ನಟ ದರ್ಶನ್ ಅಭಿಮಾನಿಗಳ ವಿರುದ್ಧ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೆಂಡಾಮಂಡಲರಾಗಿದ್ದಾರೆ.
ನೀವು ಹಾಕುವ ವೀಡಿಯೋ, ಇಮೇಜಸ್ ಮತ್ತು ಇತರೆ ಪೋಸ್ಟ್ನಿಂದ ನನ್ನ ಕುಟುಂಬಕ್ಕೆ ಡ್ಯಾಮೇಜ್ ಆಗ್ತಿದೆ ಎಂದು ವಿಜಯಲಕ್ಷ್ಮೀ ಕಿಡಿಕಾರಿದ್ದಾರೆ.
ತಕ್ಷಣವೇ ನನ್ನ ಕುಟುಂಬಕ್ಕೆ ಡ್ಯಾಮೇಜ್ ಮಾಡುವ ವೀಡಿಯೋ, ಇಮೇಜ್, ಇತರೆ ಪೋಸ್ಟ್ಗಳನ್ನು ಹಾಕುವುದನ್ನು ಮತ್ತು ಹಂಚಿಕೊಳ್ಳುವುದನ್ನು ನಿಲ್ಲಿಸುವಂತೆ ವಿಜಯಲಕ್ಷ್ಮೀ ದರ್ಶನ್ ಅಭಿಮಾನಿಗಳಿಗೆ ಒತ್ತಾಯಿಸಿದ್ದಾರೆ.
ಮಹಿಳೆಯಾಗಿ ಇಂಥಹ ವೀಡಿಯೋವನ್ನು ಪೋಸ್ಟ್ ಮಾಡುವುದಕ್ಕಿಂತ ಮುಂಚೆ ಎರಡು ಬಾರಿ ಯೋಚನೆ ಮಾಡ್ಬೇಕು. ಈ ವೀಡಿಯೋದಿಂದ ನನಗೆ ಮತ್ತು ನನ್ನ ಮಗನಿಗೆ ತುಂಬಾ ನೋವಾಗಿದೆ.
ಇಂತಹ ವೀಡಿಯೋ ಪೋಸ್ಟ್ ಮಾಡುವ ನಿಮ್ಮ ವರ್ತನೆ ನಿಮ್ಮ ವ್ಯಕ್ತಿತ್ವದ ನೈತಿಕತೆಯನ್ನು ತೋರಿಸುತ್ತದೆ.
ಜೊತೆಗೆ ಇನ್ನೊಂದು ಹೇಳಲು ಬಯಸುತ್ತೇನೆ,
ನನ್ನ ಮೌನ ನಾನು ತಲೆಹರಟೆಗಳನ್ನು ಸುಮ್ಮನೆ ಬಿಡುತ್ತೇನೆ ಎಂದು ಅರ್ಥವಲ್ಲ
ಎಂದು ವಿಜಯಲಕ್ಷ್ಮೀ ಅವರು ತಮ್ಮ ಇನ್ಸ್ಟ್ರಾಗ್ರಾಂನಲ್ಲಿ ಬಹಿರಂಗವಾಗಿ ಕಿಡಿಕಾರಿದ್ದಾರೆ.
ಏನಿದೆ ಆ ವೀಡಿಯೊದಲ್ಲಿ..?
ಅಂದಹಾಗೆ ದರ್ಶನ್ ಪತ್ನಿಯ ಸಿಟ್ಟಿಗೆ ಕಾರಣವಾಗಿದ್ದು ಜೊತೆಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಒಂದು ವೀಡಿಯೋ.
ಆ ವೀಡಿಯೋದಲ್ಲಿ ದರ್ಶನ್ ಅವರ ಹುಟ್ಟುಹಬ್ಬದಂದು ಕೇಕ್ ಕಟ್ ಮಾಡಿ ತಿನ್ನಿಸಿ ಖುಷಿ ಪಡ್ತಿದ್ದಾರೆ.
ADVERTISEMENT
ADVERTISEMENT