ಫೆಬ್ರವರಿ 17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಆಯವ್ಯಯ ಮಂಡನೆ ಬಳಿಕ ಬಿಜೆಪಿಯಲ್ಲಿ ದೊಡ್ಡ ಪಕ್ಷಾಂತರ ಪರ್ವ ಆಗಬಹುದು ಎಂದು ಮೂಲಗಳು ತಿಳಿಸಿವೆ.
ಐವರು ಬಿಜೆಪಿ ಶಾಸಕರು ಮತ್ತು ಇಬ್ಬರು ವಿಧಾನಪರಿಷತ್ ಸದಸ್ಯರು ಬಿಜೆಪಿ ಬಿಟ್ಟುಹೋಗಬಹುದು. ಮೂಲಗಳ ಪ್ರಕಾರ ಈ ಏಳೂ ಮಂದಿಯೂ ಕಾಂಗ್ರೆಸ್ ನಾಯಕರ ಜೊತೆಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.
ಯಾದಗಿರಿ, ಹಾವೇರಿ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಬಿಜೆಪಿ ನಾಯಕರು ಪಕ್ಷಕ್ಕೆ ವಿದಾಯ ಹೇಳಬಹುದು ಎನ್ನಲಾಗಿದೆ.
ಬಿಜೆಪಿ ಬಿಟ್ಟು ಹೋಗಬಹುದು ಎಂದು ಕೇಳಿಬಂದಿರುವ ಶಾಸಕರು ಮತ್ತು ಎಂಎಲ್ಸಿಗಳ ಹೆಸರುಗಳು:
1. ರಾಣೇಬೆನ್ನೂರು ಶಾಸಕ – ಅರುಣ್ ಕುಮಾರ್
2. ನೆಹರು ಓಲೇಕಾರ್ – ಹಾವೇರಿ ಶಾಸಕ
3. ವಿರೂಪಾಕ್ಷಪ್ಪ ರುದ್ರಪ್ಪ – ಬ್ಯಾಡಗಿ ಶಾಸಕ
4. ಹೊಸದುರ್ಗ ಶಾಸಕ – ಗೂಳಿಹಟ್ಟಿ ಶೇಖರ್
5. ಹಿರಿಯೂರು ಶಾಸಕಿ – ಪೂರ್ಣಿಮಾ ಶ್ರೀನಿವಾಸ್
6. ಬಾಬುರಾವ್ ಚಿಂಚನಸೂರು – ಹಾಲಿ ವಿಧಾನಪರಿಷತ್ ಸದಸ್ಯ
7. ವಿಧಾನಪರಿಷತ್ ಸದಸ್ಯ ಆರ್ ಶಂಕರ್
ADVERTISEMENT
ADVERTISEMENT