Mangaluru: ಮಂಗಳೂರಲ್ಲಿ ಪತ್ರಕರ್ತ, ಅವರ ಸ್ನೇಹಿತೆಗೆ ನೈತಿಕ ಪೊಲೀಸ್​ಗಿರಿ – ಇಬ್ಬರು ಕಿಡಿಗೇಡಿಗಳ ವಿರುದ್ಧ FIR

ಮಂಗಳೂರಲ್ಲಿ ವರದಿಗಾರ ಮತ್ತು ಅವರ ಸ್ನೇಹಿತೆಗೆ ನೈತಿಕ ಪೊಲೀಸ್​ಗಿರಿ ಹೆಸರಲ್ಲಿ ಕಿರುಕುಳ ನೀಡಿದ ಇಬ್ಬರು ದುಷ್ಕರ್ಮಿಗಳ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಪತ್ರಕರ್ತ ಅಭಿಜಿತ್​ ಜೆ ಕೊಲ್ಪೆ ಅವರು ತಮ್ಮ ಸ್ನೇಹಿತೆಯೊಂದಿಗೆ ರೆಸ್ಟೋರೆಂಟ್​​ ಹೋಗಿ ಬರುತ್ತಿದ್ದಾಗ ಇಬ್ಬರು ಕಿಡಿಗೇಡಿಗಳು ಅವರನ್ನು ಅಡ್ಡಗಟ್ಟಿ ನೈತಿಕ ಪೊಲೀಸ್​ಗಿರಿ ಹೆಸರಲ್ಲಿ ಕಿರುಕುಳ ನೀಡಿದ್ದಾರೆ.

ಪತ್ರಕರ್ತ ಅಭಿಜಿತ್​ ಕೊಲ್ಪೆ ಅವರನ್ನು ಮುಸ್ಲಿಂ ಧರ್ಮಕ್ಕೆ ಸೇರಿದವರು ಎಂದು ಭಾವಿಸಿ ಈ ಇಬ್ಬರೂ ಕಿಡಿಗೇಡಿಗಳು ಅಭಿಜಿತ್​ ಅವರ ಜೊತೆಗೆ ಹಿಂದೂ ಹುಡುಗಿ ಹೋಗಿದ್ದನ್ನು ಆಕ್ಷೇಪಿಸಿದ್ದರು.

ಅಭಿಜಿತ್​ ಕೊಲ್ಪೆ ಮತ್ತು ಅವರ ಸ್ನೇಹಿತೆ ಇಬ್ಬರೂ ಹಿಂದೂ ಧರ್ಮಕ್ಕೆ ಸೇರಿದವರು.

ಜುಲೈ 30ರಂದು ಮಂಗಳೂರು ನಗರದ ಕಾವೂರು ಪೊಲೀಸ್​ ಠಾಣೆಯಲ್ಲಿ ಅಭಿಜಿತ್ ಕೊಲ್ಪೆ ಅವರು ದೂರು ನೀಡಿದ್ದಾರೆ.

ದೂರು ಆಧರಿಸಿ ಇಬ್ಬರು ಕಿಡಿಗೇಡಿಗಳಾದ ಚೇತನ್​ ಕುಮಾರ್​ ಮತ್ತು ನವೀನ್​ ಎಂಬ ಇಬ್ಬರು ದುಷ್ಕರ್ಮಿಗಳ ವಿರುದ್ಧ ಐಪಿಸಿ ಕಲಂ 506, 504ರಡಿ ಎಫ್​​ಐಆರ್​ ದಾಖಲಾಗಿದೆ. ಬಳಿಕ ಇಬ್ಬರೂ ಕಿಡಿಗೇಡಿಗಳನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು.

LEAVE A REPLY

Please enter your comment!
Please enter your name here