ಈ ಬಾರಿ ಕರ್ನಾಟಕದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಮುಖ್ಯಮಂತ್ರಿ ಆಗಲ್ಲ ಎಂಬ ಸುಳಿವನ್ನು ಸಚಿವ ಎಂಬಿ ಪಾಟೀಲ್ ಮತ್ತೊಮ್ಮೆ ಬಹಿರಂಗವಾಗಿ ನೀಡಿದ್ದಾರೆ.
ಬೆಂಗಳೂರಲ್ಲಿ ಮಾತಾಡಿದ ಸಚಿವ ಎಂಬಿ ಪಾಟೀಲ್
ಪವರ್ ಶೇರಿಂಗ್ (ಅಧಿಕಾರ ಹಂಚಿಕೆ) ಜನರ ಜೊತೆಗೆ ಎಂದು ವೇಣುಗೋಪಾಲ್ ಅವರು ಹೇಳಿದ್ದಾರೆ. ದೆಹಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು, ನಾನು ಅದನ್ನೇ ಹೇಳಿದ್ದೇನೆ. ಇದು ನನ್ನ ವೈಯಕ್ತಿಕ ಹೇಳಿಕೆ ಅಲ್ಲ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಹೇಳಿದ್ದನ್ನೇ ನಾನು ಹೇಳಿದ್ದೇನೆ
ಎಂದು ಪುನರುಚ್ಚರಿಸಿದ್ದಾರೆ.
ನಿನ್ನೆಯಷ್ಟೇ ಮೈಸೂರಲ್ಲಿ ಮಾತಾಡಿದ್ದ ಎಂಬಿ ಪಾಟೀಲ್.
ಅಧಿಕಾರ ಹಂಚಿಕೆ ಸೂತ್ರ ಏನಿಲ್ಲ. ಐದು ವರ್ಷ ಸಿದ್ದರಾಮಯ್ಯನವರೇ ಸಿಎಂ ಆಗಿರ್ತಾರೆ. ಸಿದ್ದರಾಮಯ್ಯನವರೇ ಪೂರ್ಣಾವಧಿ ಪೂರೈಸ್ತಾರೆ, ಒಂದು ವೇಳೆ ಅಧಿಕಾರ ಹಂಚಿಕೆ ಸೂತ್ರ ನಡೆದಿದ್ದರೆ ಅದನ್ನು ಪ್ರತಿಕಾಗೋಷ್ಠಿಯಲ್ಲೇ ಬಹಿರಂಗವಾಗಿ ಹೇಳ್ತಿದ್ದರು
ಎಂದು ಹೇಳಿದ್ದರು.
ADVERTISEMENT
ADVERTISEMENT