BIG BREAKING: ಬಜೆಟ್​ ಬಳಿಕ ಐವರು ಬಿಜೆಪಿ ಶಾಸಕರು, ಇಬ್ಬರು ಎಂಎಲ್​ಸಿಗಳು ಕಾಂಗ್ರೆಸ್​ಗೆ..?

ಫೆಬ್ರವರಿ 17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಆಯವ್ಯಯ ಮಂಡನೆ ಬಳಿಕ ಬಿಜೆಪಿಯಲ್ಲಿ ದೊಡ್ಡ ಪಕ್ಷಾಂತರ ಪರ್ವ ಆಗಬಹುದು ಎಂದು ಮೂಲಗಳು ತಿಳಿಸಿವೆ.
ಐವರು ಬಿಜೆಪಿ ಶಾಸಕರು ಮತ್ತು ಇಬ್ಬರು ವಿಧಾನಪರಿಷತ್​ ಸದಸ್ಯರು ಬಿಜೆಪಿ ಬಿಟ್ಟುಹೋಗಬಹುದು. ಮೂಲಗಳ ಪ್ರಕಾರ ಈ ಏಳೂ ಮಂದಿಯೂ ಕಾಂಗ್ರೆಸ್​ ನಾಯಕರ ಜೊತೆಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.
ಯಾದಗಿರಿ, ಹಾವೇರಿ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಬಿಜೆಪಿ ನಾಯಕರು ಪಕ್ಷಕ್ಕೆ ವಿದಾಯ ಹೇಳಬಹುದು ಎನ್ನಲಾಗಿದೆ.
ಬಿಜೆಪಿ ಬಿಟ್ಟು ಹೋಗಬಹುದು ಎಂದು ಕೇಳಿಬಂದಿರುವ ಶಾಸಕರು ಮತ್ತು ಎಂಎಲ್​ಸಿಗಳ ಹೆಸರುಗಳು:
1. ರಾಣೇಬೆನ್ನೂರು ಶಾಸಕ – ಅರುಣ್​ ಕುಮಾರ್​
2. ನೆಹರು ಓಲೇಕಾರ್​ – ಹಾವೇರಿ ಶಾಸಕ
3. ವಿರೂಪಾಕ್ಷಪ್ಪ ರುದ್ರಪ್ಪ – ಬ್ಯಾಡಗಿ ಶಾಸಕ
4. ಹೊಸದುರ್ಗ ಶಾಸಕ  – ಗೂಳಿಹಟ್ಟಿ ಶೇಖರ್​
5. ಹಿರಿಯೂರು ಶಾಸಕಿ – ಪೂರ್ಣಿಮಾ ಶ್ರೀನಿವಾಸ್​
6. ಬಾಬುರಾವ್​ ಚಿಂಚನಸೂರು – ಹಾಲಿ ವಿಧಾನಪರಿಷತ್​ ಸದಸ್ಯ
7. ವಿಧಾನಪರಿಷತ್​ ಸದಸ್ಯ ಆರ್​ ಶಂಕರ್​

LEAVE A REPLY

Please enter your comment!
Please enter your name here