BIG NEWS : ನಾಲ್ವರು ಕಾಂಗ್ರೆಸ್​ ಶಾಸಕರಿಗೆ ಟಿಕೆಟ್​ ಸಿಗಲ್ಲ

ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್​ ಮೊದಲ ಪಟ್ಟಿಯಲ್ಲಿ 135 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.

ಮೂಲಗಳ ಮಾಹಿತಿ ಪ್ರಕಾರ ನಾಲ್ವರು ಕಾಂಗ್ರೆಸ್​ ಶಾಸಕರಿಗೆ ಈ ಬಾರಿ ಪಕ್ಷ ಟಿಕೆಟ್​ ನೀಡುತ್ತಿಲ್ಲ. ಉಳಿದ ಎಲ್ಲ ಹಾಲಿ  ಶಾಸಕರಿಗೆ ಪಕ್ಷ ಟಿಕೆಟ್​ ನೀಡುತ್ತಿದೆ.

ಇವತ್ತಿನ ಸಭೆಯಲ್ಲಿ 185 ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಇವುಗಳಲ್ಲಿ 125 ಕ್ಷೇತ್ರಗಳಿಗೆ ಟಿಕೆಟ್​ ಅಂತಿಮಗೊಳಿಸಲಾಗಿದೆ.

ಮಾರ್ಚ್​ 22ರಂದು ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ಸೇರಲಿದ್ದು ಉಳಿದ 99 ಕ್ಷೇತ್ರಗಳ ಬಗ್ಗೆ ಚರ್ಚೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ಇತ್ತೀಚೆಗಷ್ಟೇ ನಿಧನರಾದ ಧ್ರುವನಾರಾಯಣ್​ ಪುತ್ರ ದರ್ಶನ್​ ಅವರಿಗೆ ನಂಜನಗೂಡು ಕ್ಷೇತ್ರದಿಂದ ಟಿಕೆಟ್​ ಅಂತಿಮವಾಗಿದೆ.

ಹೆಚ್​ ನಾಗೇಶ್​ ಮತ್ತು ಶರತ್​ ಬಚ್ಚೇಗೌಡ ಅವರಿಗೆ ಕಾಂಗ್ರೆಸ್​ ಟಿಕೆಟ್​ ಖಚಿತವಾಗಿದೆ.

ಬಸವನಗುಡಿಯಿಂದ ಎಂಎಲ್​ಸಿ ಯು ಬಿ ವೆಂಕಟೇಶ್​ ಅವರಿಗೆ ಟಿಕೆಟ್​ ಖಾತ್ರಿಯಾಗಿದೆ.

ಸಚಿವ ಸೋಮಣ್ಣ ಅವರು ಒಂದು ವೇಳೆ ಕಾಂಗ್ರೆಸ್​ಗೆ ಬರುವುದಾದದರೆ ತಮಗೂ ತಮ್ಮ ಪುತ್ರ ಅರುಣ್​ ಸೋಮಣ್ಣಗೂ ಟಿಕೆಟ್​ ಕೇಳಿರುವ ಕಾರಣ ಆ ಬಗ್ಗೆ ನಿರ್ಧಾರವನ್ನು ತೆಗೆದುಕೊಂಡಿಲ್ಲ.

LEAVE A REPLY

Please enter your comment!
Please enter your name here