ಪೆಟ್ರೋಲ್​, ಡೀಸೆಲ್​ ಮೇಲೆ ತೆರಿಗೆ ಕಡಿತ ಇಲ್ಲ – ಸಾರಾಯಿ, ಸೇಂದಿ ಅಂಗಡಿಗಳಿಗೆ ವಿನಾಯಿತಿ ಘೋಷಣೆ

CM Basavaraj Bommai
ಸಿಎಂ ಬಸವರಾಜ್​​ ಬೊಮ್ಮಾಯಿ ಅವರು ತಮ್ಮ ಬಜೆಟ್​ನಲ್ಲಿ ಪೆಟ್ರೋಲ್​ ಅಥವಾ ಡೀಸೆಲ್​ ಮೇಲಿನ ಸುಂಕ ಇಳಿಕೆ ಬಗ್ಗೆ ಘೋಷಣೆ ಮಾಡಿಲ್ಲ.
ಕಡಿಮೆ ಸಂಬಳ ಪಡೆಯುವ ನೌಕರರಿಗೆ ವೃತ್ತಿ ತೆರಿಗೆ ವಿನಾಯಿತಿ ಮಿತಿಯನ್ನು 15 ಸಾವಿರ ರೂಪಾಯಿಗಳಿಂದ 25 ಸಾವಿರ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.
ಜಿಎಸ್​ಟಿ ಜಾರಿಗೂ ಮೊದಲು ಬಾಕಿ ಇದ್ದ ಪೂರ್ಣ ತೆರಿಗೆಯನ್ನು ಪಾವತಿಸುವ ವರ್ತಕರಿಗೆ ದಂಡ ಮತ್ತು ಬಡ್ಡಿ ವಿನಾಯಿತಿಯನ್ನು ಘೋಷಿಸಲಾಗಿದೆ.
ಬಾಕಿ ಸಾರಾಯಿ ಮತ್ತು ಸೇಂದಿ ಬಾಡಿಗೆ ಮೂಲಧನವನ್ನು ಈ ವರ್ಷದ ಜೂನ್​ಗೂ ಮೊದಲು ಪಾವತಿಸಿದರೆ ದಂಡ ಮತ್ತು ಬಡ್ಡಿ ಪಾವತಿಯಲ್ಲಿ ಕರ ಸಮಾಧಾನ ಪರಿಹಾರವನ್ನು ಘೋಷಿಸಲಾಗಿದೆ.

LEAVE A REPLY

Please enter your comment!
Please enter your name here