BIG BREAKING: ಸಿದ್ದರಾಮಯ್ಯ ಕೊಲೆಗೆ ಪ್ರಚೋದನೆ – ಅಶ್ವತ್ಥ್​ ನಾರಾಯಣ್​ ಸುಪಾರಿ ಕೊಟ್ಟ ಆರೋಪ – FIR ದಾಖಲು

ಸಿದ್ದರಾಮಯ್ಯ ಅವರ ಕೊಲೆಗೆ ಸಾರ್ವಜನಿಕರಿಗೆ ನೇರ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಮಾಜಿ ಸಚಿವ, ಮಲ್ಲೇಶ್ವರಂ ಬಿಜೆಪಿ ಶಾಸಕ ಡಾ ಸಿ ಎನ್​ ಅಶ್ವತ್ಥ್​ ನಾರಾಯಣ್​ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಐಪಿಸಿ ಕಲಂ 506, 153ರಡಿಯಲ್ಲಿ ಮೈಸೂರು ನಗರದ ದೇವರಾಜ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ಪ್ರಕರಣದಲ್ಲಿ ಅಶ್ವತ್ಥ್​ ನಾರಾಯಣ್​ರೊಬ್ಬರೇ ಆರೋಪಿಯಾಗಿದ್ದಾರೆ.

ಮೈಸೂರು ನಿವಾಸಿಯಾಗಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್​ ಸಮಿತಿ ವಕ್ತಾರ ಎಂ ಸಿ ಲಕ್ಷ್ಮಣ ಕೊಟ್ಟಿರುವ ದೂರು ಅಧರಿಸಿ ಎಫ್​ಐಆರ್​ ದಾಖಲಾಗಿದೆ.

ಫೆಬ್ರವರಿ 15ರಂದು ಮಂಡ್ಯದ ಸಾತನೂರಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡುವಾಗ ಆಗ ಸಚಿವರಾಗಿದ್ದ ಅಶ್ವತ್ಥ್​​ ನಾರಾಯಣ್​ ಅವರು ಟಿಪ್ಪು ಸುಲ್ತಾನನನ್ನು ಉರಿಗೌಡ ಮತ್ತು ನಂಜೇಗೌಡ ಹೇಗೆ ಕೊಂದು ಹಾಕಿದರೋ ಅದೇ ರೀತಿ ಸಿದ್ದರಾಮಯ್ಯರನ್ನು ಹೊಡೆದುಹಾಕಬೇಕೆಂದು ಬಹಿರಂಗವಾಗಿ ಪ್ರಚೋದನಕಾರಿ ಹೇಳಿಕೆ ನೀಡಿದ್ದರು.

ಅಶ್ವತ್ಥ್​ ನಾರಯಣ್​ ಅವರು ಸಿದ್ದರಾಮಯ್ಯನವರ ಕೊಲೆಗೆ ಸುಪಾರಿ ನೀಡುವ ಸಂಶಯ ಇರುತ್ತದೆ

ಎಂದು ಲಕ್ಷ್ಮಣ್​ ಅವರು ದೂರಿನಲ್ಲಿ ಆರೋಪಿಸಿದ್ದಾರೆ.