ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆಪ್ತನ ಮೇಲೆ ಹಲ್ಲೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಎಂಎಲ್ ಸಿ ಚನ್ನರಾಜ್ ಹಟ್ಟಿಹೊಳಿ ಸ್ಪಷ್ಟನೆ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ನಮ್ಮ ಪಿಎ ಅಲ್ಲಿಗೆ ಹೋಗಿದ್ದು ನಿಜ. ಆದ್ರೆ ಹಲ್ಲೆ ಮಾಡಿದ್ದಾರೆ ಅನ್ನೋದು ಸುಳ್ಳು. ಅಲ್ಲಿಗೆ ನನ್ನ ಪಿಎ ಐಡಿ ಹಾಕಿಕೊಂಡೆ ಹೋಗಿದ್ದ. ಹಲ್ಲೆ ಮಾಡುವವರು ಹಾಗೆ ಮಾಡ್ತಾರಾ? ಎಂದು ಪ್ರಶ್ನೆ ಮಾಡಿದ್ದಾರೆ.
ಅವರೇ ನಮ್ಮವರನ್ನ ಅಲ್ಲಿಗೆ ಕರೆಸಿಕೊಂಡಿದ್ದಾನೆ. ಆಮೇಲೆ ಇಷ್ಟೆಲ್ಲಾ ಸೀನ್ ಕ್ರಿಯೇಟ್ ಮಾಡಿದ್ದಾನೆ ಅಷ್ಟೇ. ಚಾಕು ಹಾಕಿದ್ರೆ ಶರ್ಟ್ ಹರಿಯುತ್ತಿರಲಿಲ್ವೇ? ಆದ್ರೆ ಆತ ಹಾಕಿರುವ ಶರ್ಟ್ ಏನೂ ಆಗಿಲ್ಲ. ಜೇಬು ಮಾತ್ರ ಹರಿದಿದೆ. ಈ ಬಗ್ಗೆ ಅವರೇ ಇಷ್ಟೇಲ್ಲ ಸೀನ್ ಕ್ರಿಯೇಟ್ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.