Sunday, May 11, 2025
Every Minute News
  • News
  • Cinema
  • Sports
  • Health
  • Lifestyle
  • Gallery
  • Special
No Result
View All Result
  • News
  • Cinema
  • Sports
  • Health
  • Lifestyle
  • Gallery
  • Special
No Result
View All Result
Every Minute News
No Result
View All Result
ADVERTISEMENT
Home News

BIG EXCLUSIVE: ಮುನಿಯಾಲ್​ ಉದಯ್​ ಕುಮಾರ್​ ಶೆಟ್ಟಿಗೆ ಸಿಗಲ್ವಾ ಕಾಂಗ್ರೆಸ್​ ಟಿಕೆಟ್​..? 11 ಕಾರಣಗಳೇ ಮುಳುವಾಗುತ್ತಾ..?

PratikshanaNews by PratikshanaNews
22nd March 2023
in News
0
EXCLUSIVE BREAKING: ಮುನಿಯಾಲ್ ಉದಯ್ ಕುಮಾರ್ ಶೆಟ್ಟಿಗೆ ಕಾರ್ಕಳ ಕಾಂಗ್ರೆಸ್ ಟಿಕೆಟ್ ಅಂತಿಮ
0
SHARES
0
VIEWS
Share on FacebookShare on Twitter

ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಮುನಿಯಾಲ್​ ಉದಯ್​ ಕುಮಾರ್​ ಶೆಟ್ಟಿ ಅವರಿಗೆ ಟಿಕೆಟ್​ ಸಿಗಬಹುದು ಎಂಬ ಬಗ್ಗೆ ಕೆಲ ದಿನಗಳ ಹಿಂದೆ ಪ್ರತಿಕ್ಷಣ ವರದಿ ಮಾಡಿತ್ತು. ಆದರೆ ಮುನಿಯಾಲ್​ ಅವರಿಗೆ ಈ ಬಾರಿ ಟಿಕೆಟ್​ ಸಿಗದೇ ಇದ್ದರೂ ಅಚ್ಚರಿಯೇನಿಲ್ಲ.

ಮೂಲಗಳ ಪ್ರಕಾರ ಮುನಿಯಾಲ್​ ಅವರ ವಿಷಯದಲ್ಲಿ ಕಾಂಗ್ರೆಸ್​​ಗೆ ಹಲವು ಆತಂಕಗಳು ಮತ್ತು ಮುನಿಯಾಲ್​ ಅವರಿಗೆ ಟಿಕೆಟ್​ ಕೊಟ್ಟರೆ ಬಿಜೆಪಿ ಶಾಸಕ ಸುನಿಲ್​ ಕುಮಾರ್ ಅಥವಾ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​ ಅವರಿಗೆ ಲಾಭ ಆಗಬಹುದು ಎಂಬ ಆತಂಕ ಕಾಂಗ್ರೆಸ್​​ನ್ನು ಕಾಡುತ್ತಿದೆ.

1. ಮೂರು ಬಾರಿ ಅವಕಾಶ, ಮೂರು ಬಾರಿಯೂ ಸಮಯ ಕೇಳಿದ ಮುನಿಯಾಲ್​:

ಒಂದೂವರೆ ವರ್ಷದ ಹಿಂದೆಯೇ ಕಾರ್ಕಳದಲ್ಲಿ ಕಾಂಗ್ರೆಸ್​ ಈ ಬಾರಿ ಮುನಿಯಾಲ್​ ಉದಯ್​ ಕುಮಾರ್​ ಶೆಟ್ಟಿ ಅವರಿಗೆ ಟಿಕೆಟ್​ ಕೊಡುವ ಬಗ್ಗೆ ಯೋಚನೆ ಮಾಡಿತ್ತು. ಈ ಬಗ್ಗೆ ಖುದ್ದು ಮುನಿಯಾಲ್​ ಅವರ ಬಳಿಯೇ ಕಾಂಗ್ರೆಸ್​ ನಾಯಕರು ಚರ್ಚೆಯನ್ನೂ ನಡೆಸಿದ್ದರು.

ಆದರೆ ಆಗ ಮುನಿಯಾಲ್​ ತಮಗೆ ಆರು ತಿಂಗಳು ಸಮಯ ನೀಡುವಂತೆ, ಆರು ತಿಂಗಳಲ್ಲಿ ತಮ್ಮ ರಾಜಕೀಯ ನಿರ್ಧಾರ ತಿಳಿಸುವುದಾಗಿ ಕಾಂಗ್ರೆಸ್​ ನಾಯಕರ ಬಳಿ ಸಮಯ ಕೇಳಿದ್ದರು.

ಇದಾದ ಬಳಿಕ ಮೂರು ತಿಂಗಳ ಹಿಂದೆ ಮತ್ತೆ ಉದಯ್​ ಕುಮಾರ್​ ಶೆಟ್ಟಿ ಅವರನ್ನು ಕಾಂಗ್ರೆಸ್​ ಸಂಪರ್ಕಿಸಿತ್ತು. ಆದರೆ ಆಗಲೂ ಸಮಯವಾಕಾಶ ಕೇಳಿದ್ದರು.

ಇತ್ತ, ಕಾಂಗ್ರೆಸ್​ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಮುನಿಯಾಲ್​ ಅವರಿಗೆ ಕ್ಷೇತ್ರದಲ್ಲಿ ಕೆಲವು ಪೂರಕ ಅಂಶಗಳಿವೆ ಎಂಬ ಮಾಹಿತಿ ಸಿಕ್ಕಿದ್ದರಿಂದ ಬೆಂಗಳೂರಲ್ಲಿ ನಡೆದಿದ್ದ ಕಾಂಗ್ರೆಸ್​​ನ ಹಿರಿಯ ನಾಯಕರ ಸಭೆಯ ಬಳಿಕ ಮತ್ತೆ ಕಾಂಗ್ರೆಸ್​ ಮುನಿಯಾಲ್​ ಅವರನ್ನು ಸಂಪರ್ಕ ಮಾಡಿತ್ತು.

ಆದರೆ ಮೂರನೇ ಬಾರಿಯೂ ಮತ್ತೆ ಸ್ಪರ್ಧೆಯ ಬಗ್ಗೆ ನಿರ್ಧರಿಸಲು ಸಮಯ ನೀಡುವಂತೆ ಮುನಿಯಾಲ್​ ಕಾಂಗ್ರೆಸ್​ ನಾಯಕರಿಗೆ ಹೇಳಿದರು. ಆ ಮೂರನೇ ಮಾತುಕತೆ ನಡೆದು ಹಲವು ದಿನಗಳಾದರೂ ಇನ್ನೂ ಮುನಿಯಾಲ್​ ಅವರ ಕಡೆಯಿಂದ ಕಾಂಗ್ರೆಸ್​ ನಾಯಕರಿಗೆ ಸಂದೇಶ ರವಾನೆ ಆಗಿಲ್ಲ.

ಪದೇ ಪದೇ ಸಂಪರ್ಕಿಸಿದರೂ ಮುನಿಯಾಲ್​ ಉದಯ್​ ಕುಮಾರ್​ ಶೆಟ್ಟಿ ಸಮಯ ದೂಡುವ ನಿರ್ಧಾರದಿಂದ ಇವರಿಗೆ ಟಿಕೆಟ್​ ಕೊಡಬೇಕೇ ಬೇಡವೇ ಎಂಬ ಬಗ್ಗೆ ಪ್ರಶ್ನೆಗಳು ಕಾಂಗ್ರೆಸ್​ ನಾಯಕರನ್ನು ಕಾಡುತ್ತಿವೆ.

2. ಕಾಂಗ್ರೆಸ್​ ಪಕ್ಷದ ಕಡೆ ತಲೆ ಹಾಕದ ಮುನಿಯಾಲ್​:

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್​ ಕೈ ತಪ್ಪಿದ ಬಳಿಕ ಉಡುಪಿ ಕಾಂಗ್ರೆಸ್​ ಜಿಲ್ಲಾ ಉಪಾಧ್ಯಕ್ಷರಾಗಿದ್ದ ಮುನಿಯಾಲ್​ ಅವರು ಕಾರ್ಕಳದಲ್ಲಿ ಕಾಂಗ್ರೆಸ್​ ಸಂಘಟನೆಯಲ್ಲೇ ತೊಡಗಿಸಿಕೊಂಡಿಲ್ಲ. ಪಕ್ಷದ ಸಭೆ, ಸಮಾರಂಭ, ಸಮಾವೇಶಗಳಿಂದ ಐದು ವರ್ಷಗಳಿಂದ ಮುನಿಯಾಲ್​ ಅವರು ಸಂಪೂರ್ಣ ದೂರ ಉಳಿದಿದ್ದಾರೆ. 

ಹೀಗಾಗಿ ಮುನಿಯಾಲ್​ ಅವರು ಇನ್ನೂ ಕಾಂಗ್ರೆಸ್​ನಲ್ಲಿದ್ದಾರೋ ಅಥವಾ ಪಕ್ಷ ಬಿಟ್ಟಿದ್ದಾರೋ ಎನ್ನುವುದೇ ಕಾರ್ಕಳದಲ್ಲಿ ಗೊಂದಲ. 

3. ಬಿಜೆಪಿ ಸೇರಿದ ಮುನಿಯಾಲ್​ ಬೆಂಬಲಿಗರು:

ಮುನಿಯಾಲ್​ ಜೊತೆಗೆ ಗುರುತಿಸಿಕೊಂಡಿದ್ದ ಬೆಂಬಲಿಗರು ಕಳೆದ ವಿಧಾನಸಭಾ ಚುನಾವಣೆ ಬಳಿಕ ಒಬ್ಬೊಬ್ಬರಾಗಿಯೇ ಬಿಜೆಪಿ ಸೇರಿಕೊಂಡರು.

4. ಬಿಜೆಪಿಗೆ ಸೇರಲು ಪ್ರಯತ್ನಿಸಿದ್ದ ಮುನಿಯಾಲ್​:

ಉಡುಪಿ ಮಾಜಿ ಶಾಸಕ, ಮಾಜಿ ಸಚಿವ ಪ್ರಮೋದ್​ ಮಧ್ವರಾಜ್​ ಅವರು ಬಿಜೆಪಿ ಸೇರಿದ ಬಳಿಕ ಮುನಿಯಾಲ್​ ಅವರು ಕೂಡಾ ಬಿಜೆಪಿ ಸೇರುವ ಬಗ್ಗೆ ಪ್ರಯತ್ನಿಸಿದ್ದರು. ಇದರ ಸಲುವಾಗಿಯೇ ಕಾರ್ಕಳದ ಹಲವು ಭಾಗಗಳಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಮತ್ತು ನಾಯಕರ ಜೊತೆಗೆ ಸಭೆ ಕರೆದಿದ್ದರೂ ಆ ಸಭೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇತ್ತ ಆ ಸಭೆಗಳಲ್ಲಿ ಭಾಗವಹಿಸಿದ್ದ ಮುನಿಯಾಲ್​ ಅವರ ಕೆಲ ಹಿತೈಷಿ ಕಾಂಗ್ರೆಸ್​ ಕಾರ್ಯಕರ್ತರು ಬಿಜೆಪಿ ಸೇರುವ ನಿರ್ಧಾರಕ್ಕೆ ಬೆಂಬಲ ಸೂಚಿಸಲಿಲ್ಲ.

ಹೀಗಾಗಿ ಕೊನೆಗೆ ಅನಿವಾರ್ಯವಾಗಿ ಮುನಿಯಾಲ್​ ಬಿಜೆಪಿ ಸೇರುವ ನಿರ್ಧಾರದಿಂದ ಹಿಂದೆ ಸರಿಯಬೇಕಾಯಿತು.

5. ಸಚಿವ ಸುನಿಲ್​ ಕುಮಾರ್​ ಜೊತೆಗೆ ಆತ್ಮೀಯತೆ:

ಮುನಿಯಾಲ್​ ಅವರ ವಿರುದ್ಧ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯ (ED) ದಾಳಿ ಮಾಡಿಸಿದ್ದೇ ಸಚಿವ ಸುನಿಲ್​ ಕುಮಾರ್​ ಎಂಬ ಆರೋಪ ಇದೆ.

ತಮ್ಮ ರಾಜಕೀಯ ಎದುರಾಳಿ ಪಕ್ಷದ ಪ್ರಭಾವಿ ಸಚಿವರೊಬ್ಬರು ತಮ್ಮನ್ನು ರಾಜಕೀಯವಾಗಿ ಮುಗಿಸಲು ದಾಳಿ ಮಾಡಿದರು ಎಂಬ ಆರೋಪದ ನಡುವೆಯೂ ಈ ದಾಳಿಯ ಬಳಿಕ ಮುನಿಯಾಲ್​ ಅವರು ಕಾಂಗ್ರೆಸ್​​ಗಿಂತಲೂ ಸಚಿವ ಸುನಿಲ್​ ಕುಮಾರ್​ ಅವರ ಜೊತೆಗೆ ಆತ್ಮೀಯತೆ ಹೆಚ್ಚಿಸಿಕೊಂಡಿದ್ದು ಕಾರ್ಕಳದಲ್ಲಿ ಅಚ್ಚರಿ ಮೂಡಿಸಿತ್ತು.

ಬಿಜೆಪಿ ಸರ್ಕಾರದ ವಿರುದ್ಧ ಶೇಕಡಾ 40ರಷ್ಟು ಕಮಿಷನ್​ ಆರೋಪ ಬಂದಾಗ ಸುದ್ದಿಗೋಷ್ಠಿ ನಡೆಸಿದ್ದ ಮುನಿಯಾಲ್​ ಅವರು ಉಡುಪಿ ಜಿಲ್ಲೆಯಲ್ಲಿ ಅಂಥದ್ದೇನು ಇಲ್ಲ ಎನ್ನುವ ಮೂಲಕ ಬಿಜೆಪಿ ಸರ್ಕಾರದ ಪರವಾಗಿ ವಕಾಲತ್ತು ವಹಿಸಿದ್ದರು.

6. ಉದ್ಯಮದ ಕಾರಣದಿಂದ ಮುನಿಯಾಲ್​ ಹಿಂಜರಿಕೆ:

ಸಚಿವ ಸುನಿಲ್​ ಕುಮಾರ್​ ಅಥವಾ ಕ್ಷೇತ್ರದಲ್ಲಿ ಬಿಜೆಪಿಯ ವಿರುದ್ಧ ಪ್ರಬಲ ಸ್ಪರ್ಧೆ ಕೊಡುವುದಕ್ಕೆ ಸದ್ಯದ ಸನ್ನಿವೇಶದಲ್ಲಿ ಮುನಿಯಾಲ್​ ಅವರು ಸಿದ್ಧರಿಲ್ಲ. ಒಂದು ವೇಳೆ ಬಿಜೆಪಿಯನ್ನು ಎದುರು ಹಾಕಿಕೊಂಡರೆ ಗುತ್ತಿಗೆದಾರರಾಗಿರುವ ತಮ್ಮ ಉದ್ಯಮಕ್ಕೆ ಹಿನ್ನಡೆ ಆಗಬಹುದು ಎಂಬ ಆತಂಕ ಮುನಿಯಾಲ್​ ಅವರದ್ದು.

7. ಬಿಜೆಪಿ ಶಾಸಕರ ಆಪ್ತ ಉದ್ಯಮಿಯ ಜೊತೆಗೆ ನಂಟು:

ಇತ್ತ ದಕ್ಷಿಣ ಕನ್ನಡದ ಪ್ರಭಾವಿ ಬಿಜೆಪಿ ಶಾಸಕರೊಬ್ಬರ ಆಪ್ತ ಉದ್ಯಮಿಗೂ ಮುನಿಯಾಲ್​ ಅವರಿಗೂ ನಿರಂತರ ಸಂಪರ್ಕ ಕಾರಣ ಮುನಿಯಾಲ್​ ಅವರ ರಾಜಕೀಯ ನಡೆಗಳು ಅನುಮಾನಕ್ಕೆ ಕಾರಣವಾಗಿದೆ.

8. ಕೊನೆ ಕ್ಷಣದಲ್ಲಿ ಕೈ ಕೊಟ್ಟರೆಂಬ ಆತಂಕ:

ಮುನಿಯಾಲ್​ ಅವರಿಗೆ ಕಾಂಗ್ರೆಸ್​ ಟಿಕೆಟ್​ನ ಆಫರ್​ ಕೊಟ್ಟಿರುವುದು ನಿಜ. ಆದರೆ ಕಾಂಗ್ರೆಸ್​​ಗೆ​ ಕಾಡ್ತಿರುವ ದೊಡ್ಡ ಆತಂಕ ಕೊನೆ ಕ್ಷಣದಲ್ಲಿ ಚುನಾವಣೆಯಲ್ಲಿ ಮುನಿಯಾಲ್​ ಸುನಿಲ್​ ಕುಮಾರ್​ ಅವರ ನಿಂತರೆ ಕಥೆ ಏನು ಎನ್ನುವುದು. ಕಾರ್ಕಳ ಕಾಂಗ್ರೆಸ್​ನಲ್ಲಿ ಕಾರ್ಯಕರ್ತರು ಮತ್ತು ನಾಯಕರು ಇದೇ ಮಾತುಗಳನ್ನಾಡುತ್ತಿದ್ದಾರೆ.

9. ರಾಜಕೀಯ ನಿಷ್ಠೆಯ ಕೊರತೆ:

ರಾಜಕೀಯ ಆಕಾಂಕ್ಷೆಯನ್ನು ಹೊಂದಿರುವ ಮುನಿಯಾಲ್​ ಅವರಿಗೆ ರಾಜಕಾರಣಿಗೆ ಇರಬೇಕಾದ ದೀರ್ಘಕಾಲದ ರಾಜಕೀಯ ನಿಷ್ಠೆ ಮತ್ತು ಸ್ಪಷ್ಟತೆ ಇಲ್ಲದೇ ಇರುವುದು ಅವರ ಹಿನ್ನಡೆಗೆ ಕಾರಣವಾಗಬಹುದು. 

ಕಳೆದ ಬಾರಿ ಟಿಕೆಟ್​ ಕೈ ತಪ್ಪಿದಾಗ ಬಹಿರಂಗವಾಗಿಯೇ ಅಸಮಾಧಾನಗೊಂಡು ಪ್ರತಿಭಟಿಸಿದ್ದ ಮುನಿಯಾಲ್​ ಆ ಬಳಿಕ ಕಾರ್ಕಳದಲ್ಲಿ ಕಾಂಗ್ರೆಸ್​ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳಲಿಲ್ಲ ಮತ್ತು ಬಿಜೆಪಿ ಸೇರುವ ಪ್ರಯತ್ನವನ್ನೂ ಮಾಡಿದ್ದರು. ಕರೆದು ಟಿಕೆಟ್​ ಕೊಡುತ್ತಾರೆ ಎಂಬ ಭಾವನೆ ಮುನಿಯಾಲ್​ ಅವರಿಗೆ ರಾಜಕೀಯ ನಿಷ್ಠೆ ಮತ್ತು ಬದ್ಧತೆಯ ಕೊರತೆಯನ್ನು ಬಿಂಬಿಸುತ್ತಿದೆ ಎನ್ನುವುದು ಕಾರ್ಕಳ ಕಾಂಗ್ರೆಸ್​ ಕಾರ್ಯಕರ್ತರ ಅಭಿಪ್ರಾಯ.

10. ಕಾಂಗ್ರೆಸ್​ ನಾಯಕ ಎಂದು ಗುರುತಿಸಿಕೊಳ್ಳಲೂ ಹಿಂದೇಟು:

ಐದು ವರ್ಷಗಳಲ್ಲಿ ಮುನಿಯಾಲ್​ ಅವರು ತಾವು ಹೊರಡಿಸಿರುವ ಪೋಸ್ಟರ್​ಗಳಲ್ಲಿ ಎಲ್ಲೂ ಕೂಡಾ ತಾವು ಕಾಂಗ್ರೆಸ್​ ಮುಖಂಡರೆಂದಾಗಲೀ, ಕಾಂಗ್ರೆಸ್​ ಪದಾಧಿಕಾರಿ ಎಂದಾಗಲೀ ಗುರುತಿಸಿಕೊಂಡಿಲ್ಲ. 

11. ಕಾಂಗ್ರೆಸ್​ ಮತಗಳೇ ದೂರ ಆಗಬಹುದು ಆತಂಕ:

ಮುನಿಯಾಲ್​ ಅವರಿಗೆ ಟಿಕೆಟ್​ ಕೊಟ್ಟರೆ  ಕಾಂಗ್ರೆಸ್​ನ ನಿಷ್ಠ ಮತಗಳೂ ಕಾಂಗ್ರೆಸ್​ನಿಂದ ದೂರವಾಗಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​ ಅವರ ಪಾಲಾಗಬಹುದು ಎನ್ನುವ ಆತಂಕವೂ ಕಾಂಗ್ರೆಸ್​ನ್ನು ಕಾಡುತ್ತಿದೆ.

ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಯತ್ನ:

ಕಾಂಗ್ರೆಸ್​ನಿಂದಲೇ ದೂರ ಇರುವ ಮುನಿಯಾಲ್​ ಅವರು ಕಳೆದ ಬಾರಿಯಂತೆ ಈ ಬಾರಿಯೂ ಅನುಕಂಪಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂಬುದು ಕಾರ್ಕಳ ಕಾಂಗ್ರೆಸ್ಸಿಗರ ಮಾತು. 

ಒಂದು ವೇಳೆ ಕಾಂಗ್ರೆಸ್​ ಟಿಕೆಟ್​ ಬೇಕಾಗಿದ್ದಲ್ಲಿ ಕಾಂಗ್ರೆಸ್​ ಮೂರು ಬಾರಿ ಕೇಳಿರುವಾಗ ಇಷ್ಟೊತ್ತಿಗೆ ಮುನಿಯಾಲ್​ ಅವರು ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿರುತ್ತಿದ್ದರು. ಆದರೆ ಇದುವರೆಗೆ ಮುನಿಯಾಲ್​ ಪಕ್ಷ ಸಂಘಟನೆಯಲ್ಲಿ ಗುರುತಿಸಿಕೊಂಡಿಲ್ಲ.

ಆದರೆ ಈ ಬಾರಿಯೂ ಟಿಕೆಟ್​ ಕೈ ತಪ್ಪಿದರೆ ಕಾಂಗ್ರೆಸ್​ನಿಂದಲೇ ಎಂಬ ಅನುಕಂಪ ಸೃಷ್ಟಿಸುವ ಪ್ರಯತ್ನವನ್ನು ಮುನಿಯಾಲ್​ ಅವರು ಮಾಡುತ್ತಿದ್ದಾರೆ ಎಂಬುದು ಕಾರ್ಕಳ ಕಾಂಗ್ರಸ್ಸಿಗರ ಮಾತು. 

ADVERTISEMENT
ADVERTISEMENT
  1. Daymand Satta
  2. Diamond Exchange 9
  3. Betln Exchange
  4. Daimand Satta Com
  5. Satsport Exchange
ADVERTISEMENT
Previous Post

ಕಾರ್ಕಳ ಬಾಹುಬಲಿ ಬೆಟ್ಟದಲ್ಲಿ ಆರ್​ಎಸ್​ಎಸ್​ ಕಾರ್ಯಕ್ರಮ

Next Post

ದಕ್ಷಿಣ ಕನ್ನಡ ಕಾಂಗ್ರೆಸ್​ ಹಿಂದುಳಿದ ವರ್ಗಗಳ ಜಿಲ್ಲಾ ಉಪಾಧ್ಯಕ್ಷರಾಗಿ ಪದ್ಮನಾಭ ಸಾಮಂತ್​ ನೇಮಕ

Related Posts

ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ
News

ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ

by PratikshanaNews
19th February 2025
ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ
News

ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ

by PratikshanaNews
18th February 2025
ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌
News

ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌

by PratikshanaNews
3rd January 2025
ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!
News

ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!

by PratikshanaNews
3rd January 2025
ಬೆಂಗಳೂರು ಮೂಲದ ಕೋ ಆಪರೇಟಿವ್‌ ಬ್ಯಾಂಕ್‌ ಪುಣೆ ಮೂಲದ ಬ್ಯಾಂಕ್‌ನೊಂದಿಗೆ ವಿಲೀನ
News

ಬೆಂಗಳೂರು ಮೂಲದ ಕೋ ಆಪರೇಟಿವ್‌ ಬ್ಯಾಂಕ್‌ ಪುಣೆ ಮೂಲದ ಬ್ಯಾಂಕ್‌ನೊಂದಿಗೆ ವಿಲೀನ

by PratikshanaNews
2nd January 2025
33 ಡಿವೈಎಸ್ಪಿ, 132 ಪೊಲೀಸ್ ಇನ್ಸ್‌ಪೆಕ್ಟರ್​ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ
News

ಹೊಸ ವರ್ಷದ 2ನೇ ದಿನದಲ್ಲಿ 4 ಐಎಎಸ್‌ ಅಧಿಕಾರಿಗಳ ವರ್ಗಾವಣೆ

by PratikshanaNews
2nd January 2025
Pic Courtesy: Adi931 Bus Photography
News

ಕೆಎಸ್‌ಆರ್‌ಟಿಸಿ ನೌಕರರಿಗೂ 180 ದಿನಗಳ ಶಿಶುಪಾಲನಾ ರಜೆ ಮಂಜೂರು

by PratikshanaNews
2nd January 2025
ವಿಧಾನಸಭೆ ಮಾಜಿ ಸಭಾಧ್ಯಕ್ಷ ರಮೇಶ್‌ ಕುಮಾರ್‌ಗೆ ಕರ್ನಾಟಕ ಹೈಕೋರ್ಟ್‌ ಆಘಾತ
News

ವಿಧಾನಸಭೆ ಮಾಜಿ ಸಭಾಧ್ಯಕ್ಷ ರಮೇಶ್‌ ಕುಮಾರ್‌ಗೆ ಕರ್ನಾಟಕ ಹೈಕೋರ್ಟ್‌ ಆಘಾತ

by PratikshanaNews
2nd January 2025
Next Post
ದಕ್ಷಿಣ ಕನ್ನಡ ಕಾಂಗ್ರೆಸ್​ ಹಿಂದುಳಿದ ವರ್ಗಗಳ ಜಿಲ್ಲಾ ಉಪಾಧ್ಯಕ್ಷರಾಗಿ ಪದ್ಮನಾಭ ಸಾಮಂತ್​ ನೇಮಕ

ದಕ್ಷಿಣ ಕನ್ನಡ ಕಾಂಗ್ರೆಸ್​ ಹಿಂದುಳಿದ ವರ್ಗಗಳ ಜಿಲ್ಲಾ ಉಪಾಧ್ಯಕ್ಷರಾಗಿ ಪದ್ಮನಾಭ ಸಾಮಂತ್​ ನೇಮಕ

Leave a Reply Cancel reply

Your email address will not be published. Required fields are marked *

ADVERTISEMENT

Trend News

ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ

by PratikshanaNews
19th February 2025
0
ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ
News

ಮಹಾಕುಂಭದಲ್ಲಿ ಭಕ್ತರು ಪವಿತ್ರ ಸ್ನಾನ ಮಾಡುತ್ತಿರುವ ನೀರು ಸ್ನಾನ ಮಾಡುವುದಕ್ಕೂ ಯೋಗ್ಯವಲ್ಲ ಎಂದು ಕೇಂದ್ರ ಸರ್ಕಾರದ ಆಧೀನದಲ್ಲಿ ಬರುವ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಸಲ್ಲಿಸಿದೆ....

Read more

ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ

by PratikshanaNews
18th February 2025
0
ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ
News

ಮುಸಲ್ಮಾನರ ಉಪವಾಸ ತಿಂಗಳು ಆಗಿರುವ ರಂಜಾನ್‌ನಲ್ಲಿ ಇಸ್ಲಾಂ ಧರ್ಮಕ್ಕೆ ಸೇರಿದ ರಾಜ್ಯ ಸರ್ಕಾರಿ ನೌಕರರು ಮತ್ತು ಗುತ್ತಿಗೆ ನೌಕರರಿಗೆ ತೆಲಂಗಾಣದಲ್ಲಿರುವ ಕಾಂಗ್ರೆಸ್‌ ಸರ್ಕಾರ ಮತ್ತು ಆಂಧ್ರಪ್ರದೇಶದಲ್ಲಿರುವ ತೆಲುಗು...

Read more

ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌

by PratikshanaNews
3rd January 2025
0
ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌
News

ಆಸ್ಟ್ರೇಲಿಯಾ ವಿರುದ್ಧದ 5ನೇ ಮತ್ತು ಕಡೆಯ ಟೆಸ್ಟ್‌ನ ಮೊದಲ ದಿನವೇ ಭಾರತ ಆಲೌಟ್‌ ಆಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 72.2 ಓವರ್‌ಗಳಲ್ಲಿ 185 ರನ್‌ಗೆ ಟೀಂ ಇಂಡಿಯಾದ ಎಲ್ಲಾ...

Read more

ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!

by PratikshanaNews
3rd January 2025
0
ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!
News

ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ಪತ್ನಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅತ್ಯಂತ ದುಬಾರಿ ಮೊತ್ತದ ಉಡುಗೊರೆಯನ್ನು ನೀಡಿದ್ದಾರೆ. ಜೋ ಬಿಡೆನ್‌ ಪತ್ನಿ ಜಿಲ್‌ ಬಿಡೆನ್‌ಗೆ ಪ್ರಧಾನಿ...

Read more
ADVERTISEMENT
ADVERTISEMENT
Every Minute News

© 2023 Pratikshana News

Navigate Site

  • News
  • Cinema
  • Sports
  • Health
  • Lifestyle
  • Gallery
  • Special

Follow Us

No Result
View All Result
  • News
  • Cinema
  • Sports
  • Health
  • Lifestyle
  • Gallery
  • Special

© 2023 Pratikshana News

error: Content is protected !!