Bengaluru: ಕನ್ನಡ TV ಸುದ್ದಿವಾಹಿನಿಗಳಿಂದ ಸುಳ್ಳು ಸುದ್ದಿ – TVಗಳ ಸುಳ್ಳು ಸುದ್ದಿ ಆಧರಿಸಿ BJP ನಾಯಕರ ಟ್ವೀಟ್​ – ಆತ್ಮಹತ್ಯೆ ಕೇಸ್​​ಗೆ ತಿರುವು

ಬೆಂಗಳೂರಿನ ಅತ್ತಿಗುಪ್ಪೆಯಲ್ಲಿ 29 ವರ್ಷದ ಯುವಕ ಗೌತಮ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೌತಮ್​ ಬಿಬಿಎಂಪಿ ಮಾಜಿ ಕಾರ್ಪೋರೇಟರ್​ ದೊಡ್ಡಯ್ಯ ಅವರ ಮಗ.

ಗೌತಮ್​ ಆತ್ಮಹತ್ಯೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕನ್ನಡದ ಟಿವಿ ಸುದ್ದಿ ಮಾಧ್ಯಮಗಳು ಸರ್ಕಾರದಿಂದ ಕಾಮಗಾರಿಯ ಅನುದಾನ ಬಿಡುಗಡೆ ಆಗದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ಪ್ರಸಾರ ಮಾಡಿದ್ದವು.

ಗೌತಮ್​ ಗುತ್ತಿಗೆದಾರ ಅಲ್ಲ:

ಆದರೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಗೌತಮ್​ ಅವರ ಭಾವ:

ಗೌತಮ್ ಗುತ್ತಿಗೆದಾರನೇ ಅಲ್ಲ. ಅವರು ಯಾವುದೇ ಗುತ್ತಿಗೆ ಮಾಡುತ್ತಿರಲಿಲ್ಲ. ಆತನ ಬಳಿ ಪರವಾನಿಗೆಯೂ ಇರಲಿಲ್ಲ. ಇದೆಲ್ಲ ಬಿಜೆಪಿಯ ಸೃಷ್ಟಿ. ಅವನಿಗೆ ಮದುವೆ ಮಾಡುವ ತಯಾರಿ ನಡೆಸಿದ್ದೆವು, 2-3 ಕನ್ಯೆಗಳನ್ನೂ ನೋಡಿದ್ದೆವು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅವನು ಡಿಪ್ರೆಶನ್​ಗೆ ಒಳಗಾಗಿದ್ದ

ಎಂದು ಮಾಹಿತಿ ನೀಡಿದ್ದಾರೆ.

ನನ್ನ ಮಗ ಗುತ್ತಿಗೆದಾರ ಅಲ್ಲ:

ನನ್ನ ಮಗ ಗುತ್ತಿಗೆದಾರ ಅಲ್ಲ, ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ನಮಗೂ ಗೊತ್ತಾಗುತ್ತಿಲ್ಲ ಎಂದು ಗೌತಮ್​ ಅವರ ತಂದೆ ದೊಡ್ಡಯ್ಯ ಹೇಳಿದ್ದಾರೆ.

ಸುಳ್ಳು ಸುದ್ದಿ ಆಧರಿಸಿ ಬಿಜೆಪಿ ನಾಯಕರಿಂದ ಟ್ವೀಟ್​:

ಗೌತಮ್​ ಆತ್ಮಹತ್ಯೆ ಬಗ್ಗೆ ಕನ್ನಡದ ಟಿವಿ ಸುದ್ದಿವಾಹಿನಿಗಳು ಸುಳ್ಳು ಸುದ್ದಿ ಪ್ರಸಾರ ಮಾಡಿದ್ದನ್ನೇ ಆಧರಿಸಿ ಬಿಜೆಪಿ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ ಅವರನ್ನೇ ಟಾರ್ಗೆಟ್​ ಮಾಡಿ ಟ್ವೀಟಿಸಿದರು. ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಜನಾಂದೋನದ ಎಚ್ಚರಿಕೆಯನ್ನೂ ನೀಡಿದರು.

LEAVE A REPLY

Please enter your comment!
Please enter your name here