ಬಸವಕಲ್ಯಾಣ ಮಾಜಿ ಶಾಸಕ ಖೂಬಾ ಮತ್ತೆ ಜೆಡಿಎಸ್​​ಗೆ..?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಬೀದರ್​ ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿದ್ದ ಮಲ್ಲಿಕಾರ್ಜುನ ಖೂಬಾ ಅವರು ಬಿಜೆಪಿ ಬಿಡಲು ನಿರ್ಧರಿಸಿದ್ದಾರೆ.
ಬಿಜೆಪಿ ಬಿಟ್ಟು ಖೂಬಾ ಅವರು ಜೆಡಿಎಸ್​ ಸೇರಲಿದ್ದಾರೆ.
ಜೆಡಿಎಸ್​ ಸೇರುವ ಸಂಬಂಧ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ ಹೆಚ್​ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಆಗಿದ್ದಾರೆ.
ಚನ್ನಪಟ್ಟಣಕ್ಕೆ ತೆರಳಿ ಕುಮಾರಸ್ವಾಮಿ ಅವರನ್ನು ಭೇಟಿ ಆಗಿರುವ ಖೂಬಾ, ಕುಮಾರಸ್ವಾಮಿ ಅವರಿಗೆ ಶಾಲು ಹಾಕಿ ಸನ್ಮಾನಿಸಿದ್ದಾರೆ.
ಖೂಬಾ ಅವರಿಗೆ ಜೆಡಿಎಸ್​ ಬಸವಕಲ್ಯಾಣದಿಂದ ಟಿಕೆಟ್​ ನೀಡಲಿದೆ.
ಈಗಾಗಲೇ ಈ ಬಸವಕಲ್ಯಾಣದಿಂದ ಸೈಯದ್​ ಯಾಸ್ರಬ್​ ಅಲಿ ಜೆಡಿಎಸ್ ಅಭ್ಯರ್ಥಿ​ ಘೋಷಣೆ ಮಾಡಲಾಗಿದೆಯಾದರೂ ಖೂಬಾ ಅವರಿಗೆ ಜೆಡಿಎಸ್​ ಟಿಕೆಟ್​ ನೀಡಲಿದೆ.
2013ರಲ್ಲಿ ಖೂಬಾ ಅವರು ಜೆಡಿಎಸ್​ ಟಿಕೆಟ್​ನಿಂದ ಗೆದ್ದು ಶಾಸಕರಾಗಿದ್ದರು. 2004ರಲ್ಲೂ ಜೆಡಿಎಸ್​​ ಶಾಸಕರಾಗಿ ಖೂಬಾ ಗೆದ್ದಿದ್ದರು. ಆದರೆ 2018ರ ಚುನಾವಣೆ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಅವರ ಆಗ್ರಹದ ಮೇರೆಗೆ ಬಿಜೆಪಿಗೆ ಸೇರ್ಪಡೆ ಆಗಿದ್ದರು.
ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಜೊತೆ ಆಗಿರುವ ಭೇಟಿ ಬಗ್ಗೆ ತಮ್ಮ ಫೇಸ್​ಬುಕ್​ನಲ್ಲಿ ಪೋಟೋ ಹಂಚಿಕೊಂಡಿರುವ ಖೂಬಾ
ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಜೊತೆ ಆಗಿರುವ ಭೇಟಿ ಬಗ್ಗೆ ತಮ್ಮ ಫೇಸ್​ಬುಕ್​ನಲ್ಲಿ ಪೋಟೋ ಹಂಚಿಕೊಂಡಿರುವ ಖೂಬಾ
ಆದರೆ 2018ರ ಚುನಾವಣೆಯಲ್ಲಿ ಖೂಬಾ ಅವರು ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. 2018ರಲ್ಲಿ ಕಾಂಗ್ರೆಸ್​ನಿಂದ ಬಿ ನಾರಾಯಣ ರಾವ್​ ಅವರು ಗೆದ್ದಿದ್ದರು.
ಆದರೆ ನಾರಾಯಣ್​ ರಾವ್​ ಅವರ ನಿಧನದಿಂದ 2021 ನಡೆದ ಉಪ ಚುನಾವಣೆಯಲ್ಲಿ ಖೂಬಾ ಬದಲಿಗೆ ಬಿಜೆಪಿ ಶರಣು ಸಲಗಾರ್​ ಅವರಿಗೆ ಟಿಕೆಟ್​ ನೀಡಿತ್ತು.
ಬಿಜೆಪಿ ಟಿಕೆಟ್​ ನಿರಾಕರಿಸಿದ್ದರಿಂದ ಖೂಬಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 9,390 ಮತಗಳನ್ನು ಪಡೆದರು.
ಖೂಬಾ ಬಂಡಾಯದ ಹಿನ್ನೆಲೆಯಲ್ಲಿ ಉಪ ಚುನಾವಣೆಯ ದಿನದಂದೇ ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷದವರೆಗೆ ಅಮಾನತು ಮಾಡಲಾಗಿತ್ತು.

LEAVE A REPLY

Please enter your comment!
Please enter your name here