಿಗೆ ಪ್ರಜ್ವಲ್​ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪವೂ ಇದೆ.

ವಿಮಾನದ ಟಿಕೆಟ್​ ಬುಕ್​:

ಜೂನ್​ 1ರಂದು ಶನಿವಾರ ಬೆಳಗ್ಗೆ ಎಸ್​ಐಟಿ ಮುಂದೆ ಹಾಜರಾಗುವುದಾಗಿ ಪ್ರಜ್ವಲ್​ ಘೋಷಿಸಿಕೊಂಡಿರುವ ಹಿನ್ನೆಲೆಯಲ್ಲಿ ಜರ್ಮನಿಯ ಮ್ಯೂನಿಚ್​ ನಗರದಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವುದಕ್ಕಾಗಿ ಮೇ 31ಕ್ಕೆ ಲುಫ್ತಾನಾ ಏರ್​ಲೈನ್ಸ್​ನಲ್ಲಿ ಟಿಕೆಟ್​ ಬುಕ್​ ಮಾಡಿದ್ದಾರೆ ಎಂಬ ಮಾಹಿತಿ ಇದೆ.

ಶರಣಾಗತಿಗೂ ಮೊದಲೇ ಬಂಧನ..?

ಎಸ್​​ಐಟಿ ಮುಂದೆ ಜೂನ್​ 1ರಂದು ಪ್ರಜ್ವಲ್​ ರೇವಣ್ಣ ಶರಣಾಗಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದುವರೆಗೆ ಮೂರು ಅತ್ಯಾಚಾರ ಪ್ರಕರಣಗಳಲ್ಲೂ ಪ್ರಜ್ವಲ್​ ಮೊದಲನೇ ಆರೋಪಿ.

ಏಪ್ರಿಲ್​ 28ರಂದು ಎಸ್​ಐಟಿ ಮೊದಲನೇ ಎಫ್​ಐಆರ್​ ದಾಖಲಿಸಿದ ಬಳಿಕ ಪ್ರಜ್ವಲ್​ ನಾಪತ್ತೆಯಾಗಿದ್ದು, ಆ ಕಾರಣ ಪ್ರಜ್ವಲ್​ ಬಂಧಿಸಲಾಗದೇ ಮೇ 1ರಂದು ವಿಚಾರಣೆಗೆ ಹಾಜರಾಗುವಂತೆ ಎಸ್​ಐಟಿ ಪ್ರಜ್ವಲ್​​ಗೆ ಸಮನ್ಸ್​ ನೀಡಿತ್ತು.

ಆದರೆ ಮೇ 1ರಂದು ತಮ್ಮ ವಕೀಲರ ಮೂಲಕ ಎಸ್​ಐಟಿಗೆ ಉತ್ತರಿಸಿದ್ದ ಪ್ರಜ್ವಲ್​ ತಾವು ಹೊರಗಡೆ ಪ್ರವಾಸದಲ್ಲಿರುವ ಕಾರಣ ವಿಚಾರಣೆಗೆ ಹಾಜರಾಗಲು 1 ವಾರ ಸಮಯ ಕೇಳಿದ್ದರು. ಆದರೆ ಆ ಒಂದು ವಾರ ಕಳೆದ ಬಳಿಕವೂ ಪ್ರಜ್ವಲ್​ ಎಸ್​ಐಟಿ ಎದುರು ಹಾಜರಾಗಲಿಲ್ಲ.

ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಪ್ರಜ್ವಲ್​ ವಿರುದ್ಧ ಮೇ 4ರ ವೇಳೆಗೆ ಎಸ್​ಐಟಿ ಎರಡನೇ ಲುಕ್​​ಔಟ್​ ನೋಟಿಸ್​ ಹೊರಡಿಸಿತ್ತು.

ಇತ್ತ, ಎಸ್​ಐಟಿ ಪೊಲೀಸರ ಮನವಿ ಮೇರೆಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಜ್ವಲ್​ ರೇವಣ್ಣ ವಿರುದ್ಧ ಇಂಟರ್​ಪೋಲ್​ ಮೂಲಕ ಮೇ 7ರಂದು ಬ್ಲೂ ಕಾರ್ನರ್​ ನೋಟಿಸ್​ ಹೊರಡಿಸಲಾಗಿತ್ತು.

ಬ್ಲೂ ಕಾರ್ನರ್​ ನೋಟಿಸ್​​ ಪ್ರಕಾರ ಪ್ರಜ್ವಲ್​ ಎಲ್ಲಿದ್ದಾನೆ..? ಎಂಬುದನ್ನು ಪತ್ತೆ ಹಚ್ಚಿ ಇಷ್ಟೊತ್ತಿಗಾಗಲೇ ಇಂಟರ್​ಪೋಲ್​ ಪತ್ತೆ ಹಚ್ಚಿ ಸಿಬಿಐ ಮೂಲಕ ಎಸ್​ಐಟಿಗೆ ಮಾಹಿತಿ ನೀಡ್ಬೇಕಿತ್ತು.

ಬ್ಲೂ ಕಾರ್ನರ್​ ನೋಟಿಸ್​ ಅಡಿಯಲ್ಲಿ ಸದಸ್ಯ ರಾಷ್ಟ್ರಕ್ಕೆ ಬೇಕಾಗಿರುವ ವ್ಯಕ್ತಿಯ ಗುರುತು ಮತ್ತು ಆತ ಎಲ್ಲಿದ್ದಾನೆ ಎಂಬ ಮಾಹಿತಿಯನ್ನು ಸಂಗ್ರಹಿಸಿ ಆ ಸದಸ್ಯ ರಾಷ್ಟ್ರಕ್ಕೆ ನೀಡಲಾಗುತ್ತದೆ. ಆ ಮಾಹಿತಿ ಆಧರಿಸಿ ಆ ದೇಶ ಆ ಆರೋಪಿಯ ಗಡೀಪಾರಿಗೆ ಆತ ಉಳಿದುಕೊಂಡಿರುವ ದೇಶಕ್ಕೆ ಮನವಿ ಸಲ್ಲಿಸಬಹುದು.

ಆದರೆ ಇಂಟರ್​ಪೋಲ್​ ಪ್ರಜ್ವಲ್​ ಎಲ್ಲಿದ್ದಾನೆ ಎಂದು ಗುರುತು ಪತ್ತೆ ಹಚ್ಚುವ ಮೊದಲೇ ವೀಡಿಯೋ ಬಿಡುಗಡೆಗೊಳಿಸಿ ತಾನು ಜೂನ್​ 1ರಂದು ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದಾನೆ.

ಬೆಂಗಳೂರಿಗೆ ಬರ್ತಿದ್ದಂತೆ ಅರೆಸ್ಟ್​..?

ಲುಕ್​ಔಟ್​ ನೋಟಿಸ್​ನ ಪ್ರಕಾರ ಬೇಕಾಗಿರುವ ಆರೋಪಿ ಒಂದು ವೇಳೆ ವಿಮಾನ ನಿಲ್ದಾಣ, ಬಂದರು ಅಥವಾ ರಸ್ತೆ ಮೂಲಕ ವಿದೇಶಕ್ಕೆ ಓಡಿಹೋಗುವ ಸುಳಿವು ಇದ್ದಲ್ಲಿ ಆತನನ್ನು ವಶಕ್ಕೆ ಪಡೆದು ತನಿಖಾ ಸಂಸ್ಥೆಗೆ ಒಪ್ಪಿಸಬೇಕು.

ಪ್ರಜ್ವಲ್​ ವಿರುದ್ಧದ ಲುಕ್​ಔಟ್​ ನೋಟಿಸ್​ ಅಥವಾ ಬ್ಲೂ ಕಾರ್ನರ್​ ನೋಟಿಸ್​​ನ್ನು ವಾಪಸ್​ ಪಡೆದಿಲ್ಲ. ಹೀಗಾಗಿ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಎಸ್​ಐಟಿ ಪ್ರಜ್ವಲ್​ನ್ನು ಬಂಧಿಸಿದರೂ ಅಚ್ಚರಿಯಿಲ್ಲ.

ಆದರೆ ದೇವೇಗೌಡರ ಕುಟುಂಬ ಇಲ್ಲೊಂದು ಮೈಂಡ್​ ಗೇಮ್​ ಆಡ್ತಿದೆ. ಮೇ 23ರಂದು ತಾತ ದೇವೇಗೌಡರು ಎಸ್​ಐಟಿ ಎದುರು ಶರಣಾಗುವಂತೆ ಎಚ್ಚರಿಕೆ ಕೊಟ್ಟು ಪತ್ರ ಬರೆದಿದ್ದರು. ಆ ಪತ್ರದ ಐದು ದಿನಗಳ ಬಳಿಕ ಸಾಮೂಹಿಕ ಅತ್ಯಾಚಾರದ ಆರೋಪಿಯಾಗಿರುವ ಪ್ರಜ್ವಲ್​ ವೀಡಿಯೋ ಸಂದೇಶ ಬಿಡುಗಡೆ ಮಾಡಿದ್ದರು.

ಒಂದು ವೇಳೆ ಎಸ್​ಐಟಿ ಬಂಧನಕ್ಕೂ ಮೊದಲೇ ಕೈಗೆ ಸಿಗದೇ ನೇರವಾಗಿ ಹೋಗಿ ಮೊದಲೇ ಹೇಳಿದಂತೆ ವಿಚಾರಣೆ ಹಾಜರಾಗುವ ನೆಪದಲ್ಲಿ ಶರಣಾದರೆ ಅದನ್ನು ದೇವೇಗೌಡರು, ಕುಮಾರಸ್ವಾಮಿ ಮತ್ತು ಹೆಚ್​ ಡಿ ರೇವಣ್ಣ ಆದಿಯಾಗಿ ಬಿಜೆಪಿ ನಾಯಕರೂ ಒಳಗೊಂಡಂತೆ ವಿಪಕ್ಷ ಬಣ ತಮ್ಮ ನೈತಿಕ ಗೆಲುವು ಎಂದು ಬಿಂಬಿಸಿಕೊಳ್ಳುವುದರಲ್ಲಿ ತಪ್ಪಿಲ್ಲ.

ಪ್ರಜ್ವಲ್​ ಶರಣಾದ ಬಳಿಕ ಎಸ್​ಐಟಿ ಬಂಧಿಸಿದರೆ ಅದು ಎಸ್​ಐಟಿ ತನಿಖೆ ಎಷ್ಟರ ಮಟ್ಟಿಗೆ ಬಿಗಿಯಾಗಿದೆ, ಪಾರದರ್ಶಕವಾಗಿದೆ ಎನ್ನುವುದರ ಮೇಲೆ ಅನುಮಾನ ಸೃಷ್ಟಿಸುತ್ತದೆ. ಅಷ್ಟೇ ಅಲ್ಲ, ಪ್ರಜ್ವಲ್​ ಕಾಮಕೃತ್ಯಕ್ಕೆ ಬಲಿಯಾಗಿರುವ ಅದೆಷ್ಟೋ ಹೆಣ್ಮಕ್ಕಳು ತಮಗಾದ ಅನ್ಯಾಯದ ವಿರುದ್ಧ ಎಸ್​ಐಟಿಗೆ ಮೊರೆ ಹೋಗುವ ನೈತಿಕ ಸ್ಥೈರ್ಯ ಕಳೆದುಕೊಳ್ಳುತ್ತಾರೆ.

ಓಡಿಹೋಗಿರುವ ಪ್ರಜ್ವಲ್​ ಬೆಂಗಳೂರಿಗೆ ಬರ್ತಿದ್ದಂತೆ ಎಸ್​ಐಟಿ ಬಂಧಿಸಿದರೆ ಅದು ಅಪ್ಪ-ಮಕ್ಕಳ ದೌರ್ಜನ್ಯ ವಿರುದ್ಧದ ತನಿಖೆಯ ಮೇಲೆ ಜನರ ವಿಶ್ವಾಸವನ್ನು ಹೆಚ್ಚಿಸಬಹುದು, ದೌರ್ಜನ್ಯಕ್ಕೊಳಗಾದವರಿಗೆ ತಮ್ಮಗಾದ ಅನ್ಯಾಯ ಹೇಳಿಕೊಳ್ಳಲು ನೈತಿಕ ಧೈರ್ಯ ತುಂಬಬಹುದು.

ಇಂಥ ದಿನವೇ ವಿಚಾರಣೆಗೆ ಬರುವುದಾಗಿ ಎಂದು ಸ್ವತಃ ಪ್ರಜ್ವಲ್​ ದಿನ, ಸಮಯ ಹೇಳಿರುವ ಕಾರಣ ಎಸ್​ಐಟಿಗೆ ಶರಣಾಗತಿಗೂ ಮೊದಲೇ ಪ್ರಜ್ವಲ್​ ಬಂಧನ ಕಷ್ಟವೇನಲ್ಲ, ಮನಸ್ಸು ಮಾಡಬೇಕಷ್ಟೇ.

ADVERTISEMENT
ADVERTISEMENT
  1. Daymand Satta
  2. Diamond Exchange 9
  3. Betln Exchange
  4. Daimand Satta Com
  5. Satsport Exchange
Tags: hd revannapen drive prajwal revannaPrajwal Revannaprajwal revanna caseprajwal revanna hassanprajwal revanna latest newsprajwal revanna leaked videosprajwal revanna newsprajwal revanna news updateprajwal revanna pen driveprajwal revanna scandalprajwal revanna sex scandalprajwal revanna today newsprajwal revanna videoprajwal revanna videosprajwal revanna vidioprajwal revanna vidio karanatakaprajwal revanna viral video
ADVERTISEMENT
Previous Post

ಕರ್ನಾಟಕ ಲೋಕಸಭಾ ಸಮೀಕ್ಷೆ – ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ಸೇ ಗೆಲ್ಲಲಿದೆ – ಸಮೀಕ್ಷೆ ಲೆಕ್ಕಾಚಾರ

Next Post

Gold Rate Today: ಚಿನ್ನದ ಬೆಲೆ ಇವತ್ತು ಎಷ್ಟಿದೆ..?

Related Posts

ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ
News

ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ

by PratikshanaNews
19th February 2025
ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ
News

ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ

by PratikshanaNews
18th February 2025
ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌
News

ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌

by PratikshanaNews
3rd January 2025
ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!
News

ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!

by PratikshanaNews
3rd January 2025
ಬೆಂಗಳೂರು ಮೂಲದ ಕೋ ಆಪರೇಟಿವ್‌ ಬ್ಯಾಂಕ್‌ ಪುಣೆ ಮೂಲದ ಬ್ಯಾಂಕ್‌ನೊಂದಿಗೆ ವಿಲೀನ
News

ಬೆಂಗಳೂರು ಮೂಲದ ಕೋ ಆಪರೇಟಿವ್‌ ಬ್ಯಾಂಕ್‌ ಪುಣೆ ಮೂಲದ ಬ್ಯಾಂಕ್‌ನೊಂದಿಗೆ ವಿಲೀನ

by PratikshanaNews
2nd January 2025
33 ಡಿವೈಎಸ್ಪಿ, 132 ಪೊಲೀಸ್ ಇನ್ಸ್‌ಪೆಕ್ಟರ್​ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ
News

ಹೊಸ ವರ್ಷದ 2ನೇ ದಿನದಲ್ಲಿ 4 ಐಎಎಸ್‌ ಅಧಿಕಾರಿಗಳ ವರ್ಗಾವಣೆ

by PratikshanaNews
2nd January 2025
Pic Courtesy: Adi931 Bus Photography
News

ಕೆಎಸ್‌ಆರ್‌ಟಿಸಿ ನೌಕರರಿಗೂ 180 ದಿನಗಳ ಶಿಶುಪಾಲನಾ ರಜೆ ಮಂಜೂರು

by PratikshanaNews
2nd January 2025
ವಿಧಾನಸಭೆ ಮಾಜಿ ಸಭಾಧ್ಯಕ್ಷ ರಮೇಶ್‌ ಕುಮಾರ್‌ಗೆ ಕರ್ನಾಟಕ ಹೈಕೋರ್ಟ್‌ ಆಘಾತ
News

ವಿಧಾನಸಭೆ ಮಾಜಿ ಸಭಾಧ್ಯಕ್ಷ ರಮೇಶ್‌ ಕುಮಾರ್‌ಗೆ ಕರ್ನಾಟಕ ಹೈಕೋರ್ಟ್‌ ಆಘಾತ

by PratikshanaNews
2nd January 2025
Next Post
Gold Rate Today: ಚಿನ್ನದ ಬೆಲೆಯಲ್ಲಿ ಮತ್ತೆ ಭಾರೀ ಹೆಚ್ಚಳ

Gold Rate Today: ಚಿನ್ನದ ಬೆಲೆ ಇವತ್ತು ಎಷ್ಟಿದೆ..?

Leave a Reply Cancel reply

Your email address will not be published. Required fields are marked *

ADVERTISEMENT

Trend News

ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ

by PratikshanaNews
19th February 2025
0
ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ
News

ಮಹಾಕುಂಭದಲ್ಲಿ ಭಕ್ತರು ಪವಿತ್ರ ಸ್ನಾನ ಮಾಡುತ್ತಿರುವ ನೀರು ಸ್ನಾನ ಮಾಡುವುದಕ್ಕೂ ಯೋಗ್ಯವಲ್ಲ ಎಂದು ಕೇಂದ್ರ ಸರ್ಕಾರದ ಆಧೀನದಲ್ಲಿ ಬರುವ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಸಲ್ಲಿಸಿದೆ....

Read more

ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ

by PratikshanaNews
18th February 2025
0
ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ
News

ಮುಸಲ್ಮಾನರ ಉಪವಾಸ ತಿಂಗಳು ಆಗಿರುವ ರಂಜಾನ್‌ನಲ್ಲಿ ಇಸ್ಲಾಂ ಧರ್ಮಕ್ಕೆ ಸೇರಿದ ರಾಜ್ಯ ಸರ್ಕಾರಿ ನೌಕರರು ಮತ್ತು ಗುತ್ತಿಗೆ ನೌಕರರಿಗೆ ತೆಲಂಗಾಣದಲ್ಲಿರುವ ಕಾಂಗ್ರೆಸ್‌ ಸರ್ಕಾರ ಮತ್ತು ಆಂಧ್ರಪ್ರದೇಶದಲ್ಲಿರುವ ತೆಲುಗು...

Read more

ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌

by PratikshanaNews
3rd January 2025
0
ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌
News

ಆಸ್ಟ್ರೇಲಿಯಾ ವಿರುದ್ಧದ 5ನೇ ಮತ್ತು ಕಡೆಯ ಟೆಸ್ಟ್‌ನ ಮೊದಲ ದಿನವೇ ಭಾರತ ಆಲೌಟ್‌ ಆಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 72.2 ಓವರ್‌ಗಳಲ್ಲಿ 185 ರನ್‌ಗೆ ಟೀಂ ಇಂಡಿಯಾದ ಎಲ್ಲಾ...

Read more

ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!

by PratikshanaNews
3rd January 2025
0
ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!
News

ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ಪತ್ನಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅತ್ಯಂತ ದುಬಾರಿ ಮೊತ್ತದ ಉಡುಗೊರೆಯನ್ನು ನೀಡಿದ್ದಾರೆ. ಜೋ ಬಿಡೆನ್‌ ಪತ್ನಿ ಜಿಲ್‌ ಬಿಡೆನ್‌ಗೆ ಪ್ರಧಾನಿ...

Read more
ADVERTISEMENT
ADVERTISEMENT
Every Minute News

© 2023 Pratikshana News

Navigate Site

  • News
  • Cinema
  • Sports
  • Health
  • Lifestyle
  • Gallery
  • Special

Follow Us

No Result
View All Result
  • News
  • Cinema
  • Sports
  • Health
  • Lifestyle
  • Gallery
  • Special

© 2023 Pratikshana News

error: Content is protected !!