ನಾನು ಯಾರ ಉಸಾಬರಿಗೂ (ತಂಟೆಗೆ) ಹೋಗಲ್ಲ. ಆದ್ರೆ ನನ್ನ ಉಸಾಬರಿಗೆ ಬಂದ್ರೆ ಸುಮ್ಮನೆ ಬಿಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಿಜೆಪಿ ಪಕ್ಷದೊಳಗೇ ಇರುವ ತಮ್ಮ ವಿರೋಧಿಗಳಿಗೆ ನೇರ ಎಚ್ಚರಿಕೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ತಮ್ಮ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ತಮ್ಮ ರಾಜಕೀಯ ವಿರೋಧಿಗಳಿಗೆ ಶೆಟ್ಟರ್ ಸಂದೇಶ ರವಾನಿಸಿದ್ದಾರೆ.
ಜಗದೀಶ್ ಶೆಟ್ಟರ್ ಸರಳ ಸಜ್ಜನ ರಾಜಕಾರಣಿ ನಿಜ. ನಾನಾಯ್ತು, ನನ್ನ ಕೆಲಸ ಅಷ್ಟೇ. ನಾನು ಯಾರ ಉಸಾಬರಿಗೆ(ತಂಟೆಗೆ) ನಾನು ಹೋಗುವುದಿಲ್ಲ. ಆದ್ರೆ ನನ್ನ ಉಸಾಬರಿಗೆ ಬಂದ್ರೆ ಸುಮ್ಮನೆ ಬಿಡುವುದಿಲ್ಲ