ತಮ್ಮ ಮೇಲೆ ಚಪ್ಪಲಿ ಎಸೆದಿದ್ದನ್ನು ಖಂಡಿಸಿ ಸುದೀರ್ಘ ಪತ್ರ ಬರೆದಿದ್ದ ಗೆಳೆಯ ಕಿಚ್ಚ ಸುದೀಪ್ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ವಿಶೇಷವಾಗಿ ಧನ್ಯವಾದ ಸಲ್ಲಿಸಿದ್ದಾರೆ.
ನಿಮ್ಮ ಪ್ರೀತಿಯ ಸಾಲುಗಳಿಗೆ ಧನ್ಯವಾದಗಳು ಎಂದು ಹೇಳಿ ವಿಶೇಷವಾಗಿ ನೇರವಾಗಿ ಅವರನ್ನೇ ಟ್ಯಾಗ್ ಮಾಡಿ ಟ್ವೀಟಿಸಿದ್ದಾರೆ.
ಕಿಚ್ಚ ಸುದೀಪ್ ಅವರಿಗೆ ಟ್ಯಾಗ್ ಮಾಡಿ ದರ್ಶನ್ ಅವರು ಟ್ವೀಟಿಸಿದ್ದು ದರ್ಶನ್ ಮತ್ತು ಕಿಚ್ಚ ಅವರ ಅಭಿಮಾನಿಗಳಲ್ಲಿ ಹೊಸ ಸಂತಸ ಕಾರಣವಾಗಿದೆ.
ದೀರ್ಘ ಕಾಲದಿಂದ ಕಿಚ್ಚ ಸುದೀಪ್ ಮತ್ತು ದರ್ಶನ್ ಅವರ ಅಭಿಮಾನಿಗಳ ನಡುವೆ ನಡೆಯುತ್ತಿದ್ದ ಸಂಘರ್ಷ ಈ ಮೂಲಕ ಕೊನೆಯಾಗಿದೆ.
ಇದು ಬೇಕಿತ್ತು ಸರ್ ಎಂದು ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿದರೆ, 2020ರ ಬಳಿಕ ನಾನು ನೋಡಿದ ಅತ್ಯುತ್ತಮ ಘಟನೆ ಇದು ಎಂದು ಇನ್ನೋರ್ವ ಅಭಿಮಾನಿ ಟ್ವೀಟಿಸಿದ್ದಾರೆ.
ಬಾಸ್ special mention ಮಾಡಿದರೆ ಅಂದ್ರೆ special ಜಾಗ ಇದೆ ಅವರ ಹೃದಯದಲ್ಲಿ ಅಂತ ಅರ್ಥ ಎಂದು ಇನ್ನೊಬ್ಬರು ಅಭಿಮಾನಿಯೊಬ್ಬರು ಟ್ವೀಟಿಸಿದ್ದಾರೆ.
ADVERTISEMENT
ADVERTISEMENT