ರಾಜ್ಯಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಮಾಜಿ ಕೇಂದ್ರ ಸಚಿವ ಜೈರಾಂ ರಮೇಶ್ ಅವರನ್ನು ಮತ್ತೆ ಆಯ್ಕೆ ಮಾಡಿ ಕಳುಹಿಸುವ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರದ ವಿರುದ್ಧ ರಾಜ್ಯದ ಕಾಂಗ್ರೆಸ್ ನಾಯಕರೇ ಸಿಡಿದೆದ್ದಿದ್ದಾರೆ
ಬೆಂಗಳೂರಲ್ಲಿ ಮಾತಾಡಿರುವ ಕೆಪಿಸಿಸಿ ಉಪಾಧ್ಯಕ್ಷ ಆರ್ ವಿ ಸುದರ್ಶನ್
ಜೈರಾಂ ರಮೇಶ್ ಅವರನ್ನು ರಾಜ್ಯಸಭೆಗೆ ಅಭ್ಯರ್ಥಿ ಮಾಡಿದ್ದಾರೆ.ಆ ಮಾಹಿತಿ ನನಗೆ ಗೊತ್ತಿರಲಿಲ್ಲ. ಆದರೆ ರಾಜ್ಯಕ್ಕೆ ಅವರ ಕೊಡುಗೆ ಏನು…? ರಾಜ್ಯದ ಸಮಸ್ಯೆಗಳ ಬಗ್ಗೆ ರಾಜ್ಯಸಭೆಯಲ್ಲಿ ಗಮನ ಸೆಳೆಯುವ ಪ್ರಯತ್ನವನ್ನೇನಾದರೂ ಮಾಡಿದ್ದಾರಾ..? ಅವರ ರಾಜ್ಯಸಭಾ ಸದಸ್ಯತ್ವದ ಅನುದಾನ ಯಾರಿಗೆ ಕೊಟ್ಟಿದ್ದಾರೆ. ಅವರು ಚಿಕ್ಕಮಗಳೂರು ಮೂಲದವರು ಇರಬಹುದು ಆದರೆ ಅದರಿಂದ ಏನು ಉಪಯೋಗ..?
ಎಂದು ವಿ ಆರ್ ಸುದರ್ಶನ್ ಪ್ರಶ್ನಿಸಿದ್ದಾರೆ.
ಹಲವಾರು ಸಮರ್ಥರು ರಾಜ್ಯದಲ್ಲಿದ್ದು ಹೈಕಮಾಂಡ್ ಅಂಥವರಿಗೆ ಮಣೆ ಹಾಕಬೇಕು. ಇಲ್ಲವಾದರೆ ಉದಯಪುರದಲ್ಲಿ ನಡೆದ ಪಕ್ಷದ ಚಿಂತನ ಮಂಥನದಿಂದ ಏನು ಪ್ನರಯೋಜನಾ..? ಪಕ್ಷದ ಉಸ್ತುವಾರಿ ರಂದೀಪ್ ಸುರ್ಜೆವಾಲ, ಸಿದ್ದರಾಮಯ್ಯ, ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ ಇವರು ಇದನ್ನ ಗಮನಕ್ಕೆ ತಗೆದುಕೊಳ್ಳಬೇಕು ಎಂದು ವಿ ಆರ್ ಸುದರ್ಶನ್ ಹೇಳಿದ್ದಾರೆ.
ರಾಜ್ಯಸಭಾ ಸದಸ್ಯರಾಗಿ ಜೈರಾಂ ರಮೇಶ್ ಅವರಿಗೆ ರಾಜ್ಯದ ಶಾಸಕರ ಜೊತೆ ಸಂಪರ್ಕವೇ ಇಲ್ಲ. ನಾವು ಜನಪರ ಇದ್ದೇವೆ ಅಂತಾ ಡಿ.ಕೆ. ಶಿವಕುಮಾರ್ ಹೇಳುತ್ತಾರೆ. ಹೀಗಾದರೆ ನಿಮ್ಮ ಜನಪರ ನಿಲುವು ಇದೇನಾ ಅಂತಾ ನಾವು ಪ್ರಶ್ನೆ ಮಾಡಬೇಕಾಗುತ್ತದೆ.
ಪಕ್ಷದಲ್ಲಿ ಸಾಕಷ್ಟು ಜನ ಇದೇ ಅಭಿಪ್ರಾಯ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ನಾವು ಸಾರ್ವಜನಿಕ ಮಹತ್ವದ ವಿಷಯಗಳನ್ನು ಮಾತನಾಡುತ್ತಾ ಹೋಗುತ್ತೇವೆ. ಪಕ್ಷ ಬಲವರ್ಧನೆ ಆಗಬೇಕಾದರೆ ಮೌನವಾಗಿದ್ದರೆ ಆಗುವುದಿಲ್ಲ.ಪಕ್ಷದಲ್ಲಿ ಆಂತರಿಕವಾಗಿ, ಪಕ್ಷದ ವೇದಿಕೆಯಲ್ಲಿ, ಸಾರ್ವಜನಿಕ ವೇದಿಕೆಯಲ್ಲಿ ಕೂಡಾ ಮಾತನಾಡಬೇಕಾಗುತ್ತದೆ.
ಎಂದು ವಿ ಆರ್ ಸುದರ್ಶನ್ ಅವರು ಕಿಡಿಕಾರಿದ್ದಾರೆ.
68 ವರ್ಷದ ಜೈರಾಂಶ ರಮೇಶ್ ಅವರು 2004ರಿಂದ 2016ರವರೆಗೆ ಆಂಧ್ರ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆ ಆಗಿ ಯುಪಿಎ ಮೊದಲ ಮತ್ತು ಎರಡನೇ ಅವಧಿಯಲ್ಲಿ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಸಚಿವರಾಗಿದ್ದರು.
2016ರಲ್ಲಿ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆ ಆದರು. ಇವರ ಅವಧಿ ಜೂನ್ನಲ್ಲಿ ಅಂತ್ಯ ಆಗಲಿದೆ.