ಎಸ್ಸಿ/ ಎಸ್ಟಿಗಳನ್ನು ಊಟ ಬಡಿಸಲು ಬಿಡಬೇಡಿ, ಮೈಲಿಗೆಯಾಗುತ್ತೆ, ಅವರಿಗೆ ಬೇರೆ ಕೆಲಸಕ್ಕೆ ಕೊಡಿ ಎಂದು ಹೇಳಿ ಜಾತಿ ನಿಂದನೆ ಮಾಡಿದರು
ಎಂಬ ಆರೋಪದಡಿ ಕಾರ್ಕಳ ಬಿಜೆಪಿ ಕಾರ್ಯಕರ್ತೆ ರಮಿತ ಶೈಲೇಂದ್ರ ಕುಮಾರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಐಪಿಸಿ ಸೆಕ್ಷನ್ 341, 504 ಮತ್ತು ಎಸ್ಸಿಎಸ್ಟಿ ದೌರ್ಜನ್ಯ ತಡೆ ಕಾಯ್ದೆ 3(1), 3(2)ರ ಅಡಿಯಲ್ಲಿ ಕಾರ್ಕಳ ನಗರ ಠಾಣೆಯಲ್ಲಿ ಗುರುವಾರ ಎಫ್ಐಆರ್ ದಾಖಲಾಗಿದೆ.
ADVERTISEMENT
ಕಾರ್ಕಳ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಸ್ವಯಂಸೇವಕಿಯಾಗಿ ಭಾಗಿ ಆಗಿದ್ದ ವೇಳೆ ಬಿಜೆಪಿ ಕಾರ್ಯಕರ್ತೆ ರಮಿತಾ ಶೈಲೇಂದ್ರ ಜಾತಿ ನಿಂದನೆ ಮಾಡಿದ್ದಾರೆ ಕಾರ್ಕಳ ಪುರಸಭೆ ಸದಸ್ಯೆ ಪ್ರತಿಮಾ ರಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಮಾರ್ಚ್ 12ರಂದು ಜೀರ್ಣೋದ್ಧಾರ ಕಾರ್ಯಕ್ರಮದ ಭೋಜನಾಲಯದಲ್ಲಿ ಸಮಿತಿ ತಮಗೆ ನೀಡಿದ್ದ ಕೆಲಸವನ್ನು ಮಾಡುವ ವೇಳೆ ಸಾರ್ವಜನಿಕರ ಎದುರಲ್ಲಿ ಎಸ್ಸಿ/ ಎಸ್ಟಿಗಳನ್ನು ಊಟ ಬಡಿಸಲು ಬಿಡಬೇಡಿ, ಮೈಲಿಗೆಯಾಗುತ್ತೆ, ಅವರಿಗೆ ಬೇರೆ ಕೆಲಸಕ್ಕೆ ಕೊಡಿ ಎಂದು ಹೇಳಿ ಸಾರ್ವಜನಿಕವಾಗಿ ಜಾತಿ ನಿಂದಿಸಿ ಅವಮಾನ ಮಾಡಿದರು. ಈ ವೇಳೆ ನಾನು ಆಕ್ಷೇಪಣೆ ಮಾಡಿದ್ದು ದೇವಸ್ಥಾನದ ಕಾರ್ಯಕ್ರಮವಾಗಿದ್ದರಿಂದ ಸುಮ್ಮನಿದೆ.
ಆದರೆ ಮಾರ್ಚ್ 14ರಂದು ದೂರವಾಣಿ ಮೂಲಕ ಮತ್ತು ರಸ್ತೆಯಲ್ಲಿ ಅಡ್ಡಗಟ್ಟಿ
ನಾನು ಹೇಳಿದ್ದು ಹೌದು, ಎಲ್ಲಿ ಬೇಕಾದರೂ ನೀನು ದೂರು ಕೊಡು. ನೀನು ಯಾವುದೇ ದೂರು ನೀಡಿದರೂ ನಾನು ಹೆದರುವುದಿಲ್ಲ. ಏನು ಬೇಕಾದರೂ ಮಾಡು, ಯಾರನ್ನೂ ಬೇಕಾದರೂ ಕರೆಸಿಕೋ, ನಿನ್ನನ್ನು ಸುಮ್ಮನೆ ಬಿಡುವುದಿಲ್ಲ
ಎಂದು ರಮಿತಾ ಶೈಲೇಂದ್ರ ತಮಗೆ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಪ್ರತಿಮಾ ರಾಣೆ ಆರೋಪಿಸಿದ್ದಾರೆ.
ಮಾ್ರ್ಚ್ 15ರವರೆಗೆ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮ ಇದ್ದಿದ್ದರಿಂದ ಕಾರ್ಯಕ್ರಮಕ್ಕೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ದೂರನ್ನು ಕೊಟ್ಟಿರಲಿಲ್ಲ
ಬೆಂಗಳೂರು ಮತ್ತು ಮೈಸೂರು (Bengaluru-Mysuru Expressway) ಎಕ್ಸ್ಪ್ರೆಸ್ ವೇನಲ್ಲಿ ಪ್ರಯಾಣಿಸುವ ವಾಹನ ಸವಾರರೇ ಎಚ್ಚರ. ಎಕ್ಸ್ಪ್ರೆಸ್ವೇನಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ರೆ ನೀವು ಕ್ಯಾಮರಾ ಕಣ್ಣಿಗೆ ಬೀಳ್ತೀರಿ,...
ಲೋಕಸಭಾ ಚುನಾವಣೆಯಲ್ಲಿ (Loksabha Election) ಇನ್ನೂ ಮೂರು ಹಂತದಲ್ಲಿ 163 ಕ್ಷೇತ್ರಗಳಿಗೆ ಚುನಾವಣೆ ಬಾಕಿ ಇರುವ ಹೊತ್ತಲ್ಲಿ ಕಾಂಗ್ರೆಸ್ ಮತ್ತೊಂದು ಮಹತ್ವದ ಘೋಷಣೆ ಮಾಡಿದೆ. ಲೋಕಸಭಾ ಚುನಾವಣೆಯಲ್ಲಿ...
ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಓಡಿಹೋಗಿ ಇವತ್ತಿಗೆ 20 ದಿನ ದಿನ. ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ಮಹಿಳೆಯನ್ನು...
ಬಿಹಾರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ನಿಧನರಾಗಿದ್ದಾರೆ. ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರಿಗೆ 72 ವರ್ಷ ವಯಸ್ಸಾಗಿತ್ತು. ದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಏಮ್ಸ್ನಲ್ಲಿ...