ಬೆಳ್ತಂಗಡಿ: ಕೊರಗಜ್ಜ ಕಟ್ಟೆಗೆ ಬೆಂಕಿ, ಐವರ ಮೇಲೆ FIR, ಓರ್ವ ಅರೆಸ್ಟ್​

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಾಡಾರು ಬಜಿರೆ ಗ್ರಾಮದಲ್ಲಿ ಕೊರಗಜ್ಜ ಕಟ್ಟೆಗೆ ಬೆಂಕಿ ಹಾಕಿದ ಸಂಬಂಧ ಐವರ ಮೇಲೆ ಪ್ರಕರಣ ದಾಖಲಾಗಿದೆ.

ಕೃತ್ಯ ಸಂಬಂಧ ಬಾಡಾರು ನಿವಾಸಿ 48 ವರ್ಷದ ಹರೀಶ್​ ಪೂಜಾರಿಯನ್ನು ಬಂಧಿಸಲಾಗಿದೆ.  ಡಾ ರಾಜೇಶ್​, ರಮೇಶ್​ ಕುಡ್ಮೇರ್​, ಓಂ ಪ್ರಸಾದ್​ ಮತ್ತು ಪ್ರಶಾಂತ್​ ಬಂಟ್ವಾಳ ಎಂಬವರ ಮೇಲೂ ಪ್ರಕರಣ ದಾಖಲಾಗಿದೆ.

ಸರ್ಕಾರಿ ಭೂಮಿಯಲ್ಲಿರುವ ಕೊರಗಜ್ಜ ಕಟ್ಟೆಗೆ ಬಾಡಾರು ಕೊರಗಕಲ್ಲು ಶ್ರೀ ಕೊರಗಜ್ಜ ಸೇವಾ ಟ್ರಸ್ಟ್​ ಮೂಲಕ ಪೂಜೆ ನಡೆಸಲಾಗುತ್ತಿತ್ತು. ಈ ಕಟ್ಟೆಗೆ ಹರೀಶ್​ ಪೂಜಾರಿ ಪೂಜೆ ಮಾಡುತ್ತಿದ್ದ. ಆದರೆ ಕಟ್ಟೆ ಇದ್ದ ಭೂಮಿಗೆ ಸಂಬಂಧಿಸಿದಂತೆ ವಿವಾದ ಉಂಟಾಗಿ ಕಟ್ಟೆಯನ್ನು ಒಡೆದುಹಾಕಿ ಹೊಸ ಕಟ್ಟೆ ಕಟ್ಟಲು ಹರೀಶ್​ ಪೂಜಾರಿ ಯತ್ನಿಸಿದ್ದ.

ಆದರೆ ಇದಕ್ಕೆ ಟ್ರಸ್ಟ್​ನ ಅಧ್ಯಕ್ಷ ಪ್ರದೀಪ್​ ಕುಮಾರ್​ ಮತ್ತು ಭಕ್ತರು ಆಕ್ಷೇಪಿಸಿದ್ದರು. ಈ ದ್ವೇಷದಿಂದಲೇ ಹರೀಶ್​ ಪೂಜಾರಿ ಕಟ್ಟೆಗೆ ಬೆಂಕಿ ಹಾಕಿದ್ದ ಎಂದು ಪ್ರದೀಪ್​ ದೂರು ನೀಡಿದ್ದರು.

ಬಂಧಿತ ಹರೀಶ್​ ಪೂಜಾರಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸ್ಥಳಕ್ಕೆ ತಹಶೀಲ್ದಾರ್​ ಸುರೇಶ್​ ಕುಮಾರ್​, ಡಿವೈಎಸ್​ಪಿ ಗಾನ ಕುಮಾರ್​ ಮತ್ತು ಎಸ್​ ಸೌಮ್ಯ ಭೇಟಿ ನೀಡಿ ಪರಿಶೀಲಿಸಿದರು.

ಈ ಕಟ್ಟೆ ಸರ್ಕಾರಿ ಭೂಮಿಯಲ್ಲಿರುವ ಹಿನ್ನೆಲೆಯಲ್ಲಿ ಕಟ್ಟೆಗೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

LEAVE A REPLY

Please enter your comment!
Please enter your name here