ಬೆಂಗಳೂರಿನ 14 ಕಡೆಗಳಲ್ಲಿ ಮಳೆಯಿಂದ ಅವಘಢ

ಬೆಂಗಳೂರಲ್ಲಿ ಮಧ್ಯಾಹ್ನ 3 ಗಂಟೆಯಿಂದ ಧಾರಾಕಾರ ಮಳೆ ಆಗಿದೆ. ರಣ ಮಳೆಗೆ ರಾಜಧಾನಿಯ ಕೆ ಆರ್​ ಸರ್ಕಲ್​ ಅಂಡರ್​ಪಾಸ್​ನಲ್ಲಿ ಕಾರು ಸಿಲುಕಿಕೊಂಡು ಕಾರಲ್ಲಿ ಪ್ರಯಾಣಿಸ್ತಿದ್ದ ಇನ್ಫೋಸಿಸ್​ನ ಉದ್ಯೋಗಿ ಭಾನುರೇಖಾ ಅವರು ಮೃತಪಟ್ಟಿದ್ದಾರೆ.

ರಾಜಧಾನಿ ಬೆಂಗಳೂರಲ್ಲಿ ಎಲ್ಲೆಲ್ಲಿ ಮಳೆ ಹಾನಿ ಆಗಿದೆ ಎಂಬ ವಿವರ ಇಲ್ಲಿದೆ:

1. ಕಬ್ಬನ್ ರಸ್ತೆಯಲ್ಲಿ ರಸ್ತೆಗೆ ಅಡ್ಡವಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸಲಾಗಿದೆ.

2. ಬಳ್ಳಾರಿ ರಸ್ತೆಯಲ್ಲಿ ಮರ ಬಿದ್ದು ವಾಹನಗಳಿಗೆ ಹಾನಿ ಆಗಿದೆ.

3. ಎಂ ಜಿ ರಸ್ತೆಯ ಕ್ವೀನ್ಸ್​ ಜಂಕ್ಷನ್​ನಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

4. ಬಸವ ಮಂಟಪ, ಭಾಷ್ಯಂ ಸರ್ಕಲ್ ಮಧ್ಯ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದ ಮರವನ್ನು ಪೊಲೀಸರು ತೆರವುಗೊಳಿಸಿದ್ದಾರೆ.

5. ಬಸವನಗುಡಿಯ ಬಿ ಪಿ ವಾಡಿಯ ರಸ್ತೆಯಲ್ಲಿ ಮರ ಬಿದ್ದಿದೆ.

6. ಮಂತ್ರಿ ಮಾಲ್​, ಕಲ್ಪನ ಜಂಕ್ಷನ್​, ಶಿವಾನಂದ, ಹಳೆ ಉದಯ ಟಿವಿ ಜಂಕ್ಷನ್​ನಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಗಿದೆ.

7. ಕುಮಾರಕೃಪ ರಸ್ತೆಯ ಚಿತ್ರಕಲಾ ಪರಿಷತ್ ಗೇಟ್ ಬಳಿ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದೆ.

8. ರಾಜಾಜಿನಗರದ 50ನೇ ಕ್ರಾಸ್​ನಲ್ಲಿ ದೊಡ್ಡ ಮರ ಬಿದ್ದ ಕಾರಣ ಹಲವು ವಾಹನಗಳಿಗೆ ಹಾನಿಯಾಗಿದೆ.

9. ಹೆಬ್ಬಾಳ ವೃತ್ತ, ಹೆಬ್ಬಾಳ ಫ್ಲೈಓವರ್​ ಕೆಳಗೆ, ಕೋಲ್​ ಜಂಕ್ಷನ್​, ದೇವಿನಗರ ಕ್ರಾಸ್​​ನಲ್ಲಿ ರಸ್ತೆ ನೀರು ಅಪಾರ ಪ್ರಮಾಣದಲ್ಲಿ ನೀರು ನಿಂತಿದೆ.

10. ಜಾಲಹಳ್ಳಿ ಬಳಿಯ ಸಾಹಿತ್ಯಕೂಟದಿಂದ ಬಿ.ಇ.ಎಲ್‌  ಕಡೆಗೆ ಸಂಚರಿಸುವ ರಸ್ತೆಯಲ್ಲಿ ಮರ ಬಿದ್ದಿದೆ.

11. ಭಾರತಿ ನರ್ಸಿಂಗ್​ ಹೋಂ ರಸ್ತೆಯಲ್ಲಿ ವಿದ್ಯುತ್​ ಕಂಬದ ಮೇಲೆ ಮರ ಬಿದ್ದಿದೆ.

12. ಜಯಮಹಲ್​ ರಸ್ತೆಯಲ್ಲಿ ದೊಡ್ಡ ಮರ ಬಿದ್ದಿದೆ.

13. ಮಹಾಲಕ್ಷ್ಮೀ ಲೇಔಟ್​ನಲ್ಲಿ ಮನೆಗಳಿಗೆ ನೀರು ನುಗ್ಗಿದೆ.