ADVERTISEMENT
ಯೂಟ್ಯೂಬ್ ಚಾನೆಲ್ನ ವರದಿಗಾರ ಮತ್ತು ಕ್ಯಾಮರಾಮ್ಯಾನ್ ಮೇಲೆ ಹಲ್ಲೆ ನಡೆಸಿದ್ದರ ಸಂಬಂಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂಗರಕ್ಷಕರ ವಿರುದ್ಧ ದೂರು ದಾಖಲಾಗಿದೆ.
ವಿ2 ನ್ಯೂಸ್ ಡಿಜಿಟಲ್ ಮೀಡಿಯಾದ ವರದಿಗಾರ ಮಧುಸೂದನ್ ಮತ್ತು ಕ್ಯಾಮರಾಮ್ಯಾನ್ ದಯಾನಂದ್ ಮೇಲೆ ನಟ ದರ್ಶನ್ ಅವರ ಅಂಗರಕ್ಷಕರು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
ಘಟನೆ ಸಂಬಂಧ ಫೆಬ್ರವರಿ 17ರಂದು ರಾಜರಾಜೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಆದರೆ ಎಫ್ಐಆರ್ ದಾಖಲಿಸುವ ಬದಲು ರಾಜರಾಜೇಶ್ವರಿ ನಗರ ಠಾಣೆಯ ಪೊಲೀಸರು ಎನ್ಸಿಆರ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳ ಭೇಟಿಯಾಗಿ ದೂರು ಸಲ್ಲಿಸುವುದಾಗಿ
ವಿ2 ನ್ಯೂಸ್ ಡಿಜಿಟಲ್ ಮೀಡಿಯಾದ ಸಿಇಒ ಸೂರ್ಯ ಅವರು ವೀಡಿಯೋ ಮೂಲಕ ಹೇಳಿದ್ದಾರೆ.
ದರ್ಶನ್ ಮನೆಯ ಬಳಿ ಆಗಿದ್ದೇನು..?
ಅರ್ಜಿದಾರರ ಮಧುಸೂದನ್ ಮತ್ತು ದಯಾನಂದ್ ವಿ2 ನ್ಯೂಸ್ ಚಾನೆಲ್ನಲ್ಲಿ ಕೆಲಸ ಮಾಡುತ್ತಿದ್ದು, ಫೆಬ್ರವರಿ 16ರಂದು ಸಂಜೆ 6-15 ಗಂಟೆಗೆ ಚಲನಚಿತ್ರ ನಟ ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರೀಕರಣ ಮಾಡಲು ಹೋಗಿದ್ದ ಸಂದರ್ಭದಲ್ಲಿ ಚಲನಚಿತ್ರ ನಟ ದರ್ಶನ್ರವರು ಮನೆ ಬಳಿ ಇಲ್ಲದೇ ಇರುವುದು ನಮ್ಮ ಗಮನಕ್ಕೆ ಬಂದಿರುವುದಿಲ್ಲ.
ದರ್ಶನ್ ಮನೆಯ ಬಳಿ ಇದ್ದ ಸಫಾರಿ ವಸ್ತ್ರ ಧರಿಸಿದ್ದ ಮತ್ತು ದರ್ಶನ್ ಭಾವಚಿತ್ರ ಇರುವ ಟೀ ಶರ್ಟ್ ಧರಿಸಿದ್ದ 4ರಿಂದ 5 ಅಸಾಮಿಗಳು ಚಿತ್ರೀಕರಣ ಮಾಡದಂತೆ ತಡೆದು ಇಬ್ಬರಿಗೂ ಕೈಗಳಿಂದ ಹೊಡೆದು ಅವಾಚ್ಯ ಶಬ್ಧಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ
ಎಂದು ದೂರು ನೀಡಿದ್ದಾರೆ.
ADVERTISEMENT