Friday, May 23, 2025
Every Minute News
  • News
  • Cinema
  • Sports
  • Health
  • Lifestyle
  • Gallery
  • Special
No Result
View All Result
  • News
  • Cinema
  • Sports
  • Health
  • Lifestyle
  • Gallery
  • Special
No Result
View All Result
Every Minute News
No Result
View All Result
ADVERTISEMENT
Home News

ದೇವರಿಗೆ ಜ್ವರ ಬಂದಿದೆ.. 15 ದಿನ ದರ್ಶನಗಳಿಲ್ಲ..! ಅಚ್ಚರಿಯಾದರೂ ಇದು ನಿಜ..!

PratikshanaNews by PratikshanaNews
20th June 2023
in News, Special
0
ದೇವರಿಗೆ ಜ್ವರ ಬಂದಿದೆ.. 15 ದಿನ ದರ್ಶನಗಳಿಲ್ಲ..! ಅಚ್ಚರಿಯಾದರೂ ಇದು ನಿಜ..!
0
SHARES
0
VIEWS
Share on FacebookShare on Twitter

ಇದು ಅಚ್ಚರಿಯಾದರೂ ನಿಜ..

ಪುರಿ ಜಗನ್ನಾಥನಿಗೆ… ಆತನ ಅಣ್ಣ ಬಲರಾಮನಿಗೆ, ತಂಗಿ ಸುಭದ್ರೆಗೆ ಜ್ವರ ಬಂದಿದೆ.. ಅದಕ್ಕೆ ಈ ದೇವಾಲಯದಲ್ಲಿ 15 ದಿನ ದೇವರ ದರ್ಶನ ನಿಲ್ಲಿಸಲಾಗಿದೆ.

ಇದು ನಿಜ.. ಪ್ರತಿ ವರ್ಷ ಪುರಿ ಜಗನ್ನಾಥನಿಗೆ ಜ್ವರ ಬರುತ್ತೆ.. ಜ್ವರದಿಂದ ದೇವರು ಚೇತರಿಸಿಕೊಳ್ಳುವವರೆಗೂ ದರ್ಶನಗಳಿರಲ್ಲ. ಪೂಜೆಗಳು ಇರಲ್ಲ.. ಜ್ವರ ಇಳಿದ ಮೇಲೆಯೇ ಎಲ್ಲಾ..

ಜ್ಯೇಷ್ಠ ಮಾಸ ಹುಣ್ಣಿಮೆ ದಿನ ( ಜೂನ್ 4) ಜಗನ್ನಾಥನು ಹುಟ್ಟಿದ ದಿನ ಎಂಬುದು ಭಕ್ತರ ನಂಬಿಕೆ. ಜಗನ್ನಾಥನ ರಥೋತ್ಸವ ಜೂನ್ 20ರಿಂದ ಶುರುವಾಗುತ್ತದೆ.

ಜಗನ್ನಾಥಸ್ವಾಮಿಯ ಹುಟ್ಟಿದ ದಿನವನ್ನು ಪುರಿಯಲ್ಲಿ ಸ್ನಾನಯಾತ್ರೆ ಇಲ್ಲವೇ ಸ್ನಾನ ಹುಣ್ಣಿಮೆ ಎಂದು ಕರೆಯಲಾಗುತ್ತದೆ.

ಆ ದಿನ ಪುರಿ ಮಂದಿರ ಮೂಲ ವಿರಾಟ್ ವಿಗ್ರಹಕ್ಕೆ 108 ಕೊಡಗಳಿಂದ ಅಭಿಷೇಕ ಮಾಡುತ್ತಾರೆ. ಅಭಿಷೇಕದ ನಂತರ ದೇವರನ್ನು ಗಜವೇಷಧಾರಿಯನ್ನಾಗಿ ಅಲಂಕರಿಸಲಾಗುತ್ತದೆ.

ಆದರೆ,  108 ಕೊಡಗಳ ನೀರಿಂದ ದೇವರಿಗೆ ಅಭಿಷೇಕ ಮಾಡುವ ವೈದಿಕರು, ಪುರಿ ಜಗನ್ನಾಥನಿಗೆ ಜ್ವರ ಬಂದಿದೆ ಎಂದು ಘೋಷಿಸುತ್ತಾರೆ

ಪುರಿ ದೇಗುಲದ ಪ್ರಾಂಗಣದಲ್ಲಿ ಚಿನ್ನದ ಬಾವಿಯೊಂದಿದೆ. ಶೀತಲಾದೇವಿ ಆ ಬಾವಿಯನ್ನು ಕಾಪಾಡುತ್ತಾಳೆ ಎಂಬುದು ನಂಬಿಕೆ.

ಈ ಬಾವಿಯನ್ನು ವರ್ಷಕ್ಕೊಮ್ಮೆ ತೆರೆದು ಅದರಲ್ಲಿನ ಪವಿತ್ರ ಜಲದಿಂದ ದೇವರಿಗೆ ಅಭಿಷೇಕ ಮಾಡುತ್ತಾರೆ.

ಆ ದಿನ ಗರ್ಭಗುಡಿಯಿಂದ ಮೂಲ ಮೂರ್ತಿಗಳನ್ನು ತಂದು ಸ್ನಾನವೇದಿ ಎಂಬ ಕಡೆ ಭಕ್ತರಿಗೆ ಕಾಣುವಂತೆ ಇರಿಸಿ ಅಭಿಷೇಕ ಮಾಡುತ್ತಾರೆ.

ನೀರಲ್ಲಿ ನೆಂದರೇ ನಮಗೂ ನೆಗಡಿ ಆಗುತ್ತದೆ ಅಲ್ವಾ.. ಹಾಗೆಯೇ ದೇವರಿಗೂ ಕೂಡ. ಆಗ ನಮಗೆ ಮಾಡಿದಂತೆ, ದೇವರ ಮೇಲಿನ ಆಭರಣಗಳನ್ನು ತೆಗೆದು ಮಫ್ಲರ್ ಸುತ್ತಲಾಗುತ್ತದೆ.

ಗಭಗುಡಿಯ ರತ್ನವೇದಿಗೆ ಎಡ ಭಾಗದಲ್ಲಿರುವ ಖಾಲಿ ಸ್ಥಳದಲ್ಲಿ ವಿಗ್ರಹಗಳನ್ನು ಮಲಗಿಸಲಾಗುತ್ತದೆ.

15 ದಿನ ಆರೈಕೆ ಮಾಡಲಾಗುತ್ತದೆ. ಈ ಅವಧಿಯಲ್ಲಿ ದೇವರಿಗೆ ನೈವೇದ್ಯವನ್ನು ಕೊಡಲ್ಲ. ನೈವೇದ್ಯದ ಬದಲಿಗೆ ದೇವರಿಗೆ ಆಯುರ್ವೇದ ಔಷಧಿಗಳನ್ನು ಇಡಲಾಗುತ್ತದೆ.

ಈ 15 ದಿನಗಳನ್ನು ಅನಸಾರ ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ಭಕ್ತರಿಗಾಗಿ ಗರ್ಭಗುಡಿಯಲ್ಲಿ ಜಗನ್ನಾಥನ ಪೇಂಟಿಂಗ್‌ಗಳನ್ನು ಪ್ರದರ್ಶಿಸುತ್ತಾರೆ.

15 ದಿನಗಳ ಬಳಿಕ ದೇವರು ಜ್ವರದಿಂದ ಚೇತರಿಸಿಕೊಂಡಿದ್ದಾರೆ ಎಂದು ರಾಜವೈದ್ಯ ಪ್ರಕಟಿಸುತ್ತಾರೆ

ಅಭಿಷೇಕದಿಂದ ವಿಗ್ರಹಗಳ ಕಾಂತಿ ಬದಲಾಗಿರುತ್ತದೆ.. ಹೀಗಾಗಿ ಹೊಸ ಬಣ್ಣಗಳನ್ನು ವಿಗ್ರಹಗಳಿಗೆ ಬಳಿಯುತ್ತಾರೆ.

ಪುರಿ ಜಗನ್ನಾಥ ಮಂದಿರದಲ್ಲಿ ಇರುವ ದೇವರನ್ನು ಭಕ್ತರು ವಿಗ್ರಹ ಎಂದು ಭಾವಿಸಲ್ಲ.. ವಿಗ್ರಹವನ್ನು ದೇವರ ಶರೀರ ಎಂದು ಭಾವಿಸುತ್ತಾರೆ..

ವಿಗ್ರಹದಲ್ಲಿ ಇರಿಸಿರುವ ರಹಸ್ಯ ವಸ್ತುವನ್ನು ಹೃದಯ, ಆತ್ಮ ಎಂದು ಭಕ್ತರು ನಂಬುತ್ತಾರೆ.

ಈ ದೇವರ ವಿಗ್ರಹಕ್ಕೆ ನಿತ್ಯ ಬೆಳಗ್ಗೆ ಹಲ್ಲುಜ್ಜಲಾಗುತ್ತದೆ(ದಂತಧಾವನಂ).

ಬುಧವಾರ ಸಂಜೆ ಹೊತ್ತಲ್ಲಿ ವಿಗ್ರಹಕ್ಕೆ ಶೇವಿಂಗ್ (ಕ್ಷೌರಕರ್ಮ) ಮಾಡಲಾಗುತ್ತದೆ.

ಸಾಮಾನ್ಯವಾಗಿ ಹಿಂದೂ ನಂಬಿಕೆ ಪ್ರಕಾರ ದೇವಾಲಯದಲ್ಲಿ ಒಮ್ಮೆ ಪ್ರತಿಷ್ಠಾಪಿಸಿದ ವಿಗ್ರಹವನ್ನು ಸ್ಥಾನಪಲ್ಲಟ ಮಾಡಲ್ಲ. ಆದರೆ, ಇಲ್ಲಿ ಹಾಗಲ್ಲ..

ಪುರಿ ಮಂದಿರದಲ್ಲಿ ಪ್ರತಿಷ್ಠಾಪಿಸುವುದು ಮರದಿಂದ ಕೆತ್ತನೆ ಮಾಡಿದ ವಿಗ್ರಹ.

12ರಿಂದ 19ವರ್ಷಗಳಿಗೊಮ್ಮೆ ಹಳೆಯ ವಿಗ್ರಹವನ್ನು ತೆಗೆದು ಹೊಸ ವಿಗ್ರಹವನ್ನು ಪ್ರತಿಷ್ಠಾಪಿಸುತ್ತಾರೆ.

ವಿಶೇಷ ಅಂದರೇ, ಪುರಿಯ ಮೂಲ ವಿರಾಟ್ ವಿಗ್ರಹಕ್ಕೆ ಕೈ-ಕಾಲುಗಳು ಇರಲ್ಲ.

ವಿಗ್ರಹ ಬದಲಿಸುವಾಗ ವೈದಿಕರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹಳೆ ವಿಗ್ರಹದಲ್ಲಿರುವ ರಹಸ್ಯ ವಸ್ತುವನ್ನು ಹೊಸ ವಿಗ್ರಹದಲ್ಲಿ ಇರಿಸುತ್ತಾರೆ.

ಇದನ್ನು ಸಾಕ್ಷತ್ ಶ್ರೀಕೃಷ್ಣನ ಹೃದಯ ಎಂದೇ ಹೇಳಲಾಗುತ್ತದೆ.

ಸಾಮಾನ್ಯವಾಗಿ ಒಂದೇ ರಥವನ್ನು ಹತ್ತಾರು ವರ್ಷಗಳ ಕಾಲ ಎಲ್ಲಾ ದೇವಾಲಯಗಳಲ್ಲಿ ಬಳಸುತ್ತಾರೆ.

ಆದರೆ, ಇಲ್ಲಿ ಹಾಗಲ್ಲ. ವರ್ಷಕ್ಕೊಂದು ರಥ ತಯಾರಿಸಿ ಅದರಲ್ಲೇ ದೇವರ ಮೆರವಣಿಗೆ ಮಾಡಲಾಗುತ್ತದೆ.

ಈ ರಥದ ಹೆಸರು ನಂದಿ ಘೋಷ. 44 ಅಡಿ 2 ಅಂಗುಲ ಎತ್ತರವಿರುತ್ತದೆ. ಕಂಪು ಮತ್ತು ಹರಿಷಿಣದ ಬಣ್ಣವನ್ನು ಹೊಂದಿರುತ್ತದೆ.

ಸಾಮಾನ್ಯವಾಗಿ ಯಾವುದೇ ದೇವಾಲಯ ಆಗಿರಲಿ.. ಮೂಲ ವಿರಾಟ್ ವಿಗ್ರಹವನ್ನು ಹೊರತೆಗೆಯಲ್ಲ. ಉತ್ಸವ ಮೂರ್ತಿಗಳನ್ನೇ ಮೆರವಣಿಗೆ ಮಾಡುತ್ತಾರೆ.

ಆದರೆ, ಇಲ್ಲಿ ಹಾಗಲ್ಲ. ಮೂಲ ವಿರಾಟ್ ವಿಗ್ರಹವನ್ನೇ ರಥಯಾತ್ರೆಯಲ್ಲಿ ಮೆರವಣಿಗೆ ಮಾಡುತ್ತಾರೆ.

ADVERTISEMENT
ADVERTISEMENT
  1. Daymand Satta
  2. Diamond Exchange 9
  3. Betln Exchange
  4. Daimand Satta Com
  5. Satsport Exchange
Tags: #GodFever#GodsuffersFromFever#NoDarshan#PuriJagannath
ADVERTISEMENT
Previous Post

ಮತ್ತೆ ಡ್ರೋಣ್​ ಹಾರಿಸಿದ ಪ್ರತಾಪ್​ – ರೈತರ ಜಮೀನಿಗೆ ಔಷಧಿ ಸಿಂಪಡಣೆ

Next Post

ಸುಳ್ಳು ಸುದ್ದಿ ಹಬ್ಬಿಸುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ: ಸಿಎಂ ಸಿದ್ದರಾಮಯ್ಯ ಖಡಕ್​ ಸೂಚನೆ

Related Posts

ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ
News

ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ

by PratikshanaNews
19th February 2025
ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ
News

ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ

by PratikshanaNews
18th February 2025
ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌
News

ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌

by PratikshanaNews
3rd January 2025
ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!
News

ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!

by PratikshanaNews
3rd January 2025
ಬೆಂಗಳೂರು ಮೂಲದ ಕೋ ಆಪರೇಟಿವ್‌ ಬ್ಯಾಂಕ್‌ ಪುಣೆ ಮೂಲದ ಬ್ಯಾಂಕ್‌ನೊಂದಿಗೆ ವಿಲೀನ
News

ಬೆಂಗಳೂರು ಮೂಲದ ಕೋ ಆಪರೇಟಿವ್‌ ಬ್ಯಾಂಕ್‌ ಪುಣೆ ಮೂಲದ ಬ್ಯಾಂಕ್‌ನೊಂದಿಗೆ ವಿಲೀನ

by PratikshanaNews
2nd January 2025
33 ಡಿವೈಎಸ್ಪಿ, 132 ಪೊಲೀಸ್ ಇನ್ಸ್‌ಪೆಕ್ಟರ್​ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ
News

ಹೊಸ ವರ್ಷದ 2ನೇ ದಿನದಲ್ಲಿ 4 ಐಎಎಸ್‌ ಅಧಿಕಾರಿಗಳ ವರ್ಗಾವಣೆ

by PratikshanaNews
2nd January 2025
Pic Courtesy: Adi931 Bus Photography
News

ಕೆಎಸ್‌ಆರ್‌ಟಿಸಿ ನೌಕರರಿಗೂ 180 ದಿನಗಳ ಶಿಶುಪಾಲನಾ ರಜೆ ಮಂಜೂರು

by PratikshanaNews
2nd January 2025
ವಿಧಾನಸಭೆ ಮಾಜಿ ಸಭಾಧ್ಯಕ್ಷ ರಮೇಶ್‌ ಕುಮಾರ್‌ಗೆ ಕರ್ನಾಟಕ ಹೈಕೋರ್ಟ್‌ ಆಘಾತ
News

ವಿಧಾನಸಭೆ ಮಾಜಿ ಸಭಾಧ್ಯಕ್ಷ ರಮೇಶ್‌ ಕುಮಾರ್‌ಗೆ ಕರ್ನಾಟಕ ಹೈಕೋರ್ಟ್‌ ಆಘಾತ

by PratikshanaNews
2nd January 2025
Next Post
ಸುಳ್ಳು ಸುದ್ದಿ ಹಬ್ಬಿಸುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ: ಸಿಎಂ ಸಿದ್ದರಾಮಯ್ಯ ಖಡಕ್​ ಸೂಚನೆ

ಸುಳ್ಳು ಸುದ್ದಿ ಹಬ್ಬಿಸುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ: ಸಿಎಂ ಸಿದ್ದರಾಮಯ್ಯ ಖಡಕ್​ ಸೂಚನೆ

ADVERTISEMENT

Trend News

ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ

by PratikshanaNews
19th February 2025
0
ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ
News

ಮಹಾಕುಂಭದಲ್ಲಿ ಭಕ್ತರು ಪವಿತ್ರ ಸ್ನಾನ ಮಾಡುತ್ತಿರುವ ನೀರು ಸ್ನಾನ ಮಾಡುವುದಕ್ಕೂ ಯೋಗ್ಯವಲ್ಲ ಎಂದು ಕೇಂದ್ರ ಸರ್ಕಾರದ ಆಧೀನದಲ್ಲಿ ಬರುವ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಸಲ್ಲಿಸಿದೆ....

Read more

ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ

by PratikshanaNews
18th February 2025
0
ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ
News

ಮುಸಲ್ಮಾನರ ಉಪವಾಸ ತಿಂಗಳು ಆಗಿರುವ ರಂಜಾನ್‌ನಲ್ಲಿ ಇಸ್ಲಾಂ ಧರ್ಮಕ್ಕೆ ಸೇರಿದ ರಾಜ್ಯ ಸರ್ಕಾರಿ ನೌಕರರು ಮತ್ತು ಗುತ್ತಿಗೆ ನೌಕರರಿಗೆ ತೆಲಂಗಾಣದಲ್ಲಿರುವ ಕಾಂಗ್ರೆಸ್‌ ಸರ್ಕಾರ ಮತ್ತು ಆಂಧ್ರಪ್ರದೇಶದಲ್ಲಿರುವ ತೆಲುಗು...

Read more

ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌

by PratikshanaNews
3rd January 2025
0
ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌
News

ಆಸ್ಟ್ರೇಲಿಯಾ ವಿರುದ್ಧದ 5ನೇ ಮತ್ತು ಕಡೆಯ ಟೆಸ್ಟ್‌ನ ಮೊದಲ ದಿನವೇ ಭಾರತ ಆಲೌಟ್‌ ಆಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 72.2 ಓವರ್‌ಗಳಲ್ಲಿ 185 ರನ್‌ಗೆ ಟೀಂ ಇಂಡಿಯಾದ ಎಲ್ಲಾ...

Read more

ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!

by PratikshanaNews
3rd January 2025
0
ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!
News

ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ಪತ್ನಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅತ್ಯಂತ ದುಬಾರಿ ಮೊತ್ತದ ಉಡುಗೊರೆಯನ್ನು ನೀಡಿದ್ದಾರೆ. ಜೋ ಬಿಡೆನ್‌ ಪತ್ನಿ ಜಿಲ್‌ ಬಿಡೆನ್‌ಗೆ ಪ್ರಧಾನಿ...

Read more
ADVERTISEMENT
ADVERTISEMENT
Every Minute News

© 2023 Pratikshana News

Navigate Site

  • News
  • Cinema
  • Sports
  • Health
  • Lifestyle
  • Gallery
  • Special

Follow Us

No Result
View All Result
  • News
  • Cinema
  • Sports
  • Health
  • Lifestyle
  • Gallery
  • Special

© 2023 Pratikshana News

error: Content is protected !!