ಕಾಂಗ್ರೆಸ್​ ನಾಯಕನ ಅಕಾಲಿಕ ಸಾವಿನ ಆಘಾತ – ಪ್ರಜಾಧ್ವನಿ ಯಾತ್ರೆ ರದ್ದು, ಮೈಸೂರಿನತ್ತ ಸಿದ್ದರಾಮಯ್ಯ

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್​ ಧ್ರುವನಾರಾಯಣ್​ ಅಕಾಲಿಕ ನಿಧನದಿಂದ ಕಾಂಗ್ರೆಸ್​ ಆಘಾತಕ್ಕೊಳಗಾಗಿದೆ. 

ಇವತ್ತು ನಡೆಯಬೇಕಿದ್ದ ಪ್ರಜಾಧ್ವನಿಯಾತ್ರೆಯನ್ನು ಕಾಂಗ್ರೆಸ್​ ರದ್ದುಗೊಳಿಸಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಆರ್. ಧ್ರುವನಾರಾಯಣ ಅವರ ನಿಧನದ ಹಿನ್ನೆಲೆಯಲ್ಲಿ ಇಂದು ರಾಮನಗರದಲ್ಲಿ ನಡೆಯಬೇಕಿದ್ದ ಪ್ರಜಾಧ್ವನಿ ಯಾತ್ರೆ ರದ್ದು ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ದಾವಣಗೆರೆಯಿಂದ ಮೈಸೂರಿನತ್ತ ಸಿದ್ದರಾಮಯ್ಯ:

ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಇಂದು ಮತ್ತು ನಾಳಿನ ಪ್ರಜಾಧ್ವನಿ ಯಾತ್ರೆಯನ್ನು ಮುಂದೂಡಲಾಗಿದೆ. ಸಿದ್ದರಾಮಯ್ಯ ಅವರು ಇಂದು ದಾವಣಗೆರೆಯಿಂದ ಮೈಸೂರಿಗೆ ಪ್ರಯಾಣ ಬೆಳೆಸಲಿದ್ದಾರೆ.

ಕಾಂಗ್ರೆಸ್​ ಮಾಧ್ಯಮಗೋಷ್ಠಿಯೂ ರದ್ದು:

ಇವತ್ತು ಬೆಳಗ್ಗೆ ನಿಗದಿಯಾಗಿದ್ದ ಕಾಂಗ್ರೆಸ್​ ಮಾಧ್ಯಮಗೋಷ್ಠಿಯನ್ನೂ ರದ್ದುಗೊಳಿಸಲಾಗಿದೆ.

LEAVE A REPLY

Please enter your comment!
Please enter your name here