ಅದಾನಿ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಿ, ಹರಾಜು ಹಾಕಿ -ಮೋದಿ ಸರ್ಕಾರಕ್ಕೆ ಸಲಹೆ

Forbes’ Real-Time Billionaires List

ಕೋಟ್ಯಧಿಪತಿ ಗೌತಮ್​ ಅದಾನಿಯ ವಾಣಿಜ್ಯ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಿ ಆ ಆಸ್ತಿಗಳನ್ನು ಹರಾಜು ಹಾಕಿ 

ಹೀಗೆಂದು ಮಾಜಿ ರಾಜ್ಯಸಭಾ ಸಂಸದರೂ ಆಗಿರುವ ಸುಬ್ರಹ್ಮಣಿಯನ್​ ಸ್ವಾಮಿ ಪ್ರಧಾನಿ ಮೋದಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಹಿಂಡನ್​ಬರ್ಗ್​ ಸಂಶೋಧನ ವರದಿ ಬಳಿಕ ಅದಾನಿ ಕಂಪನಿಯ ಷೇರುಗಳು ಮಾರುಕಟ್ಟೆಯಲ್ಲಿ ಪಾತಾಳಕ್ಕೆ ಕುಸಿದಿವೆ. ಷೇರು ಕುಸಿತದ ನಡುವೆಯೂ ಕೈಗೊಂಡಿದ್ದ ಎಫ್​ಪಿಒ ವಹಿವಾಟನ್ನು ವಹಿವಾಟು ನಡೆದ ಒಂದು ದಿನದಲ್ಲೇ ಅದಾನಿ ಕಂಪನಿ ರದ್ದುಗೊಳಿಸಿದೆ.

2 ಲಕ್ಷ ಕೋಟಿ ರೂಪಾಯಿ ಸಾಲ ಹೊಂದಿರುವ ಅದಾನಿಗೆ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ 21 ಸಾವಿರ ಕೋಟಿ ರೂಪಾಯಿ ಸಾಲ ನೀಡಿದೆ. ಅದಾನಿ ಕಂಪನಿಯಲ್ಲಿ ಎಲ್​ಐಸಿಯೂ ಹೂಡಿಕೆ ಮಾಡಿದ್ದು ಅದಾನಿ ಕಾರಣದಿಂದ ಎಲ್​ಐಸಿ ಷೇರುಗಳೂ ನಷ್ಟ ಅನುಭವಿಸಿವೆ.

LEAVE A REPLY

Please enter your comment!
Please enter your name here